ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಪತಿ ಆತ್ಮಹತ್ಯೆ ಪ್ರಕರಣ: ತನಿಖೆಗೆ 3ತಿಂಗಳ ಕಾಲಾವಕಾಶ ಕೋರಿದ ಸಿಬಿಐ

By Sachhidananda Acharya
|
Google Oneindia Kannada News

ನವದೆಹಲಿ, ಜನವರಿ 9: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಕೇಂದ್ರ ತನಿಖಾ ದಳ (ಸಿಬಿಐ) ಸೋಮವಾರ ಮೂರು ತಿಂಗಳ ಕಾಲಾವಕಾಶ ಕೋರಿದೆ.

ಕಳೆದ ವರ್ಷ ಅಕ್ಟೋಬರ್ 26ರಂದು ಸಿಬಿಐ ಸಚಿವ ಕೆಜೆ ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಆದರೆ ಇದೊಂದು ರಾಜಕೀಯ ಷಡ್ಯಂತ್ರ ಎಂದು ಜಾರ್ಜ್ ಆರೋಪಿಸಿದ್ದರು.

ಡಿವೈಎಸ್ಪಿ ಗಣಪತಿ ಸಾವು ಪ್ರಕರಣ: ಕಾಲಾವಕಾಶ ಕೇಳಿದ ಸಿಬಿಐಡಿವೈಎಸ್ಪಿ ಗಣಪತಿ ಸಾವು ಪ್ರಕರಣ: ಕಾಲಾವಕಾಶ ಕೇಳಿದ ಸಿಬಿಐ

ಈ ವೇಳೆ ಜಾರ್ಜ್ ರಾಜೀನಾಮೆಗಾಗಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಜಾರ್ಜ್, "ಬಿಜೆಪಿಯರಿಗೆ ತಮ್ಮ ಸ್ವಂತ ಸಿಬಿಐ ಮೆಲೇಯೇ ನಂಬಿಕೆ ಇಲ್ಲ. ಇದು ನನ್ನ ವಿರುದ್ಧ ಹೂಡಿದ ರಾಜಕೀಯ ಷಡ್ಯಂತ್ರ. ನಾನೂ ಯಾವತ್ತೂ ಹೇಳಿದ್ದೇನೆ. ನನ್ನ ಮುಖ್ಯಮಂತ್ರಿಗಳು ರಾಜೀನಾಮೆ ಕೇಳಿದರೆ ಸೆಕೆಂಡುಗಳಲ್ಲಿ ನನ್ನ ರಾಜೀನಾಮೆ ನೀಡುತ್ತೇನೆ," ಎಂದಿದ್ದರು.

CBI seeks three months to investigate Karnataka DySP suicide case

ಕೊಡಗಿನ ಲಾಡ್ಜ್ ಒಂದರಲ್ಲಿ ಎಂ.ಕೆ ಗಣಪತಿ ಜುಲೈ 7, 2016ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಂದರ್ಭದಲ್ಲಿ ಅವರು ಮಂಗಳೂರಿನಲ್ಲಿ ಡಿವೈಎಸ್ಪಿಯಾಗಿದ್ದರು. ಸಾಯುವುದಕ್ಕೂ ಮೊದಲು ನೀಡಿದ್ದ ಸಂದರ್ಶನದಲ್ಲಿ ಗಣಪತಿ ತಮ್ಮ ಸಾವಿಗೆ ಕೆ.ಜೆ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ, ಎ.ಎಂ ಪ್ರಸಾದ್ ಕಾರಣ ಎಂದು ಹೇಳಿದ್ದರು.

English summary
The Central Bureau of Investigation (CBI) on Monday sought three-months time to investigate the suicide of Karnataka Deputy Superintendent of Police MK Ganapathy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X