'ಭಾಸ್ಕರರಾವ್ ರಾಜೀನಾಮೆ ಅಂಗೀಕರಿಸಬಾರದಿತ್ತು'
ಬೆಂಗಳೂರು, ಡಿಸೆಂಬರ್ 08 : ಕೊನೆಗೂ ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದ ನಂತರ ಭಾಸ್ಕರರಾವ್ ರಾಜೀನಾಮೆಗೆ ಒತ್ತಾಯ ಕೇಳಿಬಂದಿತ್ತು.
ಡಿಸೆಂಬರ್
7ರಂದು
ವೈ.ಭಾಸ್ಕರರಾವ್
ಅವರು
ರಾಜ್ಯಪಾಲ
ವಜುಭಾಯಿ
ವಾಲಾ
ಅವರಿಗೆ
ತಮ್ಮ
ರಾಜೀನಾಮೆಯನ್ನು
ಸಲ್ಲಿಸಿದ್ದರು.
ಮಂಗಳವಾರ
ರಾಜ್ಯಪಾಲರು
ರಾಜೀನಾಮೆ
ಅಂಗೀಕಾರ
ಮಾಡಿದ್ದಾರೆ
ಎಂದು
ರಾಜಭವನ
ಅಧಿಕೃತ
ಹೇಳಿಕೆ
ಬಿಡುಗಡೆ
ಮಾಡಿದೆ.
[ಭಾಸ್ಕರರಾವ್
ರಾಜೀನಾಮೆ]
ಒನ್ ಇಂಡಿಯಾ ಜೊತೆ ಮಾತನಾಡಿದ ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರು, 'ರಾಜ್ಯಪಾಲರು ವೈ.ಭಾಸ್ಕರರಾವ್ ರಾಜೀನಾಮೆಯನ್ನು ಅಂಗೀಕರಿಸಬಾರದಿತ್ತು. ಈ ಸಮಯದಲ್ಲಿ ರಾಜೀನಾಮೆ ನೀಡಿ ಭಾಸ್ಕರರಾವ್ ಕಾನೂನು ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ' ಎಂದು ದೂರಿದರು. [ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಸಂತೋಷ್ ಹೆಗ್ಡೆ ಸಂದರ್ಶನ]
'ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಲೋಕಾಯುಕ್ತ ಪದಚ್ಯುತಿ ನಿರ್ಣಯವನ್ನು ಮಂಡನೆ ಮಾಡಿ ಸದನದ ಒಪ್ಪಿಗೆ ಪಡೆಯಲಾಗಿದೆ. ಹೈಕೋರ್ಟ್ ಈ ನಿರ್ಣಯದ ಆಧಾರದ ಮೇಲೆ ತನಿಖೆಗೆ ಸಮಿತಿಯನ್ನು ರಚನೆ ಮಾಡಬೇಕಾಗಿದೆ. ಇಂತಹ ಸಮುದಲ್ಲಿ ಕಾನೂನು ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳಲು ರಾಜೀನಾಮೆ ನೀಡಿದ್ದಾರೆ' ಎಂದು ಸಂತೋಷ್ ಹೆಗ್ಡೆ ಹೇಳಿದ್ದಾರೆ. [ಕರ್ನಾಟಕ ಲೋಕಾಯುಕ್ತದಲ್ಲಿ ಇದೇನಿದು ಹಗರಣ?]