ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ-ಯಡಿಯೂರಪ್ಪ ಕ್ಷಮಾಪಣೆ ಕಿತ್ತಾಟ, ಕಲಾಪ ಬಲಿ

|
Google Oneindia Kannada News

ಬೆಳಗಾವಿ, ಡಿಸೆಂಬರ್ 21: ಬೆಳಗಾವಿ ಅಧಿವೇಶನ ಇಂದಿಗೆ ಮುಕ್ತಾಯವಾಗಿದೆ. ಕೊನೆಯ ಎರಡು ದಿನಗಳ ಕೇವಲ ಪ್ರತಿಭಟನೆ, ಆರೋಪ ಪ್ರತ್ಯಾರೋಪಗಳಲ್ಲಿಯೇ ಕಳೆದಿದೆ. ಕುಮಾರಸ್ವಾಮಿ-ಬಿಎಸ್‌ವೈ ಕೊನೆಯ ಎರಡು ದಿನಗಳು ಒಬ್ಬರಮೇಲೋಬ್ಬರು ಭಾರಿ ಟೀಕೆಗಳನ್ನೇ ಮಾಡಿಕೊಂಡಿದ್ದಾರೆ.

ಸಾಲಮನ್ನಾ ಬಗ್ಗೆ ಬಿಎಸ್‌ವೈ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, 'ರಾಷ್ಟ್ರೀಯ ಬ್ಯಾಂಕುಗಳಿಗೂ ಯಡಿಯೂರಪ್ಪ ಅವರಿಗೂ ಇರುವ ಸಂಬಂಧ ಎಂತದ್ದು ಎಂದು ಗೊತ್ತಿದೆ' ಎಂದು ಸಿಎಂ ಹೇಳಿದ್ದು ಬಿಜೆಪಿಯವರನ್ನು ಕೆರಳಿಸಿದೆ. ಅವರು ಕುಮಾರಸ್ವಾಮಿ ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ.

ದತ್ತ ಭಕ್ತರು ಭಿಕ್ಷಾಟನೆ ಮಾಡ್ತಾರೆಂಬ ಸಿಎಂ ಹೇಳಿಕೆಗೆ ಶಾಸಕ ಸಿಟಿ ರವಿ ಕಿಡಿ ದತ್ತ ಭಕ್ತರು ಭಿಕ್ಷಾಟನೆ ಮಾಡ್ತಾರೆಂಬ ಸಿಎಂ ಹೇಳಿಕೆಗೆ ಶಾಸಕ ಸಿಟಿ ರವಿ ಕಿಡಿ

ಕುಮಾರಸ್ವಾಮಿ ದುರಹಂಕಾರದಿಂದ ಮಾತನಾಡುತ್ತಾರೆ. ಅವರಿಗೆ ದುರಹಂಕಾರ ಇಳಿದಿಲ್ಲ ಎಂದು ಬಿಎಸ್‌ವೈ ಸಹ ಕಠಿಣ ಶಬ್ದಗಳಲ್ಲಿಯೇ ಕುಮಾರಸ್ವಾಮಿ ವಿರುದ್ಧ ಕೂಗಾಡಿದ್ದಾರೆ. ಇಂದು ಕೊನೆ ದಿನ ಸಹ ಕುಮಾರಸ್ವಾಮಿ ಕ್ಷಮಾಪಣೆ ಕೇಳುವ ಅವಕಾಶ ಇಲ್ಲ ಆದರೆ ಅವರು ಅಹಂಕಾರ ಮೆರೆದಿದ್ದಾರೆ ಎಂದು ಯಡಿಯೂರಪ್ಪ ದೂರಿದ್ದಾರೆ.

BJP demanding apology from Kumaraswamy

ರೈತ ಮಹಿಳೆ ಬಗ್ಗೆ ಹೇಳಿಕೆ: ಸದನದಲ್ಲಿ ಕುಮಾರಸ್ವಾಮಿ ಸ್ಪಷ್ಟೀಕರಣರೈತ ಮಹಿಳೆ ಬಗ್ಗೆ ಹೇಳಿಕೆ: ಸದನದಲ್ಲಿ ಕುಮಾರಸ್ವಾಮಿ ಸ್ಪಷ್ಟೀಕರಣ

ನಾನು ಸುಳ್ಳು ಹೇಳಿಲ್ಲ ಹಾಗಾಗಿ ನಾನು ಯಡಿಯೂರಪ್ಪ ಅವರನ್ನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನಾನು ಕ್ಷಮೆ ಕೇಳುವುದಿಲ್ಲ ಎಂದು ಕುಮಾರಸ್ವಾಮಿ ಪಟ್ಟು ಹಿಡಿದಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಮನ್ನಾ ಮಾಡಲು ಬಿಜೆಪಿ ನಾಯಕರೇ ಅಡ್ಡಿಪಡಿಸುತ್ತಿದ್ದಾರೆ ಇದು ಸತ್ಯ ಎಂದು ಅವರು ಪುನರ್‌ ಉಚ್ಛರಿಸಿದ್ದಾರೆ.

English summary
Karnataka BJP demanding apology from Kumaraswamy for saying lie about Yeddyurappa in the session. But Kumaraswamy said i did not said lie it is true that Yeddyurappa and co trying to create problem in farmer loan waiver scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X