ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರೀಕ್ಷಿಸಿ! ಬಿಎಸ್ ಯಡಿಯೂರಪ್ಪರಿಂದ 'ಬ್ರೇಕಿಂಗ್ ನ್ಯೂಸ್'

By Mahesh
|
Google Oneindia Kannada News

Recommended Video

ಮಾರ್ಚ್ 16ರಂದು ಸಂಜೆ 5 ಗಂಟೆಗೆ ಬಿ ಎಸ್ ಯಡಿಯೂರಪ್ಪರ ಬ್ರೇಕಿಂಗ್ ನ್ಯೂಸ್ | Oneindia Kannada

ಬೆಂಗಳೂರು, ಮಾರ್ಚ್ 15:ಭಾರತೀಯ ಜನತಾ ಪಕ್ಷ(ಬಿಜೆಪಿ) ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಶುಕ್ರವಾರ(ಮಾರ್ಚ್ 16) ಬ್ರೇಕಿಂಗ್ ನ್ಯೂಸ್ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

'ನಾಳೆ(ಶುಕ್ರವಾರ) ಐದು ಗಂಟೆಗೆ ಬ್ರೇಕಿಂಗ್​ ನ್ಯೂಸ್​' ಎಂದು ಟ್ವೀಟ್​ ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಪರ-ವಿರೋಧ ಹಾಗೂ ಹಾಸ್ಯಮಯ ಟ್ವೀಟ್ ಗಳು ಹರಿದು ಬರುತ್ತಿವೆ.

BS Yeddyurappa all set to give Breaking news on March 16

ಕಾಂಗ್ರೆಸ್​ ಸರಕಾರದ ವಿರುದ್ಧ ಬಿಎಸ್​ವೈ ಟ್ವೀಟ್​ಗಳ ಮಳೆ ಸುರಿಸಿರುವ ಯಡಿಯೂರಪ್ಪ ಅವರು ಬ್ರೇಕಿಂಗ್ ನ್ಯೂಸ್ ನೀಡುವ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್​ ಸರ್ಕಾರದ ಭ್ರಷ್ಟಾಚಾರ, ಅವ್ಯಹಾರ, ಅನೈತಿಕ ಚಟುವಟಿಕೆಗಳ ಕುರಿತು ಮಹತ್ತರ ದಾಖಲೆ, ಸಿಡಿ ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆಯಿದೆ.

ಕೆಲವರು, ಯಡಿಯೂರಪ್ಪ ಅವರು ಮತ್ತೊಮ್ಮೆ ಕೆಜೆಪಿ ಸೇರುತ್ತಿದ್ದಾರೆ ಎಂದರೆ, ಮತ್ತೆ ಕೆಲವರು ರಾಜಕೀಯ ನಿವೃತ್ತಿ ಘೋಷಿಸಲಿದ್ದಾರೆ ಎಂದಿದ್ದಾರೆ.

ಮುಳುಗುತ್ತಿರುವ ವ್ಯಕ್ತಿಗೆ ಹುಲ್ಲುಕಡ್ಡಿಯೇ ಆಸರೆ ಎನ್ನುವಂತೆ, ಉತ್ತರಪ್ರದೇಶದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿದ್ದರೂ, ಅನ್ಯಪಕ್ಷಗಳ ಗೆಲುವನ್ನೇ ಸಿದ್ದರಾಮಯ್ಯ ಅವರು ಸಂಭ್ರಮಿಸುವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದರು.

English summary
BJP state president, former CM of Karnataka,BS Yeddyurappa is all set to give Breaking news on March 16 says his tweet on Thursday evening. Social media is abuzz with his tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X