'ರಾಜ್ಯದ ಮರ್ಯಾದಾ ಪುರುಷೋತ್ತಮ': ಸಿದ್ದರಾಮಯ್ಯರನ್ನು ಲೇವಡಿ ಮಾಡಿದ ಬಿಜೆಪಿ
ಬೆಂಗಳೂರು, ಜನವರಿ 18: ಆಪರೇಷನ್ ಕಮಲದ ಆರೋಪ ಹೊರಿಸಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿ ಬಿಜೆಪಿ ಟ್ವೀಟ್ ಮಾಡಿದೆ.
ಕಾಂಗ್ರೆಸ್ ವಿರುದ್ಧ ಶುಕ್ರವಾರ ಎರಡು ಟ್ವೀಟ್ಗಳನ್ನು ಮಾಡಿರುವ ಬಿಜೆಪಿ, ಒಂದರಲ್ಲಿ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರನ್ನು ಗುರಿಯನ್ನಾಗಿಸಿಕೊಂಡು ಚುನಾವಣಾ ಸಂದರ್ಭದಲ್ಲಿ ಜೆಡಿಎಸ್ಅನ್ನು ಟೀಕಿಸಿ ಈಗ ಅದಕ್ಕೆ ಬೆಂಬಲ ನೀಡಿದ್ದಾರೆ ಎಂದು ವ್ಯಂಗ್ಯವಾಡಿದೆ.
ಹೆಂಗೆ ಕೋತಿ ಬೆಣ್ಣೆ ತಿಂದು ಕುರಿ ಮುಖಕ್ಕೆ ಹಚ್ಚಿದ್ದು: ಡಿವಿಎಸ್ ಲೇವಡಿ
ಇನ್ನೊಂದು ಟ್ವೀಟ್ನಲ್ಲಿ ಕಾಂಗ್ರೆಸ್ನ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಸಿದ್ದರಾಮಯ್ಯ ಅವರನ್ನು ಅದು ಕರೆದಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾಂಗ್ರೆಸ್ ಸಿಎಂ ಆಕಾಂಕ್ಷಿ ಸಿದ್ದರಾಮಯ್ಯ ವಿರೋಧಪಕ್ಷದ ಶಾಸಕರ ಬಗ್ಗೆ ತುಂಬಾ ಚಿಂತಿತರಾಗಿದ್ದಾರೆ. ತಮ್ಮ ಶಾಸಕರೇ ಆಗಾಗ ಕಣ್ಮರೆಯಾಗುವುದನ್ನು ಅವರು ಮರೆತಿದ್ದಾರೆ.
KPCC president @dineshgrao & Cong CM aspirant @siddaramaiah is so worried about opposition party MLA’s that they have forgotten about their own MLA’s often going missing.
— BJP Karnataka (@BJP4Karnataka) 18 January 2019
Don’t be bothered by the colour of our apple, you need to first look at the rotten tomatoes in your plate.
ನಮ್ಮ ಬಳಿ ಇರುವ ಸೇಬು ಹಣ್ಣಿನ ಬಣ್ಣದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ತಟ್ಟೆಯಲ್ಲಿ ಇರುವ ಕೊಳೆತ ಟೊಮೆಟೊ ಹಣ್ಣಿನ ಮೇಲೆ ಮೊದಲು ಗಮನ ಹರಿಸಿ ಎಂದು ಒಂದು ಟ್ವೀಟ್ನಲ್ಲಿ ಬಿಜೆಪಿ ವ್ಯಂಗ್ಯವಾಡಿದೆ.
ಯಡಿಯೂರಪ್ಪಗೆ ಸಿಎಂ ಆಗೋ ಆಸೆ ಇನ್ನೂ ಹೋಗಿಲ್ಲ : ಸಿದ್ದರಾಮಯ್ಯ
ಮತ್ತೊಂದು ಟ್ವೀಟ್, ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಲು ಬಳಸಿಕೊಳ್ಳಲಾಗಿದೆ. ಬಿಜೆಪಿ ಮತ್ತು ಯಡಿಯೂರಪ್ಪ ಅವರಿಗೆ ಮರ್ಯಾದೆ ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದರು.
ಬಿಜೆಪಿ ಪಂಥಾಹ್ವಾನ ಸ್ವೀಕರಿಸಿ, ಸಿದ್ದರಾಮಯ್ಯರಿಂದ ಟ್ವೀಟ್!
ರಾಜ್ಯದ ಮರ್ಯಾದಾ ಪುರುಷೋತ್ತಮ ಎಂಬ ಶೀರ್ಷಿಕೆ ನೀಡಿರುವ ಬಿಜೆಪಿ, ಸಿದ್ದರಾಮಯ್ಯ ಮತ್ತು ಜೆಡಿಎಸ್ ನಂಟನ್ನು ಲೇವಡಿ ಮಾಡಿದೆ.
ರಾಜ್ಯದ ಮರ್ಯಾದಾ ಪುರುಷೋತ್ತಮ... pic.twitter.com/T5zNcYnzPS
— BJP Karnataka (@BJP4Karnataka) 18 January 2019
*
ಸ್ವಂತ
ಕ್ಷೇತ್ರದಲ್ಲಿ
ಹೀನಾಯವಾಗಿ
ಸೋಲಿಸಿದ
ಜೆಡಿಎಸ್ಗೆ
ಬೆಂಬಲ
ಕೊಟ್ಟ
ಮರ್ಯಾದಸ್ಥರು
*
ಮುಖ್ಯಮಂತ್ರಿ
ಪದವಿ
ಕಳೆದುಕೊಂಡರೂ
ಕಾವೇರಿ
ಭವನ
ಬಿಡದ
ಮರ್ಯಾದಸ್ಥರು.
*
ಅವರಪ್ಪನಾಣೆ
ಮುಖ್ಯಮಂತ್ರಿ
ಆಗುವುದಿಲ್ಲ
ಎಂದವರು,
ಅವರ
ಮಗನನ್ನೇ
ಮುಖ್ಯಮಂತ್ರಿ
ಮಾಡಿದ
ಮರ್ಯಾದಸ್ಥರು
*
ನೀಚ
ಮುಖ್ಯಮಂತ್ರಿ
ಎಂದಿದ್ದವರ
ಮಗನನ್ನೇ
ಮುಖ್ಯಮಂತ್ರಿ
ಮಾಡಿದ
ಮರ್ಯಾದಸ್ಥರು.
ಹೀಗೆ ಹಲವು ಅಂಶಗಳನ್ನು ಪಟ್ಟಿ ಮಾಡಿರುವ ಬಿಜೆಪಿ, ಯಾವ ಮುಖ ಹೊತ್ತು ಮಾತನಾಡುತ್ತೀರಿ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ.