ಕರ್ನಾಟಕದಿಂದ 3 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ರಾಗಿ ಖರೀದಿಗೆ ಕೇಂದ್ರದ ಒಪ್ಪಿಗೆ
ನವದೆಹಲಿ,
ಏಪ್ರಿಲ್
30:
ಕರ್ನಾಟಕದ
ರಾಗಿ
ಬೆಳೆಗಾರರಿಗೆ
ಎದುರಾದ
ಸಂಕಷ್ಟದ
ನಿವಾರಣೆಗೆ
ಕೇಂದ್ರ
ಸರ್ಕಾರ
ಮುಂದಾಗಿದೆ.
ರಾಜ್ಯದಿಂದ
ಮೂರು
ಲಕ್ಷ
ಮೆಟ್ರಿಕ್
ಟನ್
ಹೆಚ್ಚುವರಿ
ರಾಗಿ
ಖರೀದಿಗೆ
ಕೇಂದ್ರ
ಸರ್ಕಾರದ
ಒಪ್ಪಿಗೆ
ನೀಡಿದೆ
ಎಂದು
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ತಿಳಿಸಿದ್ದಾರೆ.
ನವದೆಹಲಿಯಲ್ಲಿ
ಮಾತನಾಡಿದ
ಅವರು,
ರಾಜ್ಯದ
ಐದಾರು
ಜಿಲ್ಲೆಗಳಲ್ಲಿ
ರಾಗಿ
ಬೆಳೆದ
ರೈತರಿಗೆ
ಬೆಲೆ
ಸಿಗಬೇಕೆಂಬ
ಕಾರಣದಿಂದ
ಮೊದಲು
2
ಲಕ್ಷ
ಮೆಟ್ರಿಕ್
ಟನ್
ರಾಗಿ
ಖರೀದಿ
ಮಾಡಲಾಯಿತು.
ಆದರ
ಪುನ:
ಬೇಡಿಕೆ
ಬಂದ
ಹಿನ್ನೆಲೆ
485
ಕೋಟಿ
ರೂ.ಗಳನ್ನು
ಮಂಜೂರು
ಮಾಡಿ
1.14
ಲಕ್ಷ
ಮೆಟ್ರಿಕ್
ಟನ್
ಖರೀದಿ
ಮಾಡಲಾಯಿತು
ಎಂದರು.
ರಾಗಿ, ಜೋಳ ಖರೀದಿಗೆ ಕೇಂದ್ರದಿಂದ 902 ಕೋಟಿ ಬಿಡುಗಡೆ: ಶೋಭಾ ಕರಂದ್ಲಾಜೆ
ರಾಗಿ ಹೆಚ್ಚು ಬೆಳೆದಿದ್ದರಿಂದ ಖರೀದಿಗೆ ರೈತರ ಒತ್ತಾಸೆಯ ಮೇರೆಗೆ ಕೇಂದ್ರ ಸಚಿವರಿಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದರಿಂದ ರಾಗಿ ಖರೀದಿಯನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪ್ರಧಾನಿ
ಮತ್ತು
ಕೇಂದ್ರ
ಸಚಿವರಿಗೆ
ಸಿಎಂ
ಧನ್ಯವಾದ:
ಕರ್ನಾಟಕದಿಂದ
ಹೆಚ್ಚುವರಿ
ರಾಗಿ
ಖರೀದಿಗೆ
ಒಪ್ಪಿಗೆ
ನೀಡಿರುವ
ಹಿನ್ನೆಲೆ
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಹಾಗೂ
ಕೇಂದ್ರ
ಆಹಾರ
ಸಚಿವ
ಪಿಯೂಶ್
ಗೋಯಲ್
ಅವರಿಗೆ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಧನ್ಯವಾದ
ಅರ್ಪಿಸುವುದಾಗಿ
ತಿಳಿಸಿದರು.
ನ್ಯಾಯಮೂರ್ತಿಗಳ
ಹುದ್ದೆ
ಭರ್ತಿ
ಬಗ್ಗೆ
ಸಿಎಂ
ಹೇಳಿಕೆ:
ನ್ಯಾಯಮೂರ್ತಿಗಳ
ಹುದ್ದೆ
ಭರ್ತಿಗೆ
ಸಮಯ
ನಿಗದಿ
ಮಾಡಲಾಗಿದೆ.
ನ್ಯಾಯಮೂರ್ತಿಗಳ
ಹುದ್ದೆ
ಖಾಲಿಯಾಗುವ
ಆರು
ತಿಂಗಳು
ಮುನ್ನವೇ
ಭರ್ತಿ
ಮಾಡುವ
ಪ್ರಕ್ರಿಯೆ
ಪ್ರಾರಂಭವಾಗಿ
ಆರು
ತಿಂಗಳೊಳಗೆ
ಮುಗಿಯಬೇಕು.
ರಾಜ್ಯ
ಮಟ್ಟದಲ್ಲಿ,
ಕೇಂದ್ರ
ಮಟ್ಟದಲ್ಲಿ
ಹಾಗೂ
ಸವೋಚ್ಛ
ನ್ಯಾಯಾಲಯದಲ್ಲಿ
ಎಷ್ಟು
ದಿನಗಳು
ಎನ್ನುವುದನ್ನು
ಈಗಾಗಲೇ
ಇರುವ
ತೀರ್ಪಿನಂತೆ
ಮಾಡಬೇಕು.
ಕೆಳಹಂತದ
ಅಧಿಕಾರಿಗಳನ್ನು
ತುಂಬುವ
ಕೆಲಸವೂ
ಆಗಬೇಕು
ಎಂಬ
ಪ್ರಮುಖ
ನಿರ್ಣಯಗಳು
ಸಮ್ಮೇಳನದಲ್ಲಿ
ಆಗಿವೆ
ಎಂದರು.