ಸೋಮವಾರ ಶ್ರೀರಾಮುಲುಗೆ ಬಿಜೆಪಿ ಆಹ್ವಾನ?
ಬೆಂಗಳೂರು. ಜ.4 : ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಮರಳಿ ಕರೆತಂದಿರುವ ಬಿಜೆಪಿ ನಾಯಕರು ಸದ್ಯ ಬಿಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಬಿ.ಶ್ರೀರಾಮುಲು ಅವರತ್ತ ಗಮನ ಹರಿಸಿದ್ದಾರೆ. ಸೋಮವಾರ ಬಿಜೆಪಿ ನಾಯಕರು ಪಕ್ಷಕ್ಕೆ ಮರಳುವಂತೆ ಅವರಿಗೆ ಆಹ್ವಾನ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಬಿಎಸ್ಆರ್
ಕಾಂಗ್ರೆಸ್
ಅಧ್ಯಕ್ಷ
ಬಿ.ಶ್ರೀರಾಮುಲು
ಜೊತೆಗೆ
ಈಗಾಗಲೇ
ಮಾಜಿ
ಉಪಮುಖ್ಯಮಂತ್ರಿ
ಕೆ.ಎಸ್.ಈಶ್ವರಪ್ಪ
ಮಾತುಕತೆ
ನಡೆಸಿದ್ದಾರೆ.
ಪಕ್ಷದ
ನಾಯಕರು
ಅವರನ್ನು
ಭೇಟಿಯಾಗಿ
ಅಧಿಕೃತವಾಗಿ
ಪಕ್ಷಕ್ಕೆ
ಮರಳುವಂತೆ
ಅವರನ್ನು
ಆಹ್ವಾನಿಸುವ
ಕಾರ್ಯ
ಮಾತ್ರ
ಬಾಕಿ
ಇದೆ.
[ಬಿಜೆಪಿಗೆ
ಮರಳಲು
ಸಜ್ಜಾದ
ಶ್ರೀರಾಮುಲು]
ಪಕ್ಷದ ಮೂಲಗಳ ಮಾಹಿತಿಯಂತೆ ಸೋಮವಾರ ಬಿಜೆಪಿ ನಾಯಕರು ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಶ್ರೀರಾಮುಲು ಅವರನ್ನು ಭೇಟಿಯಾಗಿ ಅವರನ್ನು ಪಕ್ಷಕ್ಕೆ ಆಹ್ವಾನಿಸಲಿದ್ದಾರೆ. ಬಿಜೆಪಿ ನಾಯಕರಿಂದ ಆಹ್ವಾನ ಬಂದ ನಂತರ ಶ್ರೀರಾಮುಲು ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ. [ಪ್ರಧಾನಿ ಪಟ್ಟಕ್ಕೆ ಮೋದಿ ಶ್ರೀರಾಮುಲು ಜಪ]
ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿಯ ವಿವಿಧ ನಾಯಕರು ಈಗಾಗಲೇ ಶ್ರೀರಾಮುಲು ಅವರೊಂದಿಗೆ ಮಾತುಕತೆ ನಡೆಸಿದ್ದು, ಬಿಜೆಪಿಗೆ ಮರಳಿದರೆ ಆಗುವ ಅನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸದ್ಯ ಯಡಿಯೂರಪ್ಪ ಪಕ್ಷಕ್ಕೆ ಮರಳಿರುವುದರಿಂದ ಶ್ರೀರಾಮುಲು ಅವರು ವಾಪಸ್ ಆಗುವ ಸಾಧ್ಯತೆ ಇದೆ.
ಶ್ರೀರಾಮುಲು ಅವರು ಪಕ್ಷಕ್ಕೆ ಮರಳಿದರೆ ಬಳ್ಳಾರಿ, ಚಿತ್ರದುರ್ಗ, ರಾಯಚೂರು ಮುಂತಾದ ಕ್ಷೇತ್ರಗಳ ಜವಾಬ್ದಾರಿಯನ್ನು ಅವರಿಗೆ ವಹಿಸುವ ಸಾಧ್ಯತೆ ಇದೆ. ಕೆಲವು ಜಿಲ್ಲೆಗಳಲ್ಲಿ ಬಿಎಸ್ಆರ್ ಕಾಂಗ್ರೆಸ್ ಪ್ರಭಾವ ಹೆಚ್ಚಾಗಿದ್ದು, ಅಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ಶ್ರೀರಾಮುಲು ಅವರಿಗೆ ವಹಿಸಲು ನಿರ್ಧರಿಸಲಾಗಿದೆ.