ರಾಜ್ಯಸಭೆ ಅಖಾಡಕ್ಕೆ ಸಿಎಂ ಆಪ್ತ ಇಬ್ರಾಹಿಂ
ಬೆಂಗಳೂರು, ಮೇ 26 : ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಪರಮಾಪ್ತ ಸಿ.ಎಂ.ಇಬ್ರಾಹಿಂ ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದು, ಇದಕ್ಕೆ ಸಿದ್ದರಾಮಯ್ಯ ಸಹ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಜೂನ್
19ರಂದು
ಕರ್ನಾಟಕದಿಂದ
ರಾಜ್ಯಸಭೆಯ
ನಾಲ್ಕು
ಸ್ಥಾನಗಳಿಗೆ
ಚುನಾವಣೆ
ನಡೆಯಲಿದೆ.
ಈಗಾಗಲೇ
ಅಖಾಡದಲ್ಲಿ
ಬಿ.ಕೆ.ಹರಿಪ್ರಸಾದ್,
ಎಸ್.ಎಂ.ಕೃಷ್ಣ
ಹಾಗೂ
ಮಾಜಿ
ಕೇಂದ್ರ
ಸಚಿವ
ಪಿ.ಚಿದಂಬರಂ
ಹೆಸರು
ಕೇಳಿಬರುತ್ತಿದೆ.
ಸದ್ಯ
ಈ
ರೇಸ್
ನಲ್ಲಿ
ಇಬ್ರಾಹಿಂ
ಹೆಸರು
ಕೇಳಿಬರುತ್ತಿದೆ.
ಸಿ.ಎಂ.ಇಬ್ರಾಹಿಂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾಗಿದ್ದು, ಅವರನ್ನು ರಾಜ್ಯಸಭೆಗೆ ಕಳುಹಿಸಲು ಸಿದ್ದರಾಮಯ್ಯ ಅವರು ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಆದ್ದರಿಂದ ಪಿ.ಚಿದಂಬರಂ ಬದಲಿಗೆ ಇಬ್ರಾಹಿಂ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಲು ಚಿಂತನೆ ನಡೆಸಿದ್ದಾರೆ. [ಜೂನ್ 19ಕ್ಕೆ ರಾಜ್ಯಸಭೆ ಚುನಾವಣೆ]
ರಾಜ್ಯಸಭೆಯ ಒಟ್ಟು ನಾಲ್ಕು ಸ್ಥಾನಗಳು ತೆರವಾಗಲಿದ್ದು, ಇವುಗಳ ಪೈಕಿ ಕಾಂಗ್ರೆಸ್ ಎರಡು ಸ್ಥಾನಗಳನ್ನು ಸುಲಭವಾಗಿ ಗಳಿಸಿಕೊಳ್ಳಲಿದೆ. ಬಿಜೆಪಿಗೆ ಒಂದು ಸ್ಥಾನ ಲಭಿಸಲಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಹೆಚ್ಚುವರಿ ಮತಗಳು ಸಿಕ್ಕರೆ ಕಾಂಗ್ರೆಸ್ ಮತ್ತೊಂದು ಸ್ಥಾನದಲ್ಲಿ ಜಯಗಳಿಸಬಹುದು.[ಪಿ.ಚಿದಂಬರಂ ರಾಜ್ಯಸಭೆಗೆ]
ಸಿ.ಎಂ.ಇಬ್ರಾಹಿಂ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಖುದ್ದು ಸಿದ್ದರಾಮಯ್ಯ ಅವರು ಭದ್ರಾವತಿ ಕ್ಷೇತ್ರದಲ್ಲಿ ಟಿಕೆಟ್ ಕೊಡಿಸಿದ್ದರು. ಆದರೆ, ಅವರು ಚುನಾವಣೆಯಲ್ಲಿ ಇಬ್ರಾಹಿಂ ಸೋಲು ಅನುಭವಿಸಿದರು. ಅನಂತರ ಅವರಿಗೆ ಯಾವುದೇ ಸ್ಥಾನಮಾನಗಳಿಲ್ಲ. ಆದ್ದರಿಂದ ಅವರನ್ನು ರಾಜ್ಯಸಭೆ ಸದಸ್ಯರಾಗಿಸಲು ಸಿಎಂ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.