ದಕ್ಷಿಣ, ಉತ್ತರ ಒಳನಾಡು ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
ಬೆಂಗಳೂರು, ಅಕ್ಟೋಬರ್ 6: ನೈರುತ್ಯ ಮುಂಗಾರು ಮಳೆಯ ನಿರ್ಗಮನ ಸಮೀಪಿಸುತ್ತಿದ್ದು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ತನ್ನ ಪ್ರತಾಪ ತೋರುತ್ತಿದೆ.
In Pics:ಕುಂಭದ್ರೋಣ ಮಳೆಗೆ ಮುಳುಗುತಿಹುದು ಬೆಂಗಳೂರು
ಬುಧವಾರ ಮುಂಜಾನೆಯಿಂದ ಬೆಂಗಳೂರಿನಲ್ಲಿ ಮಳೆ ಕಾಣಿಸಿಕೊಂಡಿದ್ದು ಮುಂದಿನ 24 ರಿಂದ 48 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಸಂಬಂಧಿ ಮಾಹಿತಿ ನೀಡುವ 'ಸ್ಕೈಮೆಟ್ ವೆದರ್' ವರದಿ ಮಾಡಿದೆ.
ಬೆಂಗಳೂರು ಹಾಗೂ ನಗರದ ಸುತ್ತಮುತ್ತಲ ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ಹಂಗಾಮಿ ನಿರ್ದೇಶಕ ಸುಂದರ ಎಂ. ಮೇತ್ರಿ ಹೇಳಿದ್ದಾರೆ.
ಬರ ಪೀಡಿತವಲ್ಲ, ಈಗ 'ಬರ ಮುಕ್ತ' ಕರ್ನಾಟಕ
48 ಗಂಟೆಗಳ ನಂತರ ಬೆಂಗಳೂರಿನಲ್ಲಿ ಮಳೆ ಕಡಿಮೆಯಾಗುತ್ತಾ ಹೋಗಲಿದೆ . ಒಂದಷ್ಟು ದಿನ ನಗರದಲ್ಲಿ ಮೋಡ ಕವಿದ ವಾತಾವರಣವಿರಲಿದೆ ಎಂದು 'ಸ್ಕೈಮೆಟ್ ವೆದರ್' ಮುನ್ಸೂಚನೆ ನೀಡಿದೆ.
ದಕ್ಷಿಣ
ಒಳನಾಡು,
ಕರಾವಳಿಯಲ್ಲಿ
ಮಳೆ
ಇನ್ನು
ಬೆಂಗಳೂರು
ಮಾತ್ರವಲ್ಲದೆ
ದಕ್ಷಿಣ
ಒಳನಾಡಿನಲ್ಲಿಯೂ
ಇಂದು
ಭಾರೀ
ಮಳೆಯಾಗಲಿದೆ
ಎಂದು
ಹವಾಮಾನ
ಇಲಾಖೆ
ಎಚ್ಚರಿಕೆ
ನೀಡಿದೆ.
"ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇನ್ನೆರಡು ದಿನ ಗುಡುಗು, ಮಿಂಚು ಸಹಿತ ಪ್ರಬಲ ಮಳೆ ಬೀಳಲಿದೆ. ಕರಾವಳಿ ಭಾಗದಲ್ಲಿ ಸಾಧಾರಣ ಮಳೆ ಆಗಲಿದೆ," ಸುಂದರ ಎಂ. ಮೇತ್ರಿ ತಿಳಿಸಿದ್ದಾರೆ.
ಉತ್ತರದತ್ತ
ತೆರಳಲಿದೆ
ಮಳೆ
ಮಾರುತಗಳು
ಬೆಂಗಳೂರು
ಮತ್ತು
ದಕ್ಷಿಣ
ಒಳನಾಡಿನ
ನಂತರ
ಅಕ್ಟೋಬರ್
7ರಿಂದ
10ರವರೆಗೆ
ನಾಲ್ಕು
ದಿನಗಳ
ಕಾಲ
ಉತ್ತರ
ಒಳನಾಡಿನಲ್ಲಿ
ಭಾರೀ
ಮಳೆ
ಬೀಳುವ
ಸಂಭವ
ಇದೆ
ಎಂದು
ಹವಾಮಾನ
ಇಲಾಖೆ
ಮಾಹಿತಿ
ನೀಡಿದೆ.
ಬಳ್ಳಾರಿ,
ಕೊಪ್ಪಳ,
ರಾಯಚೂರು,
ಕಲಬುರ್ಗಿ,
ಯಾದಗಿರಿ
ಮತ್ತು
ಬೀದರ್
ಜಿಲ್ಲೆಗಳಲ್ಲಿ
ಹೆಚ್ಚಿನ
ಮಳೆ
ಬೀಳಲಿದೆ.
"ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಮತ್ತು ಬಂಗಾಳ ಕೊಲ್ಲಿಯ ಒಡಿಶಾ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತದ ಪರಿಣಾಮ ಮುಂದಿನ ದಿನಗಳಲ್ಲಿ ಉತ್ತರ ಒಳನಾಡಿನಲ್ಲಿ ಸಾಕಷ್ಟು ಮಳೆಯಾಗುತ್ತದೆ' ಎಂದು ಪ್ರಾಕೃತಿಕ ವಿಕೋಪ ನಿರ್ವಹಣಾ ಮಂಡಳಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.