ಭಾರತ ಬಂದ್ : ಕರ್ನಾಟಕದ ಜಿಲ್ಲೆಗಳಲ್ಲಿ ಶಾಲಾ-ಕಾಲೇಜಿಗೆ ರಜಾ ಇದೆ, ಇಲ್ಲ
ಬೆಂಗಳೂರು, ಜನವರಿ 07 : ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಸಾರಿಗೆ ಸಂಚಾರ ಎರಡು ದಿನಗಳ ಕಾಲ ಸ್ಥಬ್ದಗೊಳ್ಳುವ ನಿರೀಕ್ಷೆ ಇದೆ. ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ನಗರದ ಹಲವು ಖಾಸಗಿ ಕಾಲೇಜುಗಳು ಸಹ ರಜೆ ಘೋಷಣೆ ಮಾಡಿವೆ. ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು, ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಆಗಮಿಸುವುದಕ್ಕೂ ತೊಂದರೆ ಆಗಲಿದೆ.
ಜನವರಿ 8-9 ರಂದು ಭಾರತ್ ಬಂದ್ ಯಾಕಾಗಿ?
ಜನವರಿ 8 ಮತ್ತು 9ರಂದು ಎರಡು ದಿನಗಳ ಕಾಲ ಮುಷ್ಕರ ನಡೆಯಲಿದೆ. ಆದರೆ, ಜನವರಿ 8ರಂದು ಮಾತ್ರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಿಲ್ಲ.
ಬಂದ್ : ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ ಅನುಮಾನ
ಪರೀಕ್ಷೆ ಮುಂದೂಡಿಕೆ : ಎರಡು ದಿನದ ಮುಷ್ಕರದ ಹಿನ್ನಲೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್ಸಿಯು) ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪರೀಕ್ಷೆಗಳನ್ನು ಮುಂದೂಡಲಾಗಿದೆ. ಜನವರಿ 8 ಮತ್ತು 9ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಜನವರಿ 24 ಮತ್ತು 25ರಂದು ನಡೆಸಲಾಗುತ್ತದೆ.
ಯಾವ ಜಿಲ್ಲೆಯಲ್ಲಿ ರಜೆ ಇಲ್ಲ
*
ಶಿವಮೊಗ್ಗ
*
ಹಾವೇರಿ
*
ಯಾದಗಿರಿ
*
ಬೆಳಗಾವಿ
*
ದಕ್ಷಿಣ
ಕನ್ನಡ
*
ಉಡುಪಿ
*
ರಾಮನಗರ
*
ಕೊಡಗು
*
ಹಾಸನ
*
ಚಿಕ್ಕಮಗಳೂರು
*
ಉತ್ತರ
ಕನ್ನಡ
*
ವಿಜಯಪುರ
ಜನವರಿ 8, 9ಕ್ಕೆ ದೇಶವ್ಯಾಪಿ ಮುಷ್ಕರ : ಏನಿರುತ್ತೆ, ಏನಿರಲ್ಲ?
ಯಾವ ಜಿಲ್ಲೆಗಳಲ್ಲಿ ರಜೆ ಇದೆ
*
ಕೋಲಾರ
*
ದಾವಣಗೆರೆ
*
ಕೊಪ್ಪಳ
*
ಚಿಕ್ಕಬಳ್ಳಾಪುರ
*
ಕಾರವಾರ
*
ರಾಯಚೂರು
*
ಚಿತ್ರದುರ್ಗ
*
ಧಾರವಾಡ
*
ಬಳ್ಳಾರಿ
*
ಚಾಮರಾಜನಗರ
*
ಮೈಸೂರು
*
ಮಂಡ್ಯ
*
ತುಮಕೂರು
*
ಬೆಂಗಳೂರು