ನಿಮಗೆ ಯಾವ ನೈತಿಕತೆ ಇದೆ?: 'ಟ್ವಿಟ್ಟರಾಮಯ್ಯ'ಗೆ ಬಿಜೆಪಿ ತರಾಟೆ
Recommended Video
ಬೆಂಗಳೂರು, ಜನವರಿ 9: ಸಿಬಿಐ ನಿರ್ದೇಶಕರ ಕುರಿತು ಸುಪ್ರೀಂಕೋರ್ಟ್ ತೀರ್ಪಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವೀಟ್ಗೆ ಕರ್ನಾಟಕ ಬಿಜೆಪಿ ಖಾರವಾದ ಪ್ರತಿಕ್ರಿಯೆ ನೀಡಿದೆ.
'ಸಿಬಿಐ ಕುರಿತು ಸುಪ್ರೀಂ ತೀರ್ಪು: ಮೋದಿ ಸರ್ಕಾರಕ್ಕೆ ಕಪಾಳಮೋಕ್ಷ!'
ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿದವರಿಗೆ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ನಿರಂತರವಾಗಿ ಟ್ವೀಟ್ ಮಾಡುತ್ತಿರುವ ಸಿದ್ದರಾಮಯ್ಯ ಅವರ ಹೆಸರನ್ನು ಟ್ವಿಟ್ಟರಾಮಯ್ಯ ಎಂದು ಲೇವಡಿ ಮಾಡಿದೆ.
'ಸಿಬಿಐ ಮುಖ್ಯಸ್ಥರ ಮರು ನಿಯೋಜನೆ, ಪಿಎಂ ಬಚಾವಾಗಲು ಸಾಧ್ಯವೇ ಇಲ್ಲ'
ಬಿಜೆಪಿ ನಿರಂಕುಶಾಧಿಕಾರದಿಂದ ಮಧ್ಯರಾತ್ರಿ ದಂಗೆ ನಡೆಸಿ ತನಿಖಾ ಸಂಸ್ಥೆಯನ್ನು ಹಾಳುಗೆಡವಲು ಮಾಡಿದ ಪ್ರಯತ್ನಕ್ಕೆ ಸುಪ್ರೀಂಕೋರ್ಟ್ನಿಂದ ತೀವ್ರ ಹಿನ್ನಡೆಯಾಗಿದೆ. ಅಲೋಕ್ ವರ್ಮಾ ಅವರನ್ನು ಸಿಬಿಐ ಮುಖ್ಯಸ್ಥರನ್ನಾಗಿ ಮತ್ತೆ ನೇಮಿಸಲಾಗಿದೆ.
ಇದು ಸರ್ವಾಧಿಕಾರಿ ದುರಾಡಳಿತದ ವಿರುದ್ಧದ ದೊಡ್ಡ ಗೆಲುವು. ಬಿಜೆಪಿಯನ್ನು ಯಾವುದೇ ಹೊಸ ಪ್ರಯತ್ನಗಳಿಂದ ಹಿಂದಕ್ಕೆ ತಳ್ಳುತ್ತದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಸಿಬಿಐ ವಿವಾದದಲ್ಲಿ ಸರ್ಕಾರಕ್ಕೆ ತೀವ್ರ ಹಿನ್ನಡೆ: ಸುಪ್ರೀಂಕೋರ್ಟ್ ಹೇಳಿದ್ದೇನು?
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಬಿಜೆಪಿ ಸಿದ್ದರಾಮಯ್ಯ ಅವರಿಗೆ ವ್ಯಂಗ್ಯದ ಉತ್ತರ ನೀಡಿದೆ.
Dear Twitterramaiah,
— BJP Karnataka (@BJP4Karnataka) 8 January 2019
Either you are short of memory or you have a split personality,
On what moral grounds do you tweet about investigation agency when you yourself subverted a prompt institution like Lokayukta in Karnataka to make way for a crippled ACB. https://t.co/udWYo29LFL
ಆತ್ಮೀಯ
ಟ್ವಿಟ್ಟರಾಮಯ್ಯ,
ನಿಮ್ಮ
ಸ್ಮರಣ
ಶಕ್ತಿ
ಕಡಿಮೆ
ಇರಬೇಕು
ಅಥವಾ
ಸ್ಪ್ಲಿಟ್
ಪರ್ಸನಾಲಿಟಿ
ಇರಬೇಕು.
ತನಿಖಾ
ಸಂಸ್ಥೆಯ
ಬಗ್ಗೆ
ಮಾತನಾಡಲು
ನಿಮಗೆ
ಯಾವ
ನೈತಿಕತೆ
ಇದೆ?
ಕರ್ನಾಟಕದಲ್ಲಿ
ವಿಕಲಗೊಂಡ
ಎಸಿಬಿಯ
ರಚನೆಗಾಗಿ
ಲೋಕಾಯುಕ್ತದಂತಹ
ಪ್ರಾಮಾಣಿಕ
ಸಂಸ್ಥೆಯನ್ನು
ಮುಚ್ಚಿಸಿದವರು
ನೀವು
ಎಂದು
ತರಾಟೆಗೆ
ತೆಗೆದುಕೊಂಡಿದೆ.