ಕುಮಾರಸ್ವಾಮಿ ಬಹುಮತ ಸಾಬೀತು ಮಾಡಲ್ಲ : ಯಡಿಯೂರಪ್ಪ
Recommended Video
ಬೆಂಗಳೂರು, ಜುಲೈ 15 : "ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಎಚ್. ಡಿ. ಕುಮಾರಸ್ವಾಮಿ ವಿಶ್ವಾಸಮತಯಾಚನೆಯಲ್ಲಿ ಗೆಲ್ಲುವುದಿಲ್ಲ, " ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಸಂಜೆ ಮಾತನಾಡಿದ ಅವರು, "ಶಾಸಕರು ರೆಸಾರ್ಟ್ಗೆ ಬರಬೇಕು ಎನ್ನುತ್ತಿದ್ದಾರೆ. ಇಂದು ರೆಸಾರ್ಟ್ನಲ್ಲಿಯೇ ವಾಸ್ತವ್ಯ ಹೂಡುತ್ತೇನೆ" ಎಂದು ಹೇಳಿದರು.
ಯಡಿಯೂರಪ್ಪ ಸಿಎಂ ಆಗಲಿ ಎಂದು ಪ್ರಾರ್ಥಿಸಿ ಮಂಡ್ಯದಲ್ಲಿ ನಾಳೆ ವಿಶೇಷ ಪೂಜೆ
'ನಮಗೆ ರಿವರ್ಸ್ ಆಪರೇಷನ್ ಭೀತಿಯೇ ಇಲ್ಲ. ಗುರುವಾರದ ತನಕ ನಮ್ಮ ಶಾಸಕರು ರೆಸಾರ್ಟ್ನಲ್ಲಿಯೇ ಇರುತ್ತಾರೆ. ಸುಪ್ರೀಂಕೋರ್ಟ್ ಆದೇಶವನ್ನು ನಾವು ಕಾದು ನೋಡುತ್ತೇವೆ" ಎಂದು ಯಡಿಯೂರಪ್ಪ ತಿಳಿಸಿದರು.
ಪಕ್ಷದೊಳಗೆ ಯಡಿಯೂರಪ್ಪಗೆ ಶುರುವಾಯ್ತು ಹೊಸ ತಲೆನೋವು!
"ನಾವು ಅವಿಶ್ವಾಸ ನಿರ್ಣಯ ಮಂಡಿಸುವ ಮೊದಲು ಅವರೇ ವಿಶ್ವಾಸಮತಯಾಚನೆ ಮಾಡುತ್ತೇವೆ ಎಂದು ಹೇಳಿದರು. ಆದ್ದರಿಂದ, ಅವಕಾಶ ನಿಡೋಣ. ಅದರಲ್ಲಿ ಏನೂ ವ್ಯತ್ಯಾಸ ಆಗಲ್ಲ" ಎಂದು ಹೇಳಿದರು.
ಸಿಎಂ ರಾಜೀನಾಮೆಗೆ ಬಿಜೆಪಿ ಧರಣಿ : ಯಡಿಯೂರಪ್ಪ ಹೇಳಿದ್ದೇನು?
"ಗುರುವಾರದ ತನಕ ವಿಧಾನಸಭೆಯ ಯಾವುದೇ ಕಾರ್ಯ ಕಲಾಪ ಮಾಡಬಾರದು ಎಂದು ಸ್ಪೀಕರ್ಗೆ ಮನವಿ ಸಲ್ಲಿಸಿದ್ದೆವು. ಅದರಂತೆ ಸ್ಪೀಕರ್ ವಿಧಾನಸಭೆ ಕಲಾಪವನ್ನು ಗುರುವಾರಕ್ಕೆ ಮುಂದೂಡಿದ್ದಾರೆ. ಅದನ್ನು ನಾವು ಗೌರವಿಸುತ್ತೇವೆ" ಎಂದರು.
ಸೋಮವಾರದ ಅಧಿವೇಶನ ಮುಗಿಸಿ ಬಿಜೆಪಿ ಶಾಸಕರು ರಾಜನಕುಂಟೆ ಬಳಿಯ ರಮಾಡ ಹೋಟೆಲ್ಗೆ ತೆರಳಿದ್ದಾರೆ. ಗುರುವಾರದ ತನಕ ಶಾಸಕರು ಅಲ್ಲಿಯೇ ವಾಸ್ತವ್ಯ ಹೂಡಲಿದ್ದು, ಯಡಿಯೂರಪ್ಪ ಸಹ ಶಾಸಕರ ಜೊತೆ ಇಂದು ವಾಸ್ತವ್ಯ ಹೂಡಲಿದ್ದಾರೆ.