ರೈತರ ಬಗ್ಗೆ ಚರ್ಚೆಗೆ ಅಧಿವೇಶನ ಕರೆಯಿರಿ: ಬಿಎಸ್ ವೈ
ಬೆಂಗಳೂರು, ಅ. 04: ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಆಗುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ. ಸಾಲ ಮನ್ನಾ ಮಾಡಲು ಸರ್ಕಾರ ಮುಂದಾಗುತ್ತಿಲ್ಲ. ನೀರಾವರಿ ಯೋಜನೆಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ. ಈ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಿಎಸ್ ಯಡಿಯೂರಪ್ಪ ಅವರು ಆಗ್ರಹಿಸಿದ್ದಾರೆ.
ರೈತ
ಚೈತನ್ಯ
ಯಾತ್ರೆ
ಮುಂದುವರೆಸಿರುವ
ಯಡಿಯೂರಪ್ಪ
ಅವರು
ಮತ್ತೊಮ್ಮೆ
ಸಿದ್ದರಾಮಯ್ಯ
ಅವರನ್ನು
ಗುರಿಯಾಗಿಸಿಕೊಂಡು
ಮಾತನಾಡಿದರು.
ಪ್ರಧಾನಿ
ಮೋದಿ
ಅವರು
ಮಹಾತ್ಮಾ
ಗಾಂಧೀಜಿ
ಹುಟ್ಟಿದ
ನಾಡಿನಿಂದ
ಬೆಳೆದು
ಬಂದವರು.
ಇಡೀ
ವಿಶ್ವವೇ
ಮೆಚ್ಚುವಂಥ
ಕಾರ್ಯ
ಮಾಡುತ್ತಿದ್ದಾರೆ.
ಅವರ
ಬಗ್ಗೆ
ಸಿದ್ದರಾಮಯ್ಯ
ಅವರ
ಹೇಳಿಕೆ
ಸರಿಯಲ್ಲ.
ಇದು
ಅವರಿಗೆ
ಶೋಭೆ
ತರುವುದಿಲ್ಲ
ಎಂದರು.[ಪ್ರಸಕ್ತ
ವರ್ಷಎಲ್ಲೆಲ್ಲಿ,ಎಷ್ಟೆಷ್ಟು
ರೈತರು
ಆತ್ಮಹತ್ಯೆಗೆ
ಶರಣು?]
ರೈತರಿಗೆ ಆತ್ಮವಿಶ್ವಾಸ ತುಂಬಲು ರೈತ ಚೈತನ್ಯಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತರ ಸಾಲ ಮನ್ನಾ ಮಾಡಿಸುವ ತನಕ ವಿರಮಿಸುವುದಿಲ್ಲ. ಕೊಟ್ಟ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸದೇ ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡುವುದೇ ನನ್ನ ಗುರಿ ಎಂದು ಯಡಿಯೂರಪ್ಪ ಘೋಷಿಸಿದರು. [ಕಿತ್ತಳೆ ಬೆಳೆದ ಸುರೇಶ್ ಸುಬ್ಬಯ್ಯ ಸಾಧನೆ ಕಥೆ]
ಎಲ್ಲಾ ಸಾಲ ಮನ್ನ ಮಾಡಿ: ರೈತರಿಗೆ ಸಾಲದ ಕಂತು ಕಟ್ಟಲು ಸಮಯಾವಕಾಶ ನೀಡಿದರೆ ಸಾಲದು, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಹಾಗೂ ಸಹಕಾರಿ ಕ್ಷೇತ್ರದಲ್ಲಿರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಪರಿಹಾರ, ಜಾನುವಾರುಗಳಿಗೆ ಮೇವು, ಸೇರಿದಂತೆ ಜ್ವಲಂತ ಸಮಸ್ಯೆಯನ್ನು ಚರ್ಚಿಸಲು ಮುಖ್ಯಮಂತ್ರಿಗಳು ತಕ್ಷಣವೇ ತುರ್ತು ವಿಧಾನ ಮಂಡಲದ ಅಧಿವೇಶನ ಕರೆದು ಚರ್ಚಿಸಬೇಕೆಂದು ಆಗ್ರಹಿಸಿದರು.
ಎಲ್ಲೆಲ್ಲಿ ನಡೆಯಲಿದೆ ಯಾತ್ರೆ? : ಎರಡನೇ ಹಂತದ ರೈತ ಚೈತನ್ಯ ಯಾತ್ರೆ ಬಳ್ಳಾರಿ, ಮೊಳಕಾಲ್ಮೂರು, ಹೊಳಲ್ಕೆರೆ, ಚನ್ನಗಿರಿ, ಹೊನ್ನಾಳಿ, ಅರಸೀಕೆರೆ, ತರೀಕೆರೆ, ಮುದ್ದೇಬಿಹಾಳ, ಬಸವನಬಗೇವಾಡಿ, ವಿಜಯಪುರ, ಬೀಳಗಿ, ರಾಯಭಾಗ, ಹುಕ್ಕೇರಿ, ಗೋಕಾಕ್, ನವಲಗುಂದ ಮುಂತಾದ ಸ್ಥಳಗಳಲ್ಲಿ ನಡೆಯಲಿದೆ.