ಬೆಂ-ಮೈಸೂರು 6 ಪಥದ ರಸ್ತೆ ಕಾಮಗಾರಿ ನವೆಂಬರ್ನಲ್ಲಿ ಆರಂಭ
ಬೆಂಗಳೂರು, ಸೆಪ್ಟೆಂಬರ್ 03 : ಬಹುನಿರೀಕ್ಷಿತ ಬೆಂಗಳೂರು-ಮೈಸೂರು ನಡುವಿನ 6 ಪಥದ ರಸ್ತೆ ನಿರ್ಮಾಣ ಕಾಮಗಾರಿ ನವೆಂಬರ್ನಲ್ಲಿ ಆರಂಭವಾಗಲಿದೆ. ಸುಮಾರು 3,750 ಕೋಟಿ ರೂ.ಗಳ ಯೋಜನೆ ಇದಾಗಿದೆ.
ಶುಕ್ರವಾರ
ಲೋಕೋಪಯೋಗಿ
ಸಚಿವ
ಡಾ.ಎಚ್.ಸಿ.ಮಹದೇವಪ್ಪ
ಅವರು
ಈ
ಕುರಿತು
ವಿವರ
ನೀಡಿದ್ದಾರೆ.
'ಬೆಂಗಳೂರು-ಮೈಸೂರು
ಹೆದ್ದಾರಿ
ಕಾಮಗಾರಿಗೆ
ಟೆಂಡರ್
ಕರೆಯಲು
ಕೇಂದ್ರ
ಸರ್ಕಾರಕ್ಕೆ
ಕೋರಿದ್ದು,
ಈ
ಪ್ರಕ್ರಿಯೆ
ಶೀಘ್ರದಲ್ಲಿಯೇ
ನಡೆಯಲಿದೆ'
ಎಂದು
ಸಚಿವರು
ಹೇಳಿದರು.[ಬೆಂಗಳೂರು-ಮೈಸೂರು
ನಡುವೆ
6
ಪಥದ
ರಸ್ತೆ]
ಸದ್ಯ, ಸಿದ್ಧಪಡಿಸಿರುವ ಯೋಜನೆಯಂತೆ ಬೆಂಗಳೂರಿನ ಜ್ಞಾನಭಾರತಿ ಜಂಕ್ಷನ್ನಿಂದ ಮೈಸೂರಿನ ಕೊಲಂಬಿಯಾ ಆಸ್ಪತ್ರೆ ತನಕ ಒಟ್ಟು 117 ಕಿ.ಮೀ. ಉದ್ದದ ರಸ್ತೆಯನ್ನು ಆರು ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುತ್ತದೆ.[ಬೆಂ-ಮೈಸೂರು 6 ಪಥದ ರಸ್ತೆ, ಭೂ ಸ್ವಾಧೀನ ಆರಂಭ]
ಬೈಪಾಸ್, ಮೇಲ್ಸೇತುವೆ : ಆರುಪಥದ ರಸ್ತೆ ನಿರ್ಮಿಸುವಾಗ ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ಬೈಪಾಸ್ ನಿರ್ಮಾಣ ಮಾಡಲಾಗುತ್ತದೆ. ಮದ್ದೂರು ಸಮೀಪ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತದೆ.
ಯೋಜನೆಯಲ್ಲಿ ಬದಲಾವಣೆ : 6 ಪಥದ ರಸ್ತೆ ನಿರ್ಮಾಣ ಕಾಮಗಾರಿಯ ಯೋಜನೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಮೊದಲು ಜ್ಞಾನಭಾರತಿ ಜಂಕ್ಷನ್ನಿಂದ ನೈಸ್ ರಸ್ತೆ ವರೆಗೆ ಫ್ಲೈ ಓವರ್ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಅಲ್ಲಿ ನಮ್ಮ ಮೆಟ್ರೋ ಮೇಲ್ಸೇತುವೆ ಬರುವುದರಿಂದ ಆ ಯೋಜನೆಯನ್ನು ಕೈಬಿಡಲಾಗಿದೆ.