ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ಸೋಲು: ಶ್ರೀರಾಮುಲು ರಾಜಕೀಯ ಭವಿಷ್ಯ ಏನು?

|
Google Oneindia Kannada News

Recommended Video

ಬಳ್ಳಾರಿಯಲ್ಲಿ ಬಿ ಶ್ರೀರಾಮುಲು ಸೋಲಿನಿಂದ ಅವರ ಭವಿಷ್ಯ ಏನಾಗಬಹುದು? | Oneindia Kannada

ಬಳ್ಳಾರಿ, ನವೆಂಬರ್ 07: ಉಪಚುನಾವಣೆ ಫಲಿತಾಂಶ ಬಿಜೆಪಿಗೆ ಭಾರಿ ನಿರಾಸೆ ತಂದಿದೆ. ಅದರಲ್ಲಿಯೂ ಬಳ್ಳಾರಿಯ ಹೀನಾಯ ಸೋಲು ಬಿಜೆಪಿಯಲ್ಲಿ ಬದಲಾವಣೆಗೆ ಕಾರಣ ಆಗಬಹುದಾಗಿದೆ.

ನಾಯಕರ ಸಮುದಾಯದ ಮುಖಂಡ ಎಂಬ ಹೆಸರು ಗಳಿಸಿದ್ದ ಶ್ರೀರಾಮುಲು ಅವರು ಇದೇ ಕಾರಣಕ್ಕೆ ಬಿಜೆಪಿಯಲ್ಲಿ ಉನ್ನತ ಹುದ್ದೆಗಳಿಗೆ ಆಕಾಂಕ್ಷೆ ವ್ಯಕ್ತಪಡಿಸಿದ್ದರು. ಬಿಜೆಪಿ ಸರ್ಕಾರ ರಚಿತವಾದರೆ ಅವರೇ ಡಿಸಿಎಂ ಎಂಬ ವಾದವೂ ಇತ್ತು. ಶ್ರೀರಾಮುಲು ಅವರೇ ಮುಂದಿನ ಮುಖ್ಯಮಂತ್ರಿ ಎಂದು ಕೆಲವು ಬಿಜೆಪಿ ಶಾಸಕರು ಉಪಚುನಾವಣೆಗೆ ಮುಂಚೆ ಹೇಳಿದ್ದರು ಕೂಡಾ.

ಜನಾರ್ದನ ರೆಡ್ಡಿ ಕೇಸ್ ಬಗ್ಗೆ ಶ್ರೀರಾಮುಲು ವಿಚಿತ್ರ ಹೇಳಿಕೆ ಜನಾರ್ದನ ರೆಡ್ಡಿ ಕೇಸ್ ಬಗ್ಗೆ ಶ್ರೀರಾಮುಲು ವಿಚಿತ್ರ ಹೇಳಿಕೆ

ನಾಯಕ ಸಮುದಾಯವೇ ಹೆಚ್ಚಿಗಿರುವ ಬಳ್ಳಾರಿಯ ಮೀಸಲು ಕ್ಷೇತ್ರದಲ್ಲಿ ಸ್ಥಳೀಯರೇ ಆಗಿದ್ದುಕೊಂಡು ಸಹ ತಮ್ಮ ತಂಗಿಯನ್ನೇ ರಾಮುಲು ಅವರಿಗೆ ಗೆಲ್ಲಿಸಲಿಕ್ಕಾಗಲಿಲ್ಲ ಎಂಬುದು ಅವರ ರಾಜಕೀಯ ಪ್ರಭಾವವನ್ನು ಬಿಜೆಪಿಯಲ್ಲಿ ಭಾರಿ ಪ್ರಮಾಣದಲ್ಲಿ ತಗ್ಗಿಸಲಿದೆ. ಅಲ್ಲದೆ ರಾಮುಲು, ನಾಯಕರ ಸಮುದಾಯದ ಮುಖಂಡ ಎಂಬ ಪಟ್ಟಕ್ಕೂ ಧಕ್ಕೆ ಬರಲಿದೆ.

ಉತ್ತರ ಕರ್ನಾಟಕದ ಬಿಜೆಪಿಯ ಮುಖಂಡ?

ಉತ್ತರ ಕರ್ನಾಟಕದ ಬಿಜೆಪಿಯ ಮುಖಂಡ?

ರಾಮುಲು ಅವರು ಉತ್ತರ ಕರ್ನಾಟಕದ ಬಿಜೆಪಿ ಮುಖಂಡ ಎನಿಸಿಕೊಂಡಿದ್ದರು. ಆದರೆ ತಮ್ಮದೇ ಕ್ಷೇತ್ರದಲ್ಲಿ ಎದುರಾಗಿರುವ ಈ ಭಾರಿ ಸೋಲು ಅವರಿಗೆ ಉತ್ತರ ಕರ್ನಾಟಕ ಬಿಜೆಪಿ ಮೇಲಿನ ಹಿಡಿತವನ್ನು ಸಡಿಲಗೊಳಿಸುವುದರಲ್ಲಿ ಅನುಮಾನವಿಲ್ಲ. ಈ ಸೋಲು ಉತ್ತರ ಕರ್ನಾಟಕದಲ್ಲಿ ಬಿಜೆಪಿ ಹಿನ್ನಡೆಗೆ ಕಾರಣ ಆದರೂ ಅನುಮಾನವಿಲ್ಲ.

ಶ್ರೀರಾಮುಲುಗೆ ಅತಿಯಾದ ಆತ್ಮವಿಶ್ವಾಸವೇ ಮುಳ್ಳಾಗಿ ಪರಿಣಮಿಸಿತೇ..?ಶ್ರೀರಾಮುಲುಗೆ ಅತಿಯಾದ ಆತ್ಮವಿಶ್ವಾಸವೇ ಮುಳ್ಳಾಗಿ ಪರಿಣಮಿಸಿತೇ..?

ಬಳ್ಳಾರಿಯಲ್ಲಿ ಬಿಜೆಪಿ ಯುಗಾಂತ್ಯ

ಬಳ್ಳಾರಿಯಲ್ಲಿ ಬಿಜೆಪಿ ಯುಗಾಂತ್ಯ

ಒಂದು ಸಮಯವಿತ್ತು ಬಳ್ಳಾರಿ ಎಂದರೆ ಅದು ರೆಡ್ಡಿ ಮತ್ತು ರಾಮುಲು ಅವರ ಸಾಮ್ರಾಜ್ಯ ಎಂದು. ಬಳ್ಳಾರಿ ನಡೆಯುವುದು ಅವರಿಬ್ಬರ ಕೈಸನ್ನೆಯ ಮೇಲೆ ಎಂದು ಆದರೆ ಈ ಸೋಲು ಮತ್ತು ಜನಾರ್ದನ ರೆಡ್ಡಿ ಅವರ ಮೇಲೆ ಬೀಳುತ್ತಿರುವ ಸತತ ಕೇಸುಗಳು ಬಳ್ಳಾರಿಯಲ್ಲಿ ರೆಡ್ಡಿ-ರಾಮುಲು ಯುಗಾಂತ್ಯಕ್ಕೆ ಕಾರಣವಾಗಬಹುದು ಅಷ್ಟೆ ಅಲ್ಲದೆ ಬಳ್ಳಾರಿ ಬಿಜೆಪಿಗೆ ಬಾಗಿಲು ಬಂದ್‌ ಆಗುವ ಸಾಧ್ಯತೆಯೂ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿಯ ಐದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದಿರುವುದು ಇದಕ್ಕೆ ಉದಾಹರಣೆ.

ಬಳ್ಳಾರಿ ಅಂತಿಮ ಫಲಿತಾಂಶ: ಎಲ್ಲಾ ದಾಖಲೆ ಮುರಿದ ವಿಎಸ್ ಉಗ್ರಪ್ಪ ಬಳ್ಳಾರಿ ಅಂತಿಮ ಫಲಿತಾಂಶ: ಎಲ್ಲಾ ದಾಖಲೆ ಮುರಿದ ವಿಎಸ್ ಉಗ್ರಪ್ಪ

ಹೊಸ ನಾಯಕರಿಗಾಗಿ ಹುಡುಕಾಟ

ಹೊಸ ನಾಯಕರಿಗಾಗಿ ಹುಡುಕಾಟ

ಬಳ್ಳಾರಿಯಲ್ಲಿ ಸುಮಾರು ಎರಡು ದಶಕದಿಂದ ರಾಮುಲು ಮತ್ತು ರೆಡ್ಡಿ ಅವರೇ ಬಿಜೆಪಿಯ ನಾಯಕರಾಗಿದ್ದರು. ರೆಡ್ಡಿ ಅವರು ಜೈಲು ಸೇರಿದ ನಂತರ ರಾಮುಲು ಅವರದ್ದೇ ಏಕಮೇವಾದಿಪತ್ಯ. ಮಧ್ಯದಲ್ಲಿ ಹೊಸ ಪಕ್ಷ ಕಟ್ಟಿದರಾದರೂ ಅಷ್ಟೆ ಬೇಗ ವಾಪಸ್ ಆದರು. ಆದರೆ ಅವರ ನಾಯಕತ್ವಕ್ಕೆ ಯಾವದೇ ಕತ್ತಾಗಿರಲಿಲ್ಲ. ಆದರೆ ಈ ಸೋಲು ರಾಮುಲು ಬಗ್ಗೆ ಪ್ರಶ್ನೆ ಎತ್ತಿದೆ. ಹಾಗಾಗಿ ಹೈಕಮಾಂಡ್‌ ಬಳ್ಳಾರಿ ಬಿಜೆಪಿಗೆ ಹೊಸ ಮುಖ ಹುಡುಕುವ ಯತ್ನ ಮಾಡಬಹುದು.

ಬಳ್ಳಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ 5 ಕಾರಣಗಳುಬಳ್ಳಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ 5 ಕಾರಣಗಳು

ಬಿಜೆಪಿ ವಿರುದ್ಧ ತಿರುಗಿಬಿಳುವ ಸಾಧ್ಯತೆ

ಬಿಜೆಪಿ ವಿರುದ್ಧ ತಿರುಗಿಬಿಳುವ ಸಾಧ್ಯತೆ

ಬಳ್ಳಾರಿಯಲ್ಲಿ ತಮಗೆ ಬೆಂಬಲ ನೀಡದಕ್ಕಾಗಿ ರಾಮುಲು ಅವರೇ ಬಿಜೆಪಿಯ ನಾಯಕರ ವಿರುದ್ಧ ತಿರುಗಿಬೀಳುವ ಸಾದ್ಯತೆ ದಟ್ಟವಾಗಿದೆ. ಹಾಗೇನಾದರೂ ಆದಲ್ಲಿ ಬಿಜೆಪಿಯಲ್ಲಿ ಮತ್ತೆ ಬಣ ರಾಜಕೀಯ, ಆಂತರಿಕ ತಿಕ್ಕಾಟ ಪ್ರಾರಂಭವಾಗುತ್ತದೆ.

English summary
BJP faces bad defeat in Ballari where BJP is in command over one and half decade. This defeat may reason for some change in BJP. Sriramulu may loose his high position in the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X