ಆದಾಯ ತೆರಿಗೆ ದಾಳಿ: ಎಚ್ಡಿಕೆ ಹಳೆಯ ವಿಡಿಯೋ ಹಂಚಿಕೊಂಡ ಬಿಜೆಪಿ
ಬೆಂಗಳೂರು, ಮಾರ್ಚ್ 29: ಜೆಡಿಎಸ್ ನಾಯಕರ ಸಂಬಂಧಿಕರಿಗೆ ಸೇರಿದ ಆಸ್ತಪಾಸ್ತಿಗಳ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಗೆ ಬಿಜೆಪಿ ನಾಯಕರೇ ಕಾರಣ ಎಂದು ಅರೋಪಿಸಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಅವರದೇ ಹಳೆಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಕಳೆದ ಜನವರಿಯಲ್ಲಿ ಯಶ್, ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್ ಸೇರಿದಂತೆ ಅನೇಕ ನಟರು, ನಿರ್ಮಾಪಕ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆದಿತ್ತು. ಆಗ ಕುಮಾರಸ್ವಾಮಿ ಅವರು ಹೇಗೆ ಪ್ರತಿಕ್ರಿಯೆ ನೀಡಿದ್ದರು ಮತ್ತು ಗುರುವಾರ ನಡೆದ ದಾಳಿಗೆ ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದನ್ನು ಜೋಡಣೆ ಮಾಡಿ ವಿಡಿಯೋ ಹಂಚಿಕೊಂಡಿದೆ.
ಐಟಿ ದಾಳಿ ಮಾಡಿ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ: ಎಚ್ಡಿಕೆ
ಇದಕ್ಕೆ ಕಮಿಷನ್ ಕೊಡುವ ಗುತ್ತಿಗೆದಾರನ ಮೇಲಿನ ಪ್ರೇಮ ಬಯಲು! ಎಂದು ಶೀರ್ಷಿಕೆ ನೀಡಿದೆ. ಜತೆಗೆ ಜನ ನಿಮ್ಮನ್ನು ಕ್ಷಮಿಸುವುದಿಲ್ಲ ಎಂಬ ಹ್ಯಾಷ್ಟ್ಯಾಗ್ ಮಾಡಿದೆ.
ಜನವರಿಯಲ್ಲಿ ಸಿನಿಮಾ ನಟರ ಆಸ್ತಿಗಳ ಮೇಲಿನ ಆದಾಯ ತೆರಿಗೆ ದಾಳಿಗೆ ಕುಮಾರಸ್ವಾಮಿ ಅವರು, ಕೇಂದ್ರ ಸರ್ಕಾರದ ತೆರಿಗೆ ಇಲಾಖೆಯ ದಿನಚರಿ ಮಾಡಿದ್ದರು ಎಂದು ಪ್ರತಿಕ್ರಿಯಿಸಿದ್ದರು. ಇಲ್ಲಿ ಸಿನಿಮಾ ನಟರು ಬೇರೆ, ಸಾರ್ವಜನಿಕರು ಬೇರೆ, ರಾಜಕಾರಣಿಗಳು ಬೇರೆ ಎನ್ನುವ ಪ್ರಶ್ನೆ ಇಲ್ಲ. ತೆರಿಗೆ ಇಲಾಖೆಯವರು ನಿರಂತರವಾದ ಪ್ರಕ್ರಿಯೆ ಏನಿದೆ ಅದನ್ನು ಮಾಡಿಕೊಂಡಿದ್ದಾರೆ ಎಂದಿದ್ದರು.
ತೆರಿಗೆ ಅಧಿಕಾರಿಗಳು ಮಾರ್ಗದರ್ಶಿಗೆ ಅನುಗುಣವಾಗಿ ಸಿದ್ಧತೆ ನಡೆಸಿಯೇ ಹೋಗುತ್ತಾರೆ ಎನ್ನುವುದು ನನಗೆ ಇರುವ ಮಾಹಿತಿ. ತೆರಿಗೆ ಇಲಾಖೆ ಇರುವುದೇ ತೆರಿಗೆ ವಂಚನೆ ಆಗಿದೆ ಎಂಬ ಮಾಹಿತಿ ಬಂದಾಗ ಪರಿಶೀಲನೆ ಮಾಡಲು. ಅವರ ಕರ್ತವ್ಯ ಅವರು ಮಾಡುತ್ತಾರೆ ಅಷ್ಟೆ. ರಾಜಕೀಯ ಪ್ರೇರಿತ ಎನ್ನುವುದಕ್ಕಿಂತ ಅವರ ಕರ್ತವ್ಯ ಅವರು ಮಾಡಿದ್ದಾರೆ. ಮಾಹಿತಿಗಳು ಸರಿಯಾಗಿದ್ದರೆ ಅವರೇನು ಮಾಡಲು ಆಗುತ್ತದೆ ಎಂದು ಹೇಳಿದ್ದರು.
ರಾಜಕೀಯ ಪ್ರೇರಿತ ಐಟಿ ದಾಳಿ ಆರೋಪ: ದೋಸ್ತಿ ನಾಯಕರಿಂದ ಪ್ರತಿಭಟನೆ
ನಟರಿಗೇನು ವಿಶೇಷ ಕಾನೂನು ಇರುತ್ತದೆ. ನಾಡಿನ ಸಮಸ್ತ ಜನತೆ ದೇಶದ ಕಾನೂನಿನ ವ್ಯವಸ್ಥೆಯಲ್ಲಿ ಜೀವನ ಮಾಡುತ್ತಾರೆ. ಎಲ್ಲ ಇಲಾಖೆಗಳ ಬಗ್ಗೆಯೂ ಈ ರೀತಿ ಕಾನೂನು ಉಲ್ಲಂಘನೆ ಮಾಡಿದರೆ ದಾಳಿಗಳು ನಡೆಯುತ್ತವೆ ಎಂದು ಕುಮಾರಸ್ವಾಮಿ ಹೇಳಿದ್ದರು.
ಐಟಿ ದಾಳಿ: ಕುಮಾರಸ್ವಾಮಿ, ಕಾಂಗ್ರೆಸ್ಸಿಗೆ, ಬಿಜೆಪಿ ಎಸೆದ ಖಡಕ್ 'ಪಂಚ' ಪ್ರಶ್ನೆಗಳು
ಗುರುವಾರ ಐಟಿ ದಾಳಿ ನಡೆದ ಬಳಿಕ ಅವರು, ರಾಜ್ಯ ಬಿಜೆಪಿಯ ಒಬ್ಬ ವ್ಯಕ್ತಿ ಹಲವು ಹೆಸರುಗಳನ್ನು ಸಂಗ್ರಹಿಸಿ ಅಮಿತ್ ಶಾಗೆ ಹೆಸರು ಕಳುಹಿಸುತ್ತಾನೆ. ಅಲ್ಲಿಂದ ಐಟಿ ಮುಖ್ಯಸ್ಥ ಬಾಲಕೃಷ್ಣ ಅವರಿಗೆ ಹೆಸರು ಕಳುಹಿಸುತ್ತಾರೆ ಎಂದು ಆರೋಪಿಸಿದ್ದರು. ಬಿಜೆಪಿ ರಾಜಕೀಯ ಉದ್ದೇಶಕ್ಕಾಗಿ ಈ ದಾಳಿ ನಡೆಸಿದೆ ಎಂದು ಹೇಳಿದ್ದರು.