ಕುಮಾರಸ್ವಾಮಿ ಕಣ್ಣೀರು ಸುರಿಸಿದ್ದನ್ನು ನಟನೆ ಎಂದ ಬಿಜೆಪಿ
ಬೆಂಗಳೂರು, ಜುಲೈ 15: ಕುಮಾರಸ್ವಾಮಿ ಅವರು ನಿನ್ನೆ ನಡೆದ ಜೆಡಿಎಸ್ ಪಕ್ಷದ ಕಾರ್ಯಕ್ರಮದಲ್ಲಿ ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದನ್ನು ಬಿಜೆಪಿ ಕಾಲೆಳೆದಿದೆ.
ಟ್ವೀಟರ್ನಲ್ಲಿ ಕುಮಾರಸ್ವಾಮಿ ಅವರು ಅಳುತ್ತಿರುವ ವಿಡಿಯೋ ಪ್ರಕಟಿಸಿರುವ ರಾಜ್ಯ ಬಿಜೆಪಿ, ಕುಮಾರಸ್ವಾಮಿ ಅವರು ಅತ್ಯುತ್ತಮ ನಟ, ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಬೇಕು ಎಂದು ಹೇಳಿದೆ.
& the best acting award goes to..
— BJP Karnataka (@BJP4Karnataka) July 15, 2018
Our country has produced talented actors. Actors who have mesmerised the audience with their brilliant performance, here we have another legendary actor Mr Kumaraswamy, an actor who has constantly fooled common man with his amazing acting skills pic.twitter.com/SNfi9LsAS6
ನಮ್ಮ ದೇಶ ಹಲವು ಅತ್ಯುತ್ತಮ ನಟರನ್ನು ಕೊಡುಗೆಯಾಗಿ ನೀಡಿದೆ. ಹಲವು ನಟರು ತಮ್ಮ ಅತ್ಯುತ್ತಮ ನಟನೆಯಿಂದ ಜನರ ಮನವನ್ನು ಗೆದ್ದಿದ್ದಾರೆ. ಕುಮಾರಸ್ವಾಮಿ ಅವರು ಕೂಡಾ ಅಂತಹಾ ಒಬ್ಬ ಅತ್ಯದ್ಭುತ ನಟರಲ್ಲಿ ಒಬ್ಬರು ಎಂದು ಬಿಜೆಪಿ ಕಾಲೆಳೆದಿದೆ.
ಕುಮಾರಸ್ವಾಮಿ ಕಾಲಕಾಲಕ್ಕೆ ತಮ್ಮ ಸುಳ್ಳು ಕಣ್ಣೀರಿನಿಂದ, ನಟನಾ ಕೌಶಲದಿಂದ ನಾಡಿನ ಜನರನ್ನು ಮೂರ್ಖರನ್ನಾಗಿ ಮಾಡುತ್ತಲೇ ಇರುತ್ತಾರೆ ಎಂದು ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೇಳಿದೆ.
ಜನರು ವಿಶ್ವಾಸ ತೋರಲಿಲ್ಲವೆಂದು ನೊಂದು ಕುಮಾರಸ್ವಾಮಿ ಕಣ್ಣೀರು
ಈ ವಿಡಿಯೋ ಅಪ್ಲೋಡ್ ಆದ ಒಂದು ಗಂಟೆಯಲ್ಲಿ 256 ರೀಟ್ವೀಟ್ ಆಗಿದ್ದು, 623 ಜನ ಲೈಕ್ ಮಾಡಿದ್ದಾರೆ. ಈ ಟ್ವೀಟ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಲವರು ಬಿಜೆಪಿಪರ ಪ್ರತಿಕ್ರಿಸಿದ್ದರೆ, ಹಲವರು ವಿರೋಧಿಸಿ ಟ್ವೀಟ್ ಮಾಡಿದ್ದಾರೆ.