ದಣಿಯದ ಕುಮಾರಸ್ವಾಮಿ, ಚುರುಕುಗೊಳ್ಳುತ್ತಿರುವ ಆಡಳಿತ ಯಂತ್ರ
ಬೆಂಗಳೂರು, ಜುಲೈ 26: ಈ ಹಿಂದೆ ಚುನಾವಣಾ ಪ್ರಚಾರದ ವೇಳೆ ಹೇಳುತ್ತಿದ್ದಂತೆ, ಸಿಎಂ ಕುಮಾರಸ್ವಾಮಿ ಎರಡೆರಡು ಬಾರಿ ಹೃದ್ರೋಗ ಸಂಬಂಧಿ ಚಿಕಿತ್ಸೆಗೆ ಒಳಗಾಗಿದ್ದರೂ, ತಾವೂ ಚುರುಕಾಗಿ ಕೆಲಸ ಮಾಡುತ್ತಾ, ಆಡಳಿತ ಯಂತ್ರಕ್ಕೂ ವೇಗ ಕೊಡುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಅಧಿಕಾರಕ್ಕೆ ಬಂದ ಎರಡು ತಿಂಗಳಿನಿಂದ ಸದಾ ಬ್ಯೂಸಿಯಾಗಿರುವ ಕುಮಾರಸ್ವಾಮಿ, ಸತತ ಸಭೆಗಳನ್ನು ನಡೆಸಿ ಸಚಿವರುಗಳಿಗೆ ಮತ್ತು ಅಧಿಕಾರಿಗಳಿಂದ ಕೆಲಸ ತೆಗೆಸಿಕೊಳ್ಳುತ್ತಿದ್ದಾರೆ. ಬುಧವಾರವೂ (ಜುಲೈ 25) ಹಲವು ಸಭೆ, ಸಮಾರಂಭಗಳಲ್ಲಿ ಭಾಗವಹಿಸಿ ಪ್ರಗತಿ ಪರಿಶೀಲನೆಯ ಜೊತೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವಲ್ಲಿ ಹೆಜ್ಜೆಯನ್ನಿಟ್ಟಿದ್ದಾರೆ. ಕೆಲವೊಂದು ಪ್ರಮುಖಾಂಶಗಳು ಇಂತಿವೆ:
ಉನ್ನತ ಮಟ್ಟದ ಸಭೆಯಲ್ಲಿ ಎಚ್ಡಿಕೆ ಪ್ರಕಟಿಸಿದ ಜನಪರ ಘೋಷಣೆಗಳು
ರಾಜ್ಯದಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳನ್ನು ತ್ವರಿತಗೊಳಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳ ಉನ್ನತ ಮಟ್ಟದ ಸಭೆ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಿತು.
ನವದೆಹಲಿಯ ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಸಾರಸ್ವತ್ ಹಾಗೂ ತಜ್ಞ ಪ್ರಶಾಂತ್ ಶ್ರೀನಿವಾಸ್ ಅವರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರು ಉಪ ನಗರ ರೈಲು ಅಭಿವೃದ್ಧಿ ಕುರಿತು ರೈಲ್ವೆ ಇಲಾಖೆಯ ಪಾಲುದಾರಿಕೆಯೊಂದಿಗೆ ವಿಶೇಷ ಉದ್ದೇಶ ವಾಹಕವನ್ನು ಒಂದು ತಿಂಗಳೊಳಗೆ ಸ್ಥಾಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಮೆಟ್ರೋ ನಿಗಮದೊಂದಿಗೆ ಒಡಂಬಡಿಕೆ ಮಾಡಿಕೊಂಡ ಇನ್ಫೋಸಿಸ್
ಈ
ಸಂಸ್ಥೆಯಲ್ಲಿ
ರೈಲ್ವೆ
ಶೇ.
49
ಹಾಗೂ
ಕರ್ನಾಟಕ
ಸರ್ಕಾರ
ಶೇ.
51ರ
ಪಾಲುದಾರಿಕೆ
ಹೊಂದಿರುತ್ತವೆ.
ಇದಕ್ಕಾಗಿ
ಈಗಾಗಲೇ
350
ಕೋಟಿ
ರೂ.
ಮಂಜೂರಾಗಿದ್ದು,
ರೈಲ್ವೆ
ಇಲಾಖೆಗೆ
ಈಗಾಗಲೇ
100
ಕೋಟಿ
ರೂ.
ಠೇವಣಿ
ಇಡಲಾಗಿದೆ.
ಈ
ಯೋಜನೆಯಡಿ
ಬೆಂಗಳೂರು
ನಗರ
ವ್ಯಾಪ್ತಿಯಲ್ಲಿರುವ
ಸುಮಾರು
444
ಕಿ.ಮೀ.
ರೈಲ್ವೆ
ಮಾರ್ಗದ
ಸದ್ಬಳಕೆಯೊಂದಿಗೆ,
ಕೆಲವೆಡೆ
ವಿಸ್ತರಣೆ,
ಆಟೋಮ್ಯಾಟಿಕ್
ಸಿಗ್ನಲಿಂಗ್
ವ್ಯವಸ್ಥೆಗಳು
ಹಾಗೂ
ರೈಲ್ವೆ
ಮಾರ್ಗಗಳ
ವಿದ್ಯುದೀಕರಣದ
ಮೂಲಕ
ಉಪನಗರ
ರೈಲು
ಸೌಲಭ್ಯ
ಕಲ್ಪಿಸಲಾಗುವುದು.
ರಾಜ್ಯದ ವಿದ್ಯುತ್ ವಲಯದ ಸ್ಥಿತಿ-ಗತಿಗಳ ಕುರಿತು ಮುಖ್ಯಮಂತ್ರಿಗಳ ಸಭೆ
ರಾಜ್ಯದ ವಿದ್ಯುತ್ ವಲಯದ ಸ್ಥಿತಿ-ಗತಿಗಳ ಕುರಿತು ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ನಡೆಸಿ ಪರಿಶೀಲಿಸಿದರು.
ಸೌರ
ವಿದ್ಯುತ್
ಉತ್ಪಾದನೆಯಲ್ಲಿ
ರಾಜ್ಯ
ಈಗಾಗಲೆ
2022
ರ
ಉತ್ಪಾದನಾ
ಸಾಮರ್ಥ್ಯದ
ಗುರಿಯನ್ನು
ತಲುಪಿದೆ.
ಇತರ
ನವೀಕರಿಸಬಹುದಾದ
ಇಂಧನಗಳ
ಉತ್ಪಾದನೆಯಲ್ಲೂ
ಶೀಘ್ರವೇ
ನಿಗದಿತ
ಗುರಿ
ಸಾಧಿಸಲಾಗುವುದು
ಎಂದು
ಅಧಿಕಾರಿಗಳು
ಮಾಹಿತಿ
ನೀಡಿದರು.
ಯಲಹಂಕದಲ್ಲಿ
ಅನಿಲ
ಆಧಾರಿತ
370
ಮೆಗಾವ್ಯಾಟ್
ವಿದ್ಯುತ್
ಘಟಕ
ಸ್ಥಾಪನೆ,
ಶಿವನ
ಸಮುದ್ರದಲ್ಲಿ
ರನ್
ಆಫ್
ದಿ
ರಿವರ್
ಯೋಜನೆ
ಜಾರಿ,
ಸೇರಿ
ಒಟ್ಟು
10ಕ್ಕೂ
ಹೆಚ್ಚು
ವಿದ್ಯುತ್
ಉತ್ಪಾದನಾ
ಘಟಕಗಳ
ಸ್ಥಾಪನೆ
ಹಾಗೂ
ಕಾರ್ಯ
ನಿರ್ವಹಣೆ
ಕುರಿತು
ಸಭೆಯಲ್ಲಿ
ಚರ್ಚಿಸಲಾಯಿತು.
ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್ ಘಟಕ ಉದ್ಘಾಟನೆ
ಜಯದೇವ
ಹೃದ್ರೋಗ
ಆಸ್ಪತ್ರೆ
ಸುಲಭ
ದರದಲ್ಲಿ
ಜನಸಾಮಾನ್ಯರಿಗೆ
ಆರೋಗ್ಯ
ಸೌಲಭ್ಯವನ್ನು
ನೀಡುತ್ತಿದ್ದು,
ಸಂಸ್ಥೆಯು
ಕರ್ನಾಟಕ
ರಾಜ್ಯಕ್ಕೆ
ಅಷ್ಟೇ
ಅಲ್ಲ,
ದೇಶಕ್ಕೇ
ಮಾದರಿ,
ಎಚ್ಡಿಕೆ.
ಮುಖ್ಯಮಂತ್ರಿ
ಕುಮಾರಸ್ವಾಮಿ
ಅವರಿಂದ
ಜಯದೇವ
ಹೃದ್ರೋಗ
ಆಸ್ಪತ್ರೆಯಲ್ಲಿ
ಎಂಆರ್ಐ
ಸ್ಕ್ಯಾನಿಂಗ್
ಘಟಕ
ಉದ್ಘಾಟನೆ.
ಸಂಸ್ಥೆಯ
ಬೆಳವಣಿಗೆಗೆ
ಜಯದೇವ
ಆಸ್ಪತ್ರೆಯ
ನಿರ್ದೇಶಕರಾದ
ಡಾ.
ಸಿ.ಎಸ್.ಮಂಜುನಾಥ್
ಅವರ
ಕೊಡುಗೆ
ಅಪಾರ.
ಜನಸಾಮಾನ್ಯರು
ದುಡ್ಡಿಲ್ಲದೆ
ಬಂದರೂ
ಕೂಡ
ನೇರವಾಗಿ
ದಾಖಲು
ಮಾಡಿಕೊಂಡು
ಚಿಕಿತ್ಸೆ
ಪ್ರಾರಂಭಿಸುವ
ಏಕೈಕ
ಆಸ್ಪತ್ರೆ
ಜಯದೇವ.
ಸರ್ಕಾರಿ
ಆರೋಗ್ಯ
ಸಂಸ್ಥೆಗಳಿಂದ
ಉತ್ತಮವಾದ
ಚಿಕಿತ್ಸೆ
ದೊರೆಯಬೇಕು
ಎಂಬ
ಉದ್ದೇಶದಿಂದ
ಕಿದ್ವಾಯಿಯಲ್ಲಿ
ಬೋನ್
ಮ್ಯಾರೋ
ಟ್ರಾನ್ಸ್ಪ್ಲಾಂಟ್
ಚಿಕಿತ್ಸೆಗೆ
ವ್ಯವಸ್ಥೆ,
ಇದಕ್ಕಾಗಿ
12
ಕೋಟಿ
ರೂ.ಗಳ
ಅನುದಾನ
ಬಿಡುಗಡೆ
ಮಾಡಲಾಗಿದೆ
-
ಕುಮಾರಸ್ವಾಮಿ.
ವೈದ್ಯರಿಗೆ ಎಲ್ಲಾ ರೀತಿಯ ರಕ್ಷಣೆ ಕೊಡಬೇಕಾದುದ್ದು ಸರ್ಕಾರದ ಜವಾಬ್ದಾರಿ
ಅಂಗಕಸಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖ, ವೈದ್ಯರಿಗೆ ಎಲ್ಲಾ ರೀತಿಯ ರಕ್ಷಣೆ ಕೊಡಬೇಕಾದುದ್ದು ಸರ್ಕಾರದ ಜವಾಬ್ದಾರಿ. ವ್ಯಕ್ತಿ ಸತ್ತ ತಕ್ಷಣ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಆಸ್ಪತ್ರೆಗಳ ಮೇಲೆ ದಾಳಿ, ವೈದ್ಯರ ಮೇಲಿನ ಹಲ್ಲೆ ನಡೆಯುತ್ತಿರುವುದು ದುರದೃಷ್ಟಕರ. ಇದನ್ನು ತಡೆಯುವ ನಿಟ್ಟಿನಲ್ಲಿಯೂ ಸರ್ಕಾರ ಕ್ರಮಕೈಗೊಳ್ಳುತ್ತದೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಸಹ ಕ್ರಮ ಕೈಗೊಳ್ಳಲಾಗುವುದು - ಸಿಎಂ ಕುಮಾರಸ್ವಾಮಿ ಅಭಯ.
2018ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಪಡೆದ ಗುರುರಾಜ
2018ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಪಡೆದ ಉಡುಪಿ ಜಿಲ್ಲೆಯ ಗುರುರಾಜ ಪೂಜಾರಿ ಅವರಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು 25 ಲಕ್ಷ ರೂ. ಗಳ ನಗದು ಪುರಸ್ಕಾರ ನೀಡಿ ಗೌರವಿಸಿದರು. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ವಿಧಾನಪರಿಷತ್ ಸದಸ್ಯ ಗೋವಿಂದರಾಜು ಮೊದಲಾದವರು ಉಪಸ್ಥಿತರಿದ್ದರು.
ರೈಲ್ವೆ ಮಾರ್ಗಗಳ ವಿದ್ಯುದೀಕರಣದ ಮೂಲಕ ಉಪನಗರ ರೈಲು ಸೌಲಭ್ಯ
ಆಟೋಮ್ಯಾಟಿಕ್ ಸಿಗ್ನಲಿಂಗ್ ವ್ಯವಸ್ಥೆಗಳು ಹಾಗೂ ರೈಲ್ವೆ ಮಾರ್ಗಗಳ ವಿದ್ಯುದೀಕರಣದ ಮೂಲಕ ಉಪನಗರ ರೈಲು ಸೌಲಭ್ಯ. ಇದರಿಂದ ಹೆಚ್ಚಿನ ಜನರಿಗೆ ನಗರದಲ್ಲಿ ತ್ವರಿತ ಸಂಚಾರಕ್ಕೆ ಅವಕಾಶವಾಗುವುದು. ಈಗಾಗಲೇ 15 ರೈಲುಗಳ ಸಂಪರ್ಕ ಒದಗಿಸಲಾಗಿದ್ದು, 1745 ಕೋಟಿ ರೂ. ವೆಚ್ಚದಲ್ಲಿ 116 ಹೊಸ ರೈಲುಗಳ ಸೇವೆ ಒದಗಿಸಲು ಅವಕಾಶವಾಗುತ್ತದೆ. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಕೈಗಾರಿಕಾ ಸಚಿವ ಟಿ.ಜೆ. ಜಾರ್ಜ್, ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಮುಂತಾದವರು ಸಭೆಯಲ್ಲಿ ಬಾಗಿ.