ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಜಯಪುರ: ಪೊಲೀಸ್, ಭೀಮಾತೀರದ ಹಂತಕನ ಮಧ್ಯೆ ಗುಂಡಿನ ಕಾಳಗ
ವಿಜಯಾಪುರ, ಅಕ್ಟೋಬರ್ 30 : ಭೀಮಾತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ಸೋಮವಾರ ಬೆಳ್ಳಂಬೆಳಗ್ಗೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೊಂಕಣಗಾಂವ್ ಗ್ರಾಮದಲ್ಲಿ ಪೊಲೀಸ್ ಹಾಗೂ ಭೀಮಾತೀರದ ಹಂತಕನ ಮಧ್ಯೆ ಪರಸ್ಟಪರ ಗುಂಡಿನ ದಾಳಿ ನಡೆದಿದೆ.
ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಎನ್ನುವಾತ ಏಕಾಏಕಿ ಪೊಲೀಸರ ಮೇಲೆ ಫೈರಿಂಗ್ ಮಾಡಿದ್ದಾನೆ. ಇದಕ್ಕೆ ಪ್ರತ್ಯುತ್ತರವಾಗಿ ಚಡಚಣದ ಪಿಎಸ್ ಐ ಗೋಪಾಲ್ ಫೈರಿಂಗ್ ಮಾಡಿದ್ದು, ಫೈರಿಂಗ್ ನಲ್ಲಿ ಧರ್ಮರಾಜ್ ಚಡಚಣ ಸಾವನ್ನಪ್ಪಿದ್ದಾನೆ. ಗುಂಡಿನ ಕಾಳಗದಲ್ಲಿ ಪಿಎಸ್ ಐ ಗೋಪಾಲ್ ಅವರಿಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ (ಎಸ್ ಪಿ) ಕುಲದೀಪ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುತ್ರಪ್ಪ ಹಾಗೂ ಫಯಾಜ್ ಮುಫ್ತಿಫ್ ಎನ್ನುವರ ಕೊಲೆಯಲ್ಲಿ ಭಾಗಿಯಾಗಿದ್ದ ಧರ್ಮರಾಜ್, ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ.
Comments
English summary
Bhima river assailant Dharmaraj killed in police firing in Kokangaon village Indi taluk Vijayapura district on Monday (Oct 30).
Story first published: Monday, October 30, 2017, 9:24 [IST]