ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಕನ್ನಡದಲ್ಲಿ : ಸಂಪುಟ ಒಪ್ಪಿಗೆ
ಬೆಂಗಳೂರು, ಜ.30 : ಒಂದರಿಂದ ಐದನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆ ಕನ್ನಡದಲ್ಲೇ ಕಡ್ಡಾಯಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದಕ್ಕಾಗಿ 'ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ- 2012'ಕ್ಕೆ ತಿದ್ದುಪಡಿ ತರಲು ತೀರ್ಮಾನ ಕೈಗೊಳ್ಳಲಾಗಿದೆ.
ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರು ಸಭೆಯ ನಿರ್ಣಯಗಳನ್ನು ತಿಳಿಸಿದರು. [ಕನ್ನಡ ಕಡ್ಡಾಯವಲ್ಲ: ಸರ್ಕಾರದ ಕೊನೆ ಸುತ್ತಿನ ಹೋರಾಟ]
1 ರಿಂದ 5ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಲು ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ 'ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ- 2012'ಕ್ಕೆ ತಿದ್ದುಪಡಿ ತರಲಾಗುತ್ತದೆ. ಕಾಯ್ದೆಯಲ್ಲಿರುವ 'ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯ' ಎಂಬ ಭಾಗಕ್ಕೆ 'ಮಾತೃಭಾಷೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕಡ್ಡಾಯ' ಎಂದು ತಿದ್ದುಪಡಿ ತರಲಾಗುತ್ತದೆ ಎಂದರು. [ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂದ ಸುಪ್ರೀಂಕೋರ್ಟ್]
ಫೆಬ್ರವರಿ 2ರಿಂದ ಆರಂಭವಾಗುವ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿಯೇ ಈ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗುವುದು ಎಂದು ಟಿ.ಬಿ.ಜಯಚಂದ್ರ ವಿವರಣೆ ನೀಡಿದರು. ಭಾಷಾ ಮಾಧ್ಯಮ ಕುರಿತು ಸುಪ್ರೀಂಕೋರ್ಟ್ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ. ಇದಕ್ಕೆ ಪೂರಕವಾಗಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಹೇಳಿದರು. ಸಚಿವ ಸಂಪುಟ ಸಭೆಯ ತೀರ್ಮಾನಗಳು
ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆ
ಕಾಯಂ ಪೌರಕಾರ್ಮಿಕರಿಗೆ ಬಹುಮಹಡಿ ವಸತಿ ಯೋಜನೆಯಡಿ 'ಗೃಹಭಾಗ್ಯ' ಯೋಜನೆ ಅನುಷ್ಠಾನಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕರ್ನಾಟಕದಲ್ಲಿ 11,438 ಪೌರ ಕಾರ್ಮಿಕರಿದ್ದು, ಮೊದಲ ವರ್ಷ 1000 ಮನೆಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಪ್ರತಿಯೊಂದು ಮನೆಗೆ 7.50 ಲಕ್ಷ ರೂ. ವೆಚ್ಚವಾಗಲಿದ್ದು, ತಲಾ 3 ಮನೆಗಳಿರುವ 333 ಬಹುಮಹಡಿ ವಸತಿಗೃಹಗಳನ್ನು ನಿರ್ಮಿಸಲಾಗುತ್ತದೆ.
ಎಲ್ಲ ಮಕ್ಕಳಿಗೂ ಎರಡನೇ ಜೊತೆ ಸಮವಸ್ತ್ರ
ಒಂದರಿಂದ ಎಂಟನೇ ತರಗತಿವರೆಗಿನ ಎಲ್ಲಾ ಮಕ್ಕಳಿಗೆ ಎರಡನೇ ಜತೆ ಸಮವಸ್ತ್ರ ವಿತರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕಾಗಿ 16.35 ಕೋಟಿ ರೂ. ಖರ್ಚು ಮಾಡಲು ಅನುಮೋದನೆ ದೊರಕಿದೆ.
ಡಯಟ್ಗಳನ್ನು ಉನ್ನತೀಕರಣ
ಕೇಂದ್ರದ ಶಿಕ್ಷಕ-ಶಿಕ್ಷಣ ಯೋಜನೆಯಡಿ ರಾಜ್ಯದಲ್ಲಿನ ಡಯಟ್ಗಳನ್ನು ಉನ್ನತೀಕರಿಸಲು ಹಾಗೂ ಗುಲ್ಬರ್ಗ ವಿಶ್ವವಿದ್ಯಾಲದ ಶಿಕ್ಷಣ ವಿಭಾಗದಲ್ಲಿ ಶೈಕ್ಷಣಿಕ ಉನ್ನತ ಕೇಂದ್ರ ಸ್ಥಾಪಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.
ಕನ್ನಡಿಗರ ನೇಮಕಕ್ಕೆ ಒಪ್ಪಿಗೆ
ಕರ್ನಾಟಕ ಭವನದಲ್ಲಿ ಕಾರ್ಯನಿರ್ವಹಿಸುವ 120 ಗುತ್ತಿಗೆ ಸಿಬ್ಬಂದಿಯ ಬದಲು ಕನ್ನಡಿಗರನ್ನೇ ಕಾಯಂಆಗಿ ನೇಮಕ ಮಾಡಿಕೊಳ್ಳಲು ನಿಯಮಗಳಿಗೆ ತಿದ್ದುಪಡಿ ತರಲು ಕಾನೂನು ಇಲಾಖೆಗೆ ಸೂಚನೆ ನೀಡಲು ಸಂಪುಟ ಒಪ್ಪಿಗೆ ನೀಡಿದೆ.
ಸಂಪುಟದ ಇತರ ನಿರ್ಣಯಗಳು
*
ವಿರಾಜಪೇಟೆ
ತಾಲೂಕಿನ
ಹುಣಸೂರು-ತಲಕಾವೇರಿ
ಮಧ್ಯದ
ರಾಜ್ಯ
ಹೆದ್ದಾರಿ
ಅಭಿವೃದ್ಧಿ
27.66
ಕೋಟಿ
ರೂ.
*
ಮೈಸೂರು
ನಗರಪಾಲಿಕೆಯಿಂದ
ದೇವರಾಜ
ಮಾರುಕಟ್ಟೆ
ಅಭಿವೃದ್ಧಿ
ಪಡಿಸಲು
9
ಕೋಟಿ
ರೂ.
*
ವಿಜಯಪುರದ
ಕನಕದಾಸ
ನೌಕರರ
ಸಹಕಾರ
ಸಂಘಕ್ಕೆ
ಶೇ.50ರ
ದರದಲ್ಲಿ
ಸಿ.ಎ.
ನಿವೇಶನ
*
ಧಾರವಾಡದ
ಕರ್ನಾಟಕ
ವಿ.ವಿ.
ಆವರಣದಲ್ಲಿ
116
ಕೋಟಿ
ರೂ.
ವೆಚ್ಚದಲ್ಲಿ
ಉನ್ನತ
ಶಿಕ್ಷಣ
ಅಕಾಡೆಮಿ
ಸ್ಥಾಪನೆ.