ಕಾವೇರಿ ಅಂತಿಮ ತೀರ್ಪು : ತಮಿಳುನಾಡಿಗೆ ಕಹಿ, ಕರ್ನಾಟಕಕ್ಕೆ ಸಿಹಿ
Recommended Video
ಬೆಂಗಳೂರು, ಫೆಬ್ರವರಿ 16: ಕನ್ನಡಿಗರ ಜೀವನದಿ ಕಾವೇರಿ ಕನ್ನಡಿಗರ ಪಾಲಿಗೆ ಹೆಚ್ಚಾಗಿ ಒಲಿದಿದ್ದಾಳೆ. ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ನ್ಯಾಯಪೀಠ ನೀಡಿರುವ ತೀರ್ಪು- ತಮಿಳುನಾಡು ಪಾಲಿಗೆ ಕಹಿಯಾಗಿದ್ದರೆ, ಕರ್ನಾಟಕದ ಪಾಲಿಗೆ ಸಿಹಿಯಾಗಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ.ಅಮಿತ್ ರಾಯ್, ನ್ಯಾ.ಎ.ಎಂ.ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತ್ತು. ನ್ಯಾ ದೀಪಕ್ ಮಿಶ್ರಾ ಅವರು ಅಂತಿಮ ತೀರ್ಪು ಓದಿದರು.
ಕಾವೇರಿ ಅಂತಿಮ ತೀರ್ಪು: ಟ್ವಿಟ್ಟರ್ ನಲ್ಲಿ ಶಾಂತಿಮಂತ್ರ ಪಠಣ
ನದಿ ನೀರಿನ ಹಂಚಿಕೆಯ ಕುರಿತು 2007 ರ ಕಾವೇರಿ ನ್ಯಾಯಾಧಿಕರಣದ ಐ ತೀರ್ಪಿನ ವಿರುದ್ಧ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿಗೆ ಸಂಬಂಧಿಸಿದಂತೆ ಅಂತಿಮ ತೀರ್ಪು ಬಂದಿದೆ.
ಅಂತಿಮ
ತೀರ್ಪಿನ
ಮುಖ್ಯಾಂಶಗಳು:
ಕಾವೇರಿ
ನೀರು
ಹರಿದು
ಹಂಚಿಕೊಳ್ಳುವ
ಲೆಕ್ಕಾಚಾರ:
*
30
ಟಿಎಂಸಿ
ಕೇರಳಕ್ಕೆ,
7
ಟಿಎಂಸಿ
ಪುದುಚೇರಿಗೆ
ಲಭಿಸಲಿದೆ.
*
270
ಇಂದ
284
ಟಿಎಂಸಿ
ಅಡಿಗೆ
ಏರಿಕೆ
ಕರ್ನಾಟಕಕ್ಕೆ
ಭರ್ಜರಿ
ಲಾಭ
*
419
ಟಿಎಂಸಿ
ಇಂದ
404
ಟಿಎಂಸಿಗೆ
ಇಳಿಕೆ
ತಮಿಳುನಾಡು.
*
20
ಟಿಎಂಸಿ
ಅಂತರ್ಜಲ
ನೀರು
ಪರಿಗಣಿಸಿ
ಎಂದು
ಸುಪ್ರೀಂಕೋರ್ಟ್
ಸೂಚನೆ.
*
ವಾರ್ಷಿಕ
ಹಂಚಿಕೆ
ವಿಷಯದಲ್ಲಿ
ಕರ್ನಾಟಕಕ್ಕೆ
14.5
ಟಿಎಂಸಿ
ಹೆಚ್ಚುವರಿ
ನೀರು
ಲಭ್ಯ
*
ಕರ್ನಾಟಕದಿಂದ
ತಮಿಳುನಾಡಿಗೆ
ವಾರ್ಷಿಕವಾಗಿ
177
ಟಿಎಂಸಿ
ಅಡಿ
ಕಾವೇರಿ
ಬಿಡಬೇಕು
LIVE: ಕರ್ನಾಟಕಕ್ಕೆ ಕೊಂಚ ಸಮಾಧಾನ ತಂದ ಸುಪ್ರೀಂ ತೀರ್ಪು
*
ಅಗತ್ಯಕ್ಕೆ
ತಕ್ಕಂತೆ
ಕರ್ನಾಟಕ
ತನ್ನ
ನೀರಾವರಿ
ಸಂಪತ್ತನ್ನು
ವಿಸ್ತರಿಸಿಕೊಳ್ಳಬಹುದು.
ಹೀಗಾಗಿ
ಅಣೆಕಟ್ಟು
ನಿರ್ಮಾಣದ
ಕರ್ನಾಟಕದ
ಪ್ರಸ್ತಾವನೆಗೆ
ಬಲ
ಸಿಕ್ಕಿದೆ.
*
1892,
1924ರ
ಒಪ್ಪಂದ
ಸಂವಿಧಾನ
ಬದ್ಧವಾಗಿದೆ.
* ಕಾವೇರಿ ನಿರ್ವಹಣಾ ಮಂಡಳಿ ರಚನೆ ಕೇಂದ್ರ ಸರ್ಕಾರಕ್ಕೆ ಬಿಟ್ಟಿದ್ದು: ಸುಪ್ರೀಂಕೋರ್ಟ್
ಟೈಮ್ ಲೈನ್ : ಕಾವೇರಿ ವಿವಾದ ತೀರ್ಪು 15 ವರ್ಷಗಳ ತನಕ ಬದ್ಧ
* 4.75 ಟಿಎಂಸಿ ನೀರು ಬೆಂಗಳೂರಿನ ಕುಡಿಯುವ ನೀರಿಗೆ ಬಳಕೆ ಮಾಡಬಹುದು.
* 20ಟಿಎಂಸಿ ಅಡಿ ನೀರಿನ ಪೈಕಿ 10 ಟಿಎಂಸಿ ಅಂತರ್ಜಲ ನೀರು ಕರ್ನಾಟಕ ಬಳಕೆ ಮಾಡಬಹುದು. ಒಟ್ಟಾರೆ, ಬೆಂಗಳೂರಿನ ನೀರಿನ ದಾಹಕ್ಕೆ ಬೆಲೆ ಸಿಕ್ಕಿದ್ದು, ಪರೋಕ್ಷವಾಗಿ ಕಾವೇರಿ ಕೊಳ್ಳದ ಎಲ್ಲಾ ಪ್ರದೇಶಗಳಿಗೂ ಲಾಭವಾಗಿದೆ. ಈ ಎಲ್ಲಾ ಆದೇಶಗಳು ಮುಂದಿನ 15 ವರ್ಷಗಳ ಕಾಲಕ್ಕೆ ಅನ್ವಯವಾಗಲಿದೆ.