ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗೆ ಸಾಲ ಋಣಮುಕ್ತ ಪತ್ರ ವಿತರಿಸಿದ ಕುಮಾರಸ್ವಾಮಿ

|
Google Oneindia Kannada News

ದೊಡ್ಡಬಳ್ಳಾಪುರ, ಡಿಸೆಂಬರ್ 08: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರ ಸಾಲಮನ್ನಾ ಮಾಡಲಾಗಿದ್ದು, ಇಂದು ಸಿಎಂ ಕುಮಾರಸ್ವಾಮಿ ಅವರು ರೈತರಿಗೆ ಋಣಮುಕ್ತ ಪತ್ರಗಳನ್ನ ವಿತರಿಸಿದರು.

ದೊಡ್ಡಬಳ್ಳಾಪುರ ಮತ್ತು ಸೇಡಂ ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಸಾಲಮನ್ನಾ ಜಾರಿಮಾಡಲಾಗಿತ್ತು. ಅದರಂತೆ ಸಿಎಂ ಅವರು ಸಾಲಮನ್ನಾ ಆದ ರೈತರಿಗೆ ಋಣಮುಕ್ತ ಪತ್ರ ವಿತರಿಸಿದರು.

CM Kumaraswamy distribute debt free letter to farmers

ದೊಡ್ಡಬಳ್ಳಾಪುರದ ಭಗತ್‌ಸಿಂಗ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಸಮಯ ಕೇಳಿದ್ದು ಸಾಲಮನ್ನಾ ಆಗದೇ ಅಲ್ಲ, ವೈಜ್ಞಾನಿಕ ಮಾದರಿಯಲ್ಲಿ ಸಾಲಮನ್ನಾ ಮಾಡಲು ಎಂದು ಹೇಳಿದರು.

'ಸಾಲಮನ್ನಾ ಮಾಡಿ ಅಂದ್ರೆ ಮಂಚಕ್ಕೆ ಕರೀತಾರೆ', ರೈತ ಮಹಿಳೆ ಕಣ್ಣೀರು'ಸಾಲಮನ್ನಾ ಮಾಡಿ ಅಂದ್ರೆ ಮಂಚಕ್ಕೆ ಕರೀತಾರೆ', ರೈತ ಮಹಿಳೆ ಕಣ್ಣೀರು

ಸಾಲಮನ್ನಾ ಮಾಡಿದ ಪ್ರತಿ ಪೈಸಾ ನೇರವಾಗಿ ರೈತರಿಗೆ ತಲುಪುವಂತೆ ವೈಜ್ಞಾನಿಕವಾಗಿ ಯೋಜನೆ ತಯಾರಿಸಲು ಕಾಲಾವಕಾಶ ಕೇಳಿದ್ದೆ, ಈಗ ಒಬ್ಬ ದಲ್ಲಾಳಿಯ ಕೈಗೂ ಹಣ ನಿಲುಕದಂತೆ ನೇರವಾಗಿ ರೈತರಿಗೆ ಅದರ ಪ್ರತಿಫಲ ದೊರೆಯುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ಮಂಡ್ಯ: ಭತ್ತದ ಕೊಯ್ಲಿಗೆ ತಡವಾಗಿ ಬಂದ ಸಿಎಂ, ವಾಪಸ್ ಹೊರಟ ರೈತರುಮಂಡ್ಯ: ಭತ್ತದ ಕೊಯ್ಲಿಗೆ ತಡವಾಗಿ ಬಂದ ಸಿಎಂ, ವಾಪಸ್ ಹೊರಟ ರೈತರು

ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಹಿರಿಯ ರಾಜಕಾರಣಿ ವೀರಪ್ಪ ಮೊಯಿಲಿ, ಸಚಿವರುಗಳಾದ ಡಿ ಕೆ ಶಿವಕುಮಾರ್, ಕೃಷ್ಣ ಭೈರೇಗೌಡ ಮತ್ತು ಶಿವಶಂಕರ ರೆಡ್ಡಿ, ದೊಡ್ಡಬಳ್ಳಾಪುರ ಶಾಸಕರು, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಜರಿದ್ದರು.

ಸಾಲಮನ್ನಾ:ಮೊದಲ ಋಣಮುಕ್ತ ಪತ್ರ ಪಡೆಯಲಿದ್ದಾರೆ ದೊಡ್ಡಬಳ್ಳಾಪುರ ರೈತರುಸಾಲಮನ್ನಾ:ಮೊದಲ ಋಣಮುಕ್ತ ಪತ್ರ ಪಡೆಯಲಿದ್ದಾರೆ ದೊಡ್ಡಬಳ್ಳಾಪುರ ರೈತರು

English summary
CM Kumaraswamy distributed debt free letter to Doddaballapura farmers today. He says that 'i ask time not because of money crisis, i ask time to plan loan waiver perfectly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X