'ಐ ಆಮ್ ನಾಟ್ ಸೇಲೆಬಲ್, ಐ ಆಮ್ ಗೂಳಿಹಟ್ಟಿ' ಖದರ್ ಡೈಲಾಗ್
ಬೆಂಗಳೂರು, ಜನವರಿ 15: ರಾಜ್ಯ ರಾಜಕಾರದಲ್ಲಿ 'ಆಪರೇಷನ್' ಸದ್ದು ಜೋರಾಗಿ ಕೇಳಿಬರುತ್ತಿದೆ. ಯಾವ ಪಕ್ಷದ ಶಾಸಕರು, ಯಾವ ಸಮಯದಲ್ಲಿ ಯಾವ ಪಕ್ಷಕ್ಕೆ ಹಾರುತ್ತಾರೋ ಕಾಣದಾಗಿದೆ. ಇಂತಹಾ ಸಮಯದಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರ ಸ್ಟೇಟಸ್ ಸದ್ದು ಮಾಡುತ್ತಿದೆ.
ಬಿಜೆಪಿ ಶಾಸಕ ಶೇಖರ್ ಆತ್ಮಾಹುತಿಗೆ ಯತ್ನ, ಯಡಿಯೂರಪ್ಪ ಹೇಳಿದ್ದೇನು?
ಹೌದು, ಪ್ರಸ್ತುತ ಗುರುಗ್ರಾಮದಲ್ಲಿರುವ ಗೂಳಿಹಟ್ಟಿ ಶೇಖರ್ ಅವರು ವಾಟ್ಸಾಪ್ನಲ್ಲಿ ಹಾಕಿರುವ ಸ್ಟೇಟಸ್ ಸಖತ್ ಸದ್ದು ಮಾಡುತ್ತಿದೆ. 'ಐ ಆಮ್ ನಾಟ್ ಸೇಲೆಬಲ್, ಐ ಆಮ್ ಗೂಳಿಹಟ್ಟಿ' ಎಂದು ಸ್ಟೇಟಸ್ ಹಾಕಿದ್ದಾರೆ.
ಪೆಟ್ರೋಲ್ ಸುರಿದುಕೊಂಡು ಶಾಸಕ ಗೂಳಿಹಟ್ಟಿ ಶೇಖರ್ ಆತ್ಮಾಹುತಿಗೆ ಯತ್ನ
'ನಾನು ಗೂಳಿಹಟ್ಟಿ ಶೇಖರ್, ನಾನು ಮಾರಟದ ವಸ್ತುವಲ್ಲ' ಎಂಬ ಅರ್ಥ ಬರುವ ಸ್ಟೇಟಸ್ ಅನ್ನು ಅವರು ವಾಟ್ಸಾಪ್ಗೆ ಹಾಕಿಕೊಂಡಿದ್ದಾರೆ. ಆ ಮೂಲಕ ತಾವು ಬಿಜೆಪಿ ಪರವಾಗಿಯೇ ಇರುವುದಾಗಿ ಖಾತ್ರಿ ಪಡಿಸಿದ್ದಾರೆ.
2008 ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಗೂಳಿಹಟ್ಟಿ ಶೇಖರ್ ಅವರು ವಿಜಯ ಸಾಧಿಸಿ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ನಂತರ 2013 ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು, ನಂತರ 2018 ರಲ್ಲಿ ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.