ಯಡಿಯೂರಪ್ಪ : ಶಿಕಾರಿಪುರ ಜನಸಂಘದಿಂದ ಬಿಜೆಪಿ ಗದ್ದುಗೆ ತನಕ
ಬೆಂಗಳೂರು, ಏಪ್ರಿಲ್ 14: ರೈತ ಪರ ಹೋರಾಟದಿಂದ ರಾಜಕೀಯ ಜೀವನಕ್ಕೆ ಕಾಲಿರಿಸಿದ ಬೂಕನಕೆರೆಯ ಯಡಿಯೂರಪ್ಪ ಅವರ ರಾಜಕೀಯ ಜೀವನ ಹತ್ತು ಹಲವು ಹೋರಾಟ, ವಿವಾದಗಳನ್ನು ಕಂಡಿದೆ.
ಬೂಕನಕೆರೆ ಎಂಬ ಕುಗ್ರಾಮದ ಬಡ ರೈತ ಕುಟುಂಬದ ಯಡಿಯೂರಪ್ಪ ರಾತ್ರಿ ಕಳೆದು ಬೆಳಗಾಗುವುದರಲ್ಲಿ ನಾಯಕರಾದವರಲ್ಲ. ಯಾವುದೇ ಗಾಡ್ ಫಾದರ್ ಇಲ್ಲದೇ ಸ್ವಂತ ಪರಿಶ್ರಮ ಮೇಲೆ ಹಂತ ಹಂತವಾಗಿ ಬೆಳೆದವರು. ಹಳ್ಳಿಯಿಂದಲೇ ಹೋರಾಟ ಆರಂಭಿಸಿ ರಾಜಕೀಯ ನೆಲೆಗಟ್ಟನ್ನು ಕಂಡುಕೊಂಡವರು. [ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಿಎಸ್ವೈ]
ಪಕ್ಷ
ಸಂಘಟನೆಯಲ್ಲಿ
ನಿಪುಣರಾದ
ಯಡಿಯೂರಪ್ಪಅವರು
ಭಾಷಣಕ್ಕೆ
ನಿಂತರೆ
ಗುಡುಗು
ಸಿಡಿಲುಗಳ
ಮೇಳೈಕೆ.
ಇಂಥ
ಯಡಿಯೂರಪ್ಪ
ಧೃತಿಗೆಡದೆ
80ರ
ದಶಕದಲ್ಲಿ
ಎರಡು
ಶಾಸಕರಿದ್ದ
ಪಕ್ಷವನ್ನು
ಹಂತಹಂತವಾಗಿ
ಬೆಳೆಸುತ್ತಾ
ಶಾಸಕರ
ಸಂಖ್ಯೆಯನ್ನು
ನೂರರ
ಗಡಿ
ದಾಟುವಂತೆ
ಮಾಡಿದ್ದು
ಕಡಿಮೆ
ಸಾಧನೆ
ಏನಲ್ಲ.['ಸಿಎಂ
ಆಗುವುದಕ್ಕಿಂತ
150
ಸ್ಥಾನ
ಗೆಲ್ಲುವುದು
ನನ್ನ
ಗುರಿ':
ಬಿಎಸ್ವೈ]
ರೈತರ ಸಾಲ ಮನ್ನಾ, ಸಾರಾಯಿ ನಿಷೇಧ. ಲಾಟರಿ ನಿಷೇಧ, ರೈತರಿಗೆ ಶೇ.4 ಬಡ್ಡಿದರದಲ್ಲಿ ಸಾಲ, ಬಿಪಿಎಲ್ ಕುಟುಂಬಗಳ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಭಾಗ್ಯಲಕ್ಷ್ಮಿ ಯೋಜನೆ, ಉಚಿತ ಬೈಸಿಕಲ್ ವಿತರಣೆ ಯೋಜನೆ, ನಿರುದ್ಯೋಗ ನಿವಾರಣೆಗೆ ಸುವರ್ಣ ಕಾಯಕ ಉದ್ಯೋಗ ತರಬೇತಿಯೋಜನೆ, ಹಿರಿಯ ನಾಗರಿಕರ ಸಾಮಾಜಿಕ ಭದ್ರೆತೆಗೆ ಸಂಧ್ಯಾ ಸುರಕ್ಷಾ ಯೋಜನೆ, ಮೊದಲಾದ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ ಅಳವಡಿಸಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆ.[ಯಡಿಯೂರಪ್ಪಗೆ ರಾಜ್ಯಾಧ್ಯಕ್ಷ ಪಟ್ಟ : ಯಾರು, ಏನು ಹೇಳಿದರು?]
1975
:
ಶಿಕಾರಿಪುರ
ಪುರಸಭೆ
ಸದಸ್ಯರಾಗಿ
ಆಯ್ಕೆ,
1977ರಲ್ಲಿ
ಅಧ್ಯಕ್ಷ.
1980
:
ಬಿಜೆಪಿ
ತಾಲ್ಲೂಕು
ಘಟಕದ
ಅಧ್ಯಕ್ಷ.
1983
:
ಮಾಜಿ
ಸಚಿವ
ವೆಂಕಟಪ್ಪ
ಅವರನ್ನು
ಸೋಲಿಸಿ
ಮೊದಲ
ಬಾರಿಗೆ
ವಿಧಾನಸಭೆ
ಪ್ರವೇಶ
1985
:
88
ವರೆಗೆ
ಬಿಜೆಪಿ
ಜಿಲ್ಲಾಧ್ಯಕ್ಷ,
1988
ರಲ್ಲಿ
ರಾಜ್ಯಾಧ್ಯಕ್ಷ,
1992
ರಲ್ಲಿ
ರಾಷ್ಟ್ರೀಯ
ಕಾರ್ಯದರ್ಶಿ
ಸ್ಥಾನ
ನಿರ್ವಹಣೆ
1994
:
ವಿಧಾನಸಭೆ
ಪ್ರತಿಪಕ್ಷದ
ನಾಯಕ.
1999
:
ಮತ್ತೆ
ರಾಜ್ಯಾಧ್ಯಕ್ಷ,
2000
ರಲ್ಲಿ
ಮೇಲ್ಮನೆ
ಸದಸ್ಯ
[ಯಡಿಯೂರಪ್ಪ
ಮುಂದಿರುವ
6
ಪ್ರಮುಖ
ಸವಾಲುಗಳು]
2004
:
ಐದನೇ
ಬಾರಿಗೆ
ವಿಧಾನಸಭೆ
ಪ್ರವೇಶ,
ಇನ್ನೊಮ್ಮೆ
ಪ್ರತಿಪಕ್ಷದ
ನಾಯಕ
2006
:
ಸಮ್ಮಿಶ್ರ
ಸರ್ಕಾರ
ರಚನೆ,
ಉಪಮುಖ್ಯಮಂತ್ರಿ,
ಹಣಕಾಸು
ಮತ್ತು
ಅಬಕಾರಿ
ಖಾತೆಗಳ
ನಿರ್ವಹಣೆ.
2007
:
ನವೆಂಬರ್
12
ರಿಂದ
17ರ
ವರೆಗೆ
7
ದಿನ
ಮಾತ್ರ
ಮುಖ್ಯಮಂತ್ರಿಯಾಗಿ
ಪದವಿ
ಅಲಂಕರಿಸಿದ್ದರು.
2008
:
ಮೇ
30ರ
ಶುಕ್ರವಾರ
25ನೇ
ಮುಖ್ಯಮಂತ್ರಿಯಾಗಿ
ಅಧಿಕಾರ
ಸ್ವೀಕಾರ
ನಂತರ
ಸದಾನಂದ
ಗೌಡರಿಗೆ
ಸಿಎಂ
ಪಟ್ಟ
ಒಲಿದಿದ್ದು,
ಬಂಡಾಯವೆದ್ದು
ಜಗದೀಶ್
ಶೆಟ್ಟರ್
ರನ್ನು
ಕುರ್ಚಿಯಲ್ಲಿ
ಕೂರಿಸಿದ್ದು
ಸಾಧನೆಗಿಂತ
ವೈಫಲ್ಯ
ಎನ್ನಬಹುದು.
*
ಬಿಜೆಪಿಯಿಂದ
ಹೊರ
ಬಿದ್ದ
ಮೇಲೆ
ಕರ್ನಾಟಕ
ಜನತಾ
ಪಕ್ಷ
ಸ್ಥಾಪನೆ,
ಎಲ್ಲಾ
ಕ್ಷೇತ್ರಗಳಲ್ಲೂ
ಸ್ಪರ್ಧಿಸುವುದಾಗಿ
ಘೋಷಣೆ
ಮಾಡಿದರು.
*
ಕೆಜೆಪಿ
ತಕ್ಕಮಟ್ಟಿನ
ಸಾಧನೆ
ಮಾಡಿದರೂ
ಆಂತರಿಕ
ಒತ್ತಡದಿಂದ
ರಾಷ್ಟ್ರ
ರಾಜಕೀಯದ
ಕನಸಿನಿಂದ
ತಾವೇ
ಬೆಳೆಸಿದ
ಪಕ್ಷವನ್ನು
ತೊರೆದರು.
ಕರ್ನಾಟಕದ ಬಿಜೆಪಿ ಅಧ್ಯಕ್ಷರಾಗಿ ಬಿಎಸ್ ಯಡಿಯೂರಪ್ಪ
2014: ಜನವರಿಯಲ್ಲಿ ಬಿಜೆಪಿಗೆ ಮರು ಸೇರ್ಪಡೆ, ಮೇ ತಿಂಗಳಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಸ್ಪರ್ಧೆ, ಗೆಲುವು.
* ಆಗಸ್ಟ್ ತಿಂಗಳಿನಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆ.
2016: ಬಿಜೆಪಿ ಸಂಸದರಾಗಿದ್ದ ಯಡಿಯೂರಪ್ಪ ಅವರು ಏಪ್ರಿಲ್ 14, 2016ರಂದು ಬಿಜೆಪಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ.