ಹ್ಯೂಬ್ಲೋಟ್ ವಾಚು ಹರಾಜು ಹಾಕಲು ಸಿದ್ಧರಾದ ಸಿದ್ದರಾಮಯ್ಯ!
ಬೆಂಗಳೂರು, ಫೆಬ್ರವರಿ 24 : ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಹ್ಯೂಬ್ಲೋಟ್ ಕಂಪನಿಯ ವಜ್ರ ಖಚಿತ ವಾಚ್ ಅನ್ನು ಹರಾಜು ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. 'ವಾಚ್ ವಿಚಾರ ದೊಡ್ಡದೇನಲ್ಲ. ಸಂಪುಟದ ಎಲ್ಲಾ ಸಚಿವರು ಅವರ ಜೊತೆ ಇದ್ದೇವೆ' ಎಂದು ಸಚಿವ ಎಸ್.ಆರ್.ಪಾಟೀಲ್ ಹೇಳಿದ್ದಾರೆ.
ಬುಧವಾರ
ವಿಧಾನಸೌಧದಲ್ಲಿ
ಮಾಧ್ಯಮಗಳ
ಜೊತೆ
ಮಾತನಾಡಿದ
ಐಟಿ-ಬಿಟಿ
ಸಚಿವ
ಎಸ್.ಆರ್.ಪಾಟೀಲ್
ಅವರು
ವಾಚ್
ಹರಾಜು
ಹಾಕುವ
ಬಗ್ಗೆ
ಸುಳಿವು
ನೀಡಿದ್ದಾರೆ.
'ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ವಾಚ್
ವಿಚಾರದಲ್ಲಿ
ಜನರು
ಮೆಚ್ಚುವ
ನಿರ್ಣಯ
ಕೈಗೊಳ್ಳಲಿದ್ದಾರೆ'
ಎಂದು
ಹೇಳಿದರು.
[ಸಿದ್ದರಾಮಯ್ಯನವರ
ಕೈಗಡಿಯಾರದ
ಟೈಂ
ಲೈನ್]
'ಮುಖ್ಯಮಂತ್ರಿಗಳಿಗೆ ವಾಚ್ ಉಡುಗೊರೆಯಾಗಿ ಬಂದರೆ ಅದನ್ನು ಪಡೆಯುವುದು ತಪ್ಪಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಸೂಟ್ ಪಡೆದಿರಲಿಲ್ಲವೇ?' ಎಂದು ಸಚಿವರು ಮಾಧ್ಯಮದವರನ್ನು ಪ್ರಶ್ನೆ ಮಾಡಿದರು. [ಸಿದ್ದರಾಮಯ್ಯ ವಾಚ್ ಬಗ್ಗೆ ಜಾರಿ ನಿರ್ದೇಶನಾಲಯದ ತನಿಖೆ?]
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿದ್ದ ಹ್ಯೂಬ್ಲೋಟ್ ಕಂಪನಿಯ ವಜ್ರ ಖಚಿತ 50 ರಿಂದ 70 ಲಕ್ಷ ಬೆಲೆಯ ವಾಚ್ ಬಗ್ಗೆ ಮೊದಲು ಮಾತನಾಡಿದ್ದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು. ಈಗ ವಾಚ್ ವಿವಾದ ದೊಡ್ಡದಾಗಿದ್ದು, ಪ್ರತಿಪಕ್ಷದವರು ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಲು ಇದನ್ನೇ ಅಸ್ತ್ರವಾಗಿ ಮಾಡಿಕೊಂಡಿದ್ದಾರೆ. [ಸಿದ್ದರಾಮಯ್ಯ ವಾಚ್ ವಿವಾದ ಎಲ್ಲಿಗೆ ಬಂತು?]
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಚ್ ವಿವಾದದ ಬಗ್ಗೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ವಾಚ್ ಉಡುಗೊರೆ ಬಂದಿದ್ದೇ?, ಖರೀದಿ ಮಾಡಿದ್ದೇ? ಮುಂತಾದ ಅಂಶಗಳ ಬಗ್ಗೆ ತನಿಖೆ ನಡೆಸಿ, ಸತ್ಯಾಂಶವನ್ನು ಬಹಿರಂಗಪಡಿಸಬೇಕು' ಎಂದು ಜೋಶಿ ಮನವಿ ಮಾಡಿದ್ದಾರೆ.