ಉಪ ಚುನಾವಣೆಗೆ ಬಿಜೆಪಿ ಉಸ್ತುವಾರಿಗಳ ನೇಮಕ: ಲಿಂಬಾವಳಿ ನೇತೃತ್ವ
ಬೆಂಗಳೂರು, ನವೆಂಬರ್ 13: ಡಿಸೆಂಬರ್ 5ರಂದು ನಡೆಯಲಿರುವ ರಾಜ್ಯದ 15 ಕ್ಷೇತ್ರಗಳ ವಿಧಾನಸಭೆ ಉಪ ಚುನಾವಣೆಗೆ ಸಂಬಂಧಿಸಿದ ಸಿದ್ಧತೆಗಳನ್ನು ನಡೆಸಲು ಬಿಜೆಪಿ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದೆ. ಸಚಿವರು, ಶಾಸಕರು ಮತ್ತು ಸಂಸದರನ್ನು ನೇಮಿಸಲಾಗಿದೆ. ಮಾಜಿ ಸಚಿವ ಅರವಿಂದ್ ಲಿಂಬಾವಳಿ ಅವರು ಉಪ ಚುನಾವಣೆಯ ಮುಖ್ಯ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.
ಉಳಿದಂತೆ ಯಾವ ಕ್ಷೇತ್ರಕ್ಕೆ ಯಾರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ ಎಂಬ ಪಟ್ಟಿ ಇಲ್ಲಿದೆ.
* ಅಥಣಿ: ಕೆಎಸ್ ಈಶ್ವರಪ್ಪ, ಲಕ್ಷ್ಮಣ ಸವದಿ, ಶ್ರೀಕಾಂತ್ ಕುಲಕರ್ಣಿ ಮತ್ತು ಅಣ್ಣಾ ಸಾಹೇಬ್ ಜೊಲ್ಲೆ.
ಸುಪ್ರೀಂ ತೀರ್ಪು ಹೊರಬೀಳುತ್ತಲೇ ಬಿಜೆಪಿಯ ಮೊದಲ ವಿಕೆಟ್ ಡೌನ್?
* ಕಾಗವಾಡ: ಕೆಎಸ್ ಈಶ್ವರಪ್ಪ, ಸಿ.ಸಿ. ಪಾಟೀಲ್, ಮಹಾಂತೇಶಕವಟಗಿಮಠ, ಪಿ. ರಾಜು, ಅರವಿಂದ್ ಬೆಲ್ಲದ್.
* ಗೋಕಾಕ್: ಸುರೇಶ್ ಅಂಗಡಿ, ಶಶಿಕಲಾ ಜೊಲ್ಲೆ, ಉಮೇಶ್ ಕತ್ತಿ, ಅಭಯ್ ಪಾಟೀಲ್, ಈರಣ್ಣ ಕಡಾಡಿ ಮತ್ತು ಎ.ಎಸ್. ಪಾಟೀಲ್ ನಡಹಳ್ಳಿ.
* ಯಲ್ಲಾಪುರ: ಪ್ರಹ್ಲಾದ್ ಜೋಶಿ, ಕೋಟಾ ಶ್ರೀನಿವಾಸ್ ಪೂಜಾರಿ, ಸುನೀಲ್ ಕುಮಾರ್, ಅನಂತಕುಮಾರ್ ಹೆಗಡೆ, ಹರೀಶ್ ಪೂಂಜಾ, ಲಿಂಗರಾಜ್ ಪಾಟೀಲ್.
* ಹಿರೇಕೆರೂರು: ಬಸವರಾಜ ಬೊಮ್ಮಾಯಿ, ಯು.ಬಿ. ಬಣಕಾರ, ಬಿವೈ ರಾಘವೇಂದ್ರ, ದತ್ತಾತ್ರಿ.
ಹೊಸಕೋಟೆಯಲ್ಲಿ ಜೆಡಿಎಸ್ ಸ್ಪರ್ಧೆ: ಕುಮಾರಸ್ವಾಮಿ ಅಚ್ಚರಿಯ ನಿರ್ಧಾರ
* ರಾಣೆಬೆನ್ನೂರು: ಜಗದೀಶ್ ಶೆಟ್ಟರ್, ಪ್ರಭು ಚವ್ಹಾಣ್, ಜಿಎಂ ಸಿದ್ದೇಶ್ವರ್, ಶಿವಕುಮಾರ್ ಉದಾಸಿ, ಗಿರೀಶ ಪಾಟೀಲ್.
* ವಿಜಯನಗರ (ಹೊಸಪೇಟೆ): ಗೋವಿಂದ ಕಾರಜೋಳ, ಎನ್. ರವಿಕುಮಾರ್, ಗವಿಯಪ್ಪ, ಸಂಗಣ್ ಕರಡಿ, ಹಾಲಪ್ಪ ಆಚಾರ್, ನಾರಾಯಣ ಸಾ ಬಾಂಡಗೆ, ದೇವೇಂದ್ರಪ್ಪ.
* ಚಿಕ್ಕಬಳ್ಳಾಪುರ: ಸದಾನಂದಗೌಡ, ಸಿ.ಟಿ. ರವಿ, ಪಿ.ಸಿ. ಮೋಹನ್, ಡಾ. ಜಿ.ವಿ. ಮಂಜುನಾಥ್, ಬಚ್ಚೇಗೌಡ, ಎ.ಎಲ್. ಶಿವಕುಮಾರ್.
* ಕೆಆರ್ ಪುರಂ: ಆರ್ ಅಶೋಕ್, ಡಿವಿ ಸದಾನಂದಗೌಡ, ಪೂರ್ಣಿಮಾ ಶ್ರೀನಿವಾಸ್, ಸತೀಶ್ ರೆಡ್ಡಿ, ನಂದೀಶ್ ರೆಡ್ಡಿ, ಗೋಪಿನಾಥ್ ರೆಡ್ಡಿ.
ಅನರ್ಹರನ್ನು ಸಂತೋಷ್ ಮನೆಗೆ ಕರೆದೊಯ್ದ 'ಸೈನಿಕ'
* ಯಶವಂತಪುರ: ಆರ್. ಅಶೋಕ್, ಶೋಭಾ ಕರಂದ್ಲಾಜೆ, ಡಿ.ವಿ. ಸದಾನಂದಗೌಡ, ಅಶ್ವತ್ಥ್ ನಾರಾಯಣ (ಎಂಎಲ್ಸಿ) ಎಂ. ಕೃಷ್ಣಪ್ಪ, ಜಗ್ಗೇಶ್.
* ಮಹಾಲಕ್ಷ್ಮೀ ಲೇಔಟ್: ವಿ. ಸೋಮಣ್ಣ, ಎಸ್. ಸುರೇಶ್ ಕುಮಾರ್, ಸುಬ್ಬನರಸಿಂಹ.
* ಶಿವಾಜಿನಗರ: ನಿರ್ಮಲ್ ಕುಮಾರ್ ಸುರಾನಾ, ಸದಾಶಿವ, ಎಸ್. ಮುನಿರಾಜು, ಎಸ್. ರಘು.
* ಹೊಸಕೋಟೆ: ಡಾ. ಅಶ್ವತ್ಥ್ ನಾರಾಯಣ, ಎಸ್.ಆರ್. ವಿಶ್ವನಾಥ್, ಸಚ್ಚಿದಾನಂದಮೂರ್ತಿ, ಎ. ನಾರಾಯಣ ಸ್ವಾಮಿ.
* ಕೆ.ಆರ್ ಪೇಟೆ: ಮಾಧುಸ್ವಾಮಿ, ಬಿ.ವೈ. ವಿಜಯೇಂದ್ರ, ಶ್ರೀವತ್ಸ, ಪ್ರೀತಂಗೌಡ.
* ಹುಣಸೂರು: ಶ್ರೀರಾಮುಲು, ಪ್ರತಾಪ್ ಸಿಂಹ, ಮೈ.ವಿ. ರವಿಶಂಕರ, ಅಪ್ಪಚ್ಚುರಂಜನ್, ವಿಜಯಶಂಕರ್.