ರಾಜ್ಯದ ಸಂದಿಗ್ಧ ಸ್ಥಿತಿಯಲ್ಲಿ ಸೂಪರ್ ಬಜೆಟ್: ನಳಿನ್ ಕುಮಾರ್ ಕಟೀಲ್
ಬೆಂಗಳೂರು, ಮಾರ್ಚ್.08: ಕರ್ನಾಟಕದ 2021-22ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬಗ್ಗೆ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರು ನೆರೆ, ಪ್ರಾಕೃತಿಕ ವಿಕೋಪ, ಕೋವಿಡ್ ಸಂಕಷ್ಟದ ನಂತರ ತೆರಿಗೆ ಹೆಚ್ಚಳ ಇಲ್ಲದ ಅತ್ಯುತ್ತಮ ಬಜೆಟ್ ಅನ್ನು ಮಂಡಿಸಿದ್ದಾರೆ. ಮಹಿಳಾ ದಿನಾಚರಣೆಯಂದೇ ಈ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳು ಮಹಿಳೆಯರಿಗಾಗಿ ವಿಶೇಷ ಅನುದಾನವನ್ನು ನೀಡಿದ್ದಾರೆ. (1) #ಕರ್ನಾಟಕಬಜೆಟ್2021
— Nalinkumar Kateel (@nalinkateel) March 8, 2021
"ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ನೆರೆ, ಪ್ರಾಕೃತಿಕ ವಿಕೋಪ, ಕೊವಿಡ್-19 ಸಂಕಷ್ಟದ ನಂತರ ತೆರಿಗೆ ಹೆಚ್ಚಳ ಇಲ್ಲದ ಅತ್ಯುತ್ತಮ ಬಜೆಟ್ ಅನ್ನು ಮಂಡಿಸಿದ್ದಾರೆ. ಮಹಿಳಾ ದಿನಾಚರಣೆಯಂದೇ ಈ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳು ಮಹಿಳೆಯರಿಗಾಗಿ ವಿಶೇಷ ಅನುದಾನವನ್ನು ನೀಡಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಬಜೆಟ್ 2021: ಕೃಷಿ ಕ್ಷೇತ್ರಕ್ಕೆ ಏನು? ಎಷ್ಟು ಹಂಚಿಕೆ ಮಾಡಲಾಗಿದೆ?
ಕರ್ನಾಟಕದ 2021-22ನೇ ಸಾಲಿನ ಬಜೆಟ್ ಒಟ್ಟು ಗಾತ್ರ 2,46,207 ಕೋಟಿ ರೂಪಾಯಿ ಆಗಿದೆ. ಸರ್ಕಾರದ ನಿರೀಕ್ಷಿತ ಆದಾಯ 2.43 ಲಕ್ಷ ಕೋಟಿ ರೂಪಾಯಿ ಆಗಿದೆ. ಒಟ್ಟು ವೆಚ್ಚ 2.46 ಲಕ್ಷ ರೂಪಾಯಿ ತಗಲುತ್ತದೆ. ಬಜೆಟ್ ನ ಒಟ್ಟು ಕೊರತೆ 15,134 ಕೋಟಿ ರೂಪಾಯಿ ಆಗುತ್ತದೆ.
ಸರ್ಕಾರಕ್ಕೆ ಬರುವ ಒಟ್ಟು ಆದಾಯ 100 ರೂಪಾಯಿ ಆಗಿದ್ದರೆ ಅದರಲ್ಲಿ ರಾಜ್ಯ ತೆರಿಗೆ ಮೂಲಕ 50 ರೂಪಾಯಿ, ಸಾಲದ ಮೂಲಕ 29 ರೂಪಾಯಿ, ಕೇಂದ್ರ ತೆರಿಗೆ ಮೂಲಕ 10 ರೂಪಾಯಿ, ಕೇಂದ್ರ ಸರ್ಕಾರದ ಸಹಾಯ ಅನುದಾನದ ಅಡಿ 6 ರೂಪಾಯಿ, ರಾಜ್ಯದ ತೆರಿಗೇತರ ರಾಜಸ್ವ 3 ರೂಪಾಯಿ ಮತ್ತು ಸಾರ್ವಜನಿಕ ಲೆಕ್ಕ ನಿವ್ವಳ 2 ರೂಪಾಯಿ ಆಗಲಿದೆ.
Recommended Video