ಯಡಿಯೂರಪ್ಪ ಬದಲಾವಣೆಗೆ ಭಾರಿ ವಿರೋಧ, ಅಮಿತ್ ರಿಂದ ತಾಳ್ಮೆ ಪಾಠ
Recommended Video
ಬೆಂಗಳೂರು, ನವೆಂಬರ್ 15 : ಮುಂಬರುವ ಲೋಕಸಭೆ ಚುನಾವಣೆಯನ್ನು ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲೇ ಎದುರಿಸಲಾಗುವುದು ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ರಾಜ್ಯ
ಬಿಜೆಪಿ
ಅಧ್ಯಕ್ಷರ
ಬದಲಾವಣೆ
ಮಾಡುವುದಿಲ್ಲ
ಎಂದು
ಬಿಜೆಪಿ
ಹೈಕಮಾಂಡ್
ಗೆ
ಸಂದೇಶ
ನೀಡಲಾಗಿದೆ.
ಮಂಗಳೂರಿನಲ್ಲಿ
ನಡೆದ
ಆರೆಸ್ಸೆಸ್
ಬೈಠಕ್
ನಲ್ಲೂ
ಬಿಜೆಪಿ
ಅಧ್ಯಕ್ಷರ
ಬದಲಾವಣೆ
ಬಗ್ಗೆ
ಚರ್ಚಿಸಲಾಯಿತು.
ಆದರೆ,
ಯಡಿಯೂರಪ್ಪ
ಅವರನ್ನು
ಬದಲಾಯಿಸುವ
ವಿಚಾರಕ್ಕೆ
ಭಾರಿ
ಪ್ರತಿರೋಧ
ವ್ಯಕ್ತವಾಯಿತು.
ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಬಿಜೆಪಿ ಹಾಗೂ ಆರೆಸ್ಸೆಸ್ ಮುಖಂಡರ ಅಭಿಪ್ರಾಯ ಸಂಗ್ರಹಕ್ಕೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮುಂದಾಗಿದ್ದರು.
ಯಡಿಯೂರಪ್ಪ ಬದಲಿಸಿದರೆ ಮುಂದೆ ಯಾರು? ಬಿಜೆಪಿ ಹೈಕಮಾಂಡ್ ಜಿಜ್ಞಾಸೆ
ಆದರೆ, ಭಾರಿ ಪ್ರತಿರೋಧದ ಹಿನ್ನಲೆಯಲ್ಲಿ ಈ ವಿಷಯವನ್ನು ಇಲ್ಲಿಗೆ ಕೈಬಿಟ್ಟು, ಮುಂದಿನ ಲೋಕಸಭೆ ಚುನಾವಣೆ ತನಕ ಯಡಿಯೂರಪ್ಪ ಅವರೇ ನಾಯಕರು ಎಂದು ಹೇಳಿದ್ದಾರೆ. ಆರ್ಎಸ್ಎಸ್ ಪ್ರಮುಖರಾದ ಭಯ್ಯಾಜಿ ಜೋಶಿ, ಮುಕುಂದ್, ಸಂತೋಷ್ ಸೇರಿದಂತೆ ನಾಲ್ಕು ರಾಜ್ಯಗಳ ಸಂಘಟನಾ ಕಾರ್ಯದರ್ಶಿಗಳ ಜತೆ ಅಮಿತ್ ಶಾ ಚರ್ಚೆ ನಡೆಸಿದ್ದಾರೆ.
ನಳೀನ್ ಕುಮಾರ್ ಕಟೀಲ್, ಸುನೀಲ್ ಕುಮಾರ್, ಅರವಿಂದ ಲಿಂಬಾವಳಿ, ಆರ್ ಅಶೋಕ ಸೇರಿದಂತೆ ಹಲವಾರು ಯುವ ನಾಯಕರ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿತ್ತು.