ಕೊಳೆವೆ ಬಾವಿ ದುರಂತ ಏಕೆ ತಡೆಯಲಾಗುತ್ತಿಲ್ಲ?
ಬೆಂಗಳೂರು, ಆ.26 : ಕೊಳೆವೆ ಬಾವಿ ದುರಂತದ ಬಗ್ಗೆ ಹೈಕೋರ್ಟ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇಂತಹ ದುರಂತ ನಡೆದಾಗ ಸ್ಥಳೀಯ ಜಿಲ್ಲಾ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಿ ಎಂದೂ ಕೋರ್ಟ್ ಮೌಖಿಕ ಆದೇಶ ನೀಡಿದೆ.
ಸೋಮವಾರ
ಮುಖ್ಯ
ನ್ಯಾಯಮೂರ್ತಿ
ಡಿ.ಎಚ್.ವಘೇಲಾ
ಹಾಗೂ
ನ್ಯಾಯಮೂರ್ತಿ
ಅಶೋಕ್
ಬಿ
ಹಿಂಚಿಗೇರಿ
ಅವರಿದ್ದ
ವಿಭಾಗೀಯ
ಪೀಠವು,
ಬಾಗಲಕೋಟೆ
ಜಿಲ್ಲೆಯಲ್ಲಿ
ನಡೆದ
ಕೊಳವೆ
ಬಾವಿ
ದುರಂತದ
ನಂತರ
ರಾಜ್ಯ
ಕಾನೂನು
ಸೇವಾ
ಪ್ರಾಧಿಕಾರ
ಸಲ್ಲಿಸಿರುವ
ಪಿಐಎಲ್
ವಿಚಾರಣೆ
ನಡೆಸಿತು.
ಈ
ಸಂದರ್ಭದಲ್ಲಿ
ಮುಂದೆ
ಇಂತಹ
ದುರಂತ
ನಡೆಯದಂತೆ
ಎಚ್ಚರಿಕೆ
ವಹಿಸಬೇಕು
ಎಂದು
ಆದೇಶ
ನೀಡಿತು.
ಕೊಳವೆ ಬಾವಿ ದುರಂತಗಳು ನಡೆದಾಗ ಸ್ಥಳೀಯ ಜಿಲ್ಲಾ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಿ ಎಂದೂ ಕೋರ್ಟ್ ಮೌಕಿಕ ಸೂಚನೆ ನೀಡಿತು. ಕೊಳವೆ ಬಾವಿ ದುರಂತ ತಪ್ಪಿಸಲು ಸುಪ್ರೀಂಕೋರ್ಟ್ ಹೊರಡಿಸಿರುವ ನಿಯಮಗಳನ್ನು ಸರ್ಕಾರ ಏಕೆ ಅನುಷ್ಠಾನಗೊಳಿಸಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿತು. [ತಿಮ್ಮಣ್ಣ ಹಟ್ಟಿ ಶವದ ತುಣುಕಿಗೆ ಅಂತ್ಯ ಸಂಸ್ಕಾರ]
ಮುಂದಿನ ವಿಚಾರಣೆ ವೇಳೆ ಸರ್ಕಾರ ಇಲ್ಲಿಯವರೆಗೆ ರಾಜ್ಯದಲ್ಲಿ ಎಷ್ಟು ಕೊಳವೆ ಬಾವಿ ಕೊರೆಯಲಾಗಿದೆ? ಅವುಗಳಲ್ಲಿ ಎಷ್ಟು ನಿರುಪಯುಕ್ತವಾಗಿವೆ? ಆ ಪೈಕಿ ಎಷ್ಟು ಕೊಳವೆ ಬಾವಿಗಳನ್ನು ಮುಚ್ಚಲಾಗಿದೆ? ಇನ್ನೂ ಎಷ್ಟನ್ನು ಮುಚ್ಚಬೇಕಾಗಿದೆ ಮುಂತಾದ ಮಾಹಿತಿಯನ್ನು ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿತು. [ಕೊಳವೆ ಬಾವಿ ಮುಚ್ಚದಿದ್ದರೆ ಪೊಲೀಸ್ ಕೇಸ್]
ಸರ್ಕಾರಿ ವಕೀಲರು ಕೋರ್ಟ್ಗೆ ಈ ಬಗ್ಗೆ ಮಾಹಿತಿ ನೀಡಿ,ಬಾಗಲಕೋಟೆ ಘಟನೆ ನಂತರ ರಾಜ್ಯ ಸರ್ಕಾರ ನಿರುಪಯುಕ್ತ ಕೊಳವೆ ಬಾವಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೊಳಿಸಿದ್ದು, ಆ.31ರೊಳಗೆ ಎಲ್ಲ ನಿರುಪಯುಕ್ತ ಕೊಳವೆಬಾವಿ ಮುಚ್ಚಲು ಅಂತಿಮ ಗಡುವು ನೀಡಿದೆ. ಈ ಕುರಿತು ವರದಿ ನೀಡಲು ಎರಡು ವಾರಗಳ ಕಾಲಾವಕಾಶ ಬೇಕು ಎಂದು ಮನವಿ ಮಾಡಿದರು. [ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳು]