ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ: ಸಿಎಂ ಹುದ್ದೆಗೆ ಕನ್ನಡಿಗರ ನಂ. 1 ಆಯ್ಕೆ ಸಿದ್ದರಾಮಯ್ಯ

By Sachhidananda Acharya
|
Google Oneindia Kannada News

Recommended Video

Karnataka Elections 2018 : C Fore Survey 2018 : ಸಿಎಂ ಹುದ್ದೆಗೆ ಕನ್ನಡಿಗರ ನಂ.1 ಆಯ್ಕೆ ಸಿದ್ದರಾಮಯ್ಯ

ಬೆಂಗಳೂರು, ಮಾರ್ಚ್ 26: 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕನ್ನಡಿಗರ ಮೊದಲ ಆಯ್ಕೆ ಸಿಎಂ ಸಿದ್ದರಾಮಯ್ಯ. ಹೀಗಂಥ ಸಿ-ಫೋರ್ ಹೊಸ ಚುನಾವಣಾಪೂರ್ವ ಸಮೀಕ್ಷೆ ಹೇಳುತ್ತಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ನಮ್ಮ ಮೊದಲ ಆಯ್ಕೆ ಎಂದು ಶೇಕಡಾ 45 ರಷ್ಟು ಜನರು ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ಸೂಕ್ತ ವ್ಯಕ್ತಿ ಎಂದು ಶೇಕಡಾ 26ರಷ್ಟು ಜನರು ಹೇಳಿದ್ದಾರೆ.

ಸಿ-ಫೋರ್ ಹೊಸ ಸಮೀಕ್ಷೆ: ಕಾಂಗ್ರೆಸಿಗೆ 2013ಕ್ಕಿಂತ ದೊಡ್ಡ ಜಯಸಿ-ಫೋರ್ ಹೊಸ ಸಮೀಕ್ಷೆ: ಕಾಂಗ್ರೆಸಿಗೆ 2013ಕ್ಕಿಂತ ದೊಡ್ಡ ಜಯ

ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನಮ್ಮ ಆಯ್ಕೆ ಎಂದು ಶೇಕಡಾ 13ರಷ್ಟು ಜನರು ಹೇಳಿದ್ದಾರೆ. ಉಳಿದ ಶೇಕಡಾ 16 ಜನರು ಬೇರೆ ಆಯ್ಕೆಗಳಿಗೆ ಸೈ ಎಂದಿದ್ದಾರೆ.

C-Fore survey: 45 % says Siddaramaiah was their top preference for CM

ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಮೊದಲ ಆಯ್ಕೆ ಎಂಬುದಕ್ಕೆ ಕಾರಣವನ್ನೂ ಜನರು ನೀಡಿದ್ದಾರೆ. ಸಿದ್ದರಾಮಯ್ಯ ಸರಕಾರದ ಕಾರ್ಯವೈಖರಿ ತುಂಬಾ ಇಷ್ಟವಾಗಿದೆ ಎಂದು ಶೇಕಡಾ 21ರಷ್ಟು ಜನರು ಹೇಳಿದ್ದರೆ, ಪರವಾಗಿಲ್ಲ ಎಂಬ ಅಭಿಪ್ರಾಯವನ್ನು ಶೇಕಡಾ 54ರಷ್ಟು ಜನರು ದಾಖಲಿಸಿದ್ದಾರೆ. ಇನ್ನು ಶೇಕಡಾ 25ರಷ್ಟು ಜನರು ಮಾತ್ರ ನಮಗೆ ಕಾಂಗ್ರೆಸ್ ಸರಕಾರದ ಆಡಳಿತ ಹಿಡಿಸಿಲ್ಲ ಎಂದಿದ್ದಾರೆ.

ಸಿ-ಫೋರ್ ಸಮೀಕ್ಷೆ : ಕಾಂಗ್ರೆಸ್ ಆಡಳಿತದ ಬಗ್ಗೆ ಜನರು ಹೇಳುವುದೇನು?ಸಿ-ಫೋರ್ ಸಮೀಕ್ಷೆ : ಕಾಂಗ್ರೆಸ್ ಆಡಳಿತದ ಬಗ್ಗೆ ಜನರು ಹೇಳುವುದೇನು?

C-Fore survey: 45 % says Siddaramaiah was their top preference for CM

2018ರ ಮಾರ್ಚ್ 1 ರಿಂದ 25ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗಾಗಿ 154 ವಿಧಾನಸಭಾ ಕ್ಷೇತ್ರಗಳ 22,357 ಮತದಾರರನ್ನು ಸಂದರ್ಶಿಸಲಾಗಿದೆ. ಮತದಾರರು ರಾಜ್ಯದ 2,368 ಮತಗಟ್ಟೆಗಳಿಗೆ ಸೇರಿದ್ದಾರೆ ಎಂದು ಸಂಸ್ಥೆ ತನ್ನ ಸಮೀಕ್ಷೆಯ ಬಗ್ಗೆ ವಿವರ ನೀಡಿದೆ.

326 ನಗರ ಮತ್ತು 977 ಗ್ರಾಮೀಣ ಪ್ರದೇಶಗಳನ್ನು ಸಮೀಕ್ಷೆಯು ಒಳಗೊಂಡಿದೆ ಎಂದು ಸಿ-ಫೋರ್ ಸಂಸ್ಥೆ ಹೇಳಿದ್ದು, ಶೇಕಡಾ 1ರಷ್ಟು ಇದು ತಪ್ಪುಗಳನ್ನು ಒಳಗೊಂಡಿರಬಹುದು ಎಂದು ಹೇಳಿದೆ.

English summary
Karnataka Assembly Elections 2018: 45 per cent said that Siddaramaiah was their top preference for Chief Minister. 26 per cent backed B S Yeddyurappa while H D Kumaraswamy got 13 per cent of the vote. 16 per cent chose in the others category.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X