ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರದಿಂದ ಮನನೊಂದ ಮಹಿಳೆ ಆತ್ಮಹತ್ಯೆ

|
Google Oneindia Kannada News

ಚಾಮರಾಜನಗರ, ಆ.5 : ಅತ್ಯಾಚಾರದಿಂದ ಮನನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಸುಂಟ್ರಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆಸಿದೆ. ಹತ್ತು ದಿನಗಳ ಹಿಂದೆ ವೆಂಕಟಾಚಲಯ್ಯ ಎಂಬ ವ್ಯಕ್ತಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಮೀನಾಕ್ಷಿ (35) ಎಂದು ಗುರುತಿಸಲಾಗಿದೆ. ಮೀನಾಕ್ಷಿ ಅವರ ಮೇಲೆ ವೆಂಕಟಾಚಲಯ್ಯ (50) ಎಂಬ ವ್ಯಕ್ತಿ ಹತ್ತು ದಿನಗಳ ಹಿಂದೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಿಂದ ಮನನೊಂದ ಮೀನಾಕ್ಷಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Chamrajnagar

ಮೀನಾಕ್ಷಿ ಅವರ ಜಮೀನಿನ ಪಕ್ಕದಲ್ಲಿಯೇ ವೆಂಕಟಾಚಲಯ್ಯ ಅವರ ಜಮೀನು ಇದೆ. ಈತ ಪದೇ ಪದೇ ಮೀನಾಕ್ಷಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಹತ್ತು ದಿನಗಳ ಹಿಂದೆ ಹೊಲದಲ್ಲೇ ಮೀನಾಕ್ಷಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಯಿಂದ ಮನನೊಂದ ಮೀನಾಕ್ಷಿ ಅವರು ಮಂಗಳವಾರ ಮಧ್ಯಾಹ್ನ ವೆಂಕಟಾಚಲಯ್ಯ ಅವರ ತೋಟದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಂತರ ವೆಂಕಟಾಚಲಯ್ಯ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಹನೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English summary
A 35 year old women Meenakshi committed suicide in Kollegal taluk Suntrahalli village of Chamrajnagar District. Meenakshi committed suicide after Venkatachalayya raped her. Hanuru Police investigating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X