ಬಜೆಟ್ 2021: ನೀರಾವರಿ ಕ್ಷೇತ್ರಕ್ಕೆ 20,996 ಕೋಟಿ ಅನುದಾನ
ಬೆಂಗಳೂರು, ಮಾರ್ಚ್ 8: ನೀರಾವರಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಬಜೆಟ್ ಎಂದು ವಿಪಕ್ಷ ಕಾಂಗ್ರೆಸ್ ದನಿಯೆತ್ತಿರುವ ಬೆನ್ನಲ್ಲೇ ಬಿಜೆಪಿ ಕರ್ನಾಟಕ ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದೆ.
ಆಯವ್ಯಯದಲ್ಲಿ ಎಲ್ಲ ವರ್ಗಗಳಿಗೆ, ಎಲ್ಲ ವಲಯಗಳಿಗೆ ಹಾಗೂ ಎಲ್ಲ ಜಿಲ್ಲೆಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಸಮತೋಲನ ಕಾಯ್ದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ'' ಎಂದು ಸಿಎಂ ಯಡಿಯೂರಪ್ಪ ಅವರು ಬಜೆಟ್ ಭಾಷಣದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೀರಾವರಿ ನಿರ್ಲಕ್ಷಿಸಿದ ನಿರಾಶಾದಾಯಕ ಬಜೆಟ್: ಎಸ್.ಆರ್. ಪಾಟೀಲ್
ನೀರಾವರಿ
ಕ್ಷೇತ್ರಕ್ಕೆ
ಸಿಕ್ಕಿದ್ದ
ಅನುದಾನದ
ಮುಖ್ಯಾಂಶಗಳು:
*
ರಾಜ್ಯದ
ನೀರಾವರಿ
ಯೋಜನೆಗಳನ್ನು
ಆದ್ಯತೆ
ಮೇರೆಗೆ
ಜಾರಿಗೊಳಿಸಲು
ಅನುಕೂಲವಾಗುವಂತೆ
ರೂ.
20,996
ಕೋಟಿ
ಅನುದಾನ.
* ಕೃಷ್ಣಾ ಮೇಲ್ದಂಡೆ ಹಂತ 3, ಮಹದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆದ್ಯತೆ.
* ಭದ್ರಾ ಮೇಲ್ದಂಡೆ ಯೋಜನೆಗೆ ರೂ. 21,477 ಕೋಟಿ ಅನುದಾನ.
* ಬೇಡ್ತಿ-ವರದಾ ನದಿ ಜೋಡಣೆಗೆ ಪ್ರಸ್ತಾವನೆ. ಈ ಯೋಜನೆಯಡಿ ಒಟ್ಟು 22 ಟಿ.ಎಂ.ಸಿ. ನೀರು ಬಳಸಿಕೊಳ್ಳುವ ಉದ್ದೇಶವಿದ್ದು, ಯೋಜನಾ ವರದಿಯನ್ನು National Perspective Plan ಅಡಿಯಲ್ಲಿ ಸಿದ್ಧಪಡಿಸಲು NWDAಗೆ ಮನವಿ. ಈ ನಿರ್ಧಾರದಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನುಕೂಲವಾಗಲಿದೆ.
ರಾಜ್ಯ ಬಜೆಟ್ ಕುರಿತು ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ಬೇಸರ
*
ಕೊಪ್ಪಳ
ಜಿಲ್ಲೆಯ
ನವಲಿ
ಬಳಿ
ಸಮಾನಾಂತರ
ಜಲಾಶಯ
ನಿರ್ಮಾಣಕ್ಕೆ
ಕ್ರಮ.
*
ಪ್ರಾಧಿಕಾರದ
ಆದೇಶದಂತೆ
ಕಳಸಾ-
ಬಂಡೂರಿ
ಯೋಜನೆಯಡಿ
ನೀರು
ಹರಿಸಲು
1,677
ಕೋಟಿ
ರು
ಮೀಸಲು.
*
ವಿಶ್ವ
ಬ್ಯಾಂಕ್
ನೆರವಿನ
ಡ್ರಿಪ್
ಯೋಜನೆಯಡಿ
ರೂ.
1,500
ಕೋಟಿ
ಮೊತ್ತದಲ್ಲಿ
ರಾಜ್ಯದ
58
ಆಣೆಕಟ್ಟುಗಳ
ಪುನಶ್ವೇತನ
ಮತ್ತು
ಅಭಿವೃದ್ಧಿಗೆ
ಪ್ರಸ್ತಾವನೆ.
ಇದಲ್ಲದೆ,
ಕೃಷಿ
ಮತ್ತು
ಪೂರಕ
ಚಟುವಟಿಕೆಗಳಿಗೆ
ಭರಪೂರ
ಅನುದಾನ
ನೀಡಿರುವ
ಸರ್ಕಾರ,
ಕೃಷಿ
ಕ್ಷೇತ್ರದ
ಅಭ್ಯುದಯ,
ಅನ್ನದಾತ
ರೈತರ
ಕಲ್ಯಾಣಕ್ಕಾಗಿ
ಒಟ್ಟು
ರೂ.
31,028
ಕೋಟಿ
ಅನುದಾನ
ಮೀಸಲು
ಇಟ್ಟಿದೆ.