ವಿಶ್ವಾಸಮತ ಗೆದ್ದ ಯಡಿಯೂರಪ್ಪ, 6 ತಿಂಗಳು ಸರ್ಕಾರ ಸೇಫ್
Recommended Video
ಬೆಂಗಳೂರು, ಜುಲೈ 29: ಬಿ.ಎಸ್ ಯಡಿಯೂರಪ್ಪ ನೇತೃತ್ವ ಬಿಜೆಪಿ ಸರ್ಕಾರ ವಿಧಾನಸಭೆಯ ಅಗ್ನಿ ಪರೀಕ್ಷೆಯಲ್ಲಿ ಪಾಸಾಗಿದೆ. ಮೂರು ಮುಖ್ಯಮಂತ್ರಿಗಳು, ಎರಡು ಬಾರಿ ವಿಶ್ವಾಸಮತ ಯಾಚನೆ ಕಂಡಿರುವ 15ನೇ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿಂದು ಯಡಿಯೂರಪ್ಪ ಅವರು ವಿಶ್ವಾಸಮತ ಯಾಚಿಸಿ ಬಹುಮತ ಸಾಬೀತು ಪಡಿಸಿದ್ದಾರೆ.
"ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಿದ ಬಳಿಕ ಮೊದಲು ಧನ ವಿನಿಯೋಗ ವಿಧೇಯಕದ ಬಗ್ಗೆ ಚರ್ಚೆ ನಡೆಸದೆ ಅಂಗೀಕಾರವಾಗಿದೆ. ಆದರೆ, ಪೂರಕ ವಿಧೇಯಕದ ಬಗ್ಗೆ ಚರ್ಚೆಯ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಟ್ಟು ಹಿಡಿದರು. ಸದ್ಯಕ್ಕೆ ಮುಂದಿನ 3 ತಿಂಗಳ ಕಾಲಕ್ಕೆ ಲೇಖಾನುದಾನಕ್ಕೆ ಅಂಗೀಕಾರ ಸಿಕ್ಕಿದೆ.
ಇದಕ್ಕೂ ಮುನ್ನ ವಿಶ್ವಾಸಮತ ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ವಿಶ್ವಾಸಮತದ ಬಗ್ಗೆ ಚರ್ಚೆಯಿಲ್ಲದೆ ಮತಕ್ಕೆ ಹಾಕಲು ವಿಪಕ್ಷ ನಾಯಕರು ಒಪ್ಪಿಗೆ ಸೂಚಿಸಿದರು.
LIVE: ಧ್ವನಿ ಮತದ ಮೂಲಕ ವಿಶ್ವಾಸ ಗೆದ್ದ ಸಿಎಂ ಯಡಿಯೂರಪ್ಪ
ಎಚ್. ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚಿಸಿದಾಗ ಸುದೀರ್ಘ ಕಾಲ ಚರ್ಚೆಯಾಗಿತ್ತು. ನಂತರ ಧ್ವನಿಮತದ ಬದಲಿಗೆ ಡಿವಿಷನ್ ಗೆ ಹಾಕಲಾಗಿತ್ತು. ಆದರೆ, ಈ ಬಾರಿ ಧ್ವನಿಮತಕ್ಕೆ ಹಾಕಲು ಸ್ಪೀಕರ್ ರಮೇಶ್ ಕುಮಾರ್ ಸೂಚಿಸಿದರು.
ಅದರಂತೆ, ವಿಶ್ವಾಸಮತದ ಪರ 106 ಮತಗಳು, ವಿಶ್ವಾಸಮತದ ವಿರುದ್ಧ 99 ಮತಗಳು ಬಂದು ಬಿಜೆಪಿ ಸರ್ಕಾರ ಬಹುಮತ ಸಾಬೀತು ಪಡಿಸಿದೆ. ಹೀಗಾಗಿ, ಸದನದ ನಡಾವಳಿ ನಿಮಯಗಳ ಪ್ರಕಾರ ಮುಂದಿನ ಆರು ತಿಂಗಳುಗಳ ಕಾಲ ವಿಶ್ವಾಸಮತ ಪ್ರಕ್ರಿಯೆಗೆ ಚಾಲನೆ ನೀಡುವಂತಿಲ್ಲ. ಬಿಜೆಪಿ ಸರ್ಕಾರ 6 ತಿಂಗಳು ಸೇಫಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಗೊತ್ತುವಳಿ ಮಂಡಿಸಿ ಬಹುಮತ ಸಾಬೀತು ಪಡಿಸಿದರು. ಈ ಕುರಿತ ಚರ್ಚೆಯಲ್ಲಿ ಅವರು ಪಾಲ್ಗೊಂಡ ಸಂದರ್ಭ. pic.twitter.com/TVkYlSgCNu
— CM of Karnataka (@CMofKarnataka) July 29, 2019
"ಧ್ವನಿಮತದ ಮೂಲಕ ನಡೆದು ವಿಶ್ವಾಸಮತದ ಪರವಾಗಿರುವವರು 'ಹೌದು' ಅಥವಾ 'ಇಲ್ಲ' ಎನ್ನುವ ಮೂಲಕ ಮತ ಚಲಾಯಿಸಿದ್ದಾರೆ. ಬಿಜೆಪಿ ಬಹುಮತ ಗಳಿಸಿದೆ" ಎಂದು ಸ್ಪೀಕರ್ ರಮೇಶ್ ಕುಮಾರ್ ಘೋಷಿಸಿದರು.
Winning the trust vote is, taking one more step closer towards a stable and strong administration. Will uphold the trust by ensuring transparent and accountable governance. I would like to thank the citizens, MLAs and each and every BJP Karyakartha for the trust placed in me.
— B.S. Yediyurappa (@BSYBJP) July 29, 2019
15ನೇ ವಿಧಾನಸಭೆಯಿಂದ ಒಟ್ಟು 17 ಶಾಸಕರು ಅನರ್ಹ ಎಂದು ಸ್ಪೀಕರ್ ರಮೇಶ್ ಕುಮಾರ್ ಜುಲೈ 28ರಂದು ಘೋಷಿಸಿದ್ದಾರೆ. ಭಾನುವಾರದಿಂದಲೇ ಆದೇಶ ಜಾರಿಯಲ್ಲಿರುತ್ತದೆ. ಸದನಕ್ಕೆ ಇಂದು ನಾಗೇಂದ್ರ, ಜಿ ಪರಮೇಶ್ವರ ವೈಯಕ್ತಿಕ ಕಾರಣದಿಂದ ಗೈರಾಗಿದ್ದರು.
ವಿಧಾನಸಭೆ
ಬಲಾಬಲ:
224-17=207
ಮ್ಯಾಜಿಕ್
ನಂಬರ್:
104
ಬಿಜೆಪಿ:
105+1
(ಎಚ್
ನಾಗೇಶ್
ಬೆಂಬಲ)
ಬಿಎಸ್ಪಿ:
1
ತಟಸ್ಥ
ಕಾಂಗ್ರೆಸ್:
76-11=65
ಜೆಡಿಎಸ್:
37-3=34
ಮೈತ್ರಿ:
99
ಅನರ್ಹ:
3+14=17