ಬನ್ನೇರುಘಟ್ಟ ಜೈವಿಕ ಉದ್ಯಾನದ ಸಹದೇವ ಇನ್ನಿಲ್ಲ
ಬೆಂಗಳೂರು, ಸೆಪ್ಟೆಂಬರ್. 25: ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನದಲ್ಲಿ ಉಸಿರಾಟ ತೊಂದರೆಯಿಂದ ಸಿಂಹವೊಂದು ಮೃತಪಟ್ಟಿದೆ. ಸೆಪ್ಟೆಂಬರ್ 24ರಂದು ಸಹದೇವ ಎಂಬ ಹೆಸರಿನ ಸಿಂಹ ಮೃತಪಟ್ಟಿದೆ.
ಸಿಂಹವು ಹಲವು ದಿನಗಳಿಂದ ಶ್ವಾಸಕೋಶ ತೊಂದರೆ ಬಳಲುತ್ತಿತ್ತು. ಸೆಪ್ಟೆಂಬರ್ 19ರಿಂದ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಿಂಹಕ್ಕೆ 6ವರ್ಷ ವಯಸ್ಸಾಗಿತ್ತು. ದೇಹದ ಅಂಗಾಂಗಗಳ ಮಾದರಿಯನ್ನು ತೆಗೆದು ಐಎಎಚ್ ಹಾಗೂ ವಿಬಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ [ಬನ್ನೇರುಘಟ್ಟ ಪಾರ್ಕ್ ಪ್ರವೇಶ ಇನ್ನು ದುಬಾರಿ]
ಸಿಂಹಗಳ ವಯಸ್ಸು ಸಾಮಾನ್ಯವಾಗಿ 14-16 ವರ್ಷ. ಕೆಲ ಸಿಂಹಗಳು ಅಪರೂಪಕ್ಕೆ 18 ವರ್ಷ ಬದುಕುತ್ತವೆ. ಆದರೆ ಉಸಿರಾಟ ತೊಂದರೆಗೆ ಸಿಲುಕಿದ ಸಹದೇವ 6ನೇ ವರ್ಷಕ್ಕೆ ಮೃತಪಟ್ಟಿದೆ.
ಕಳೆದ 2010ರ ಅಕ್ಟೋಬರ್ ನಲ್ಲಿ ಗಣೇಶ (14) ಎಂಬ ಹೆಸರಿನ ಚಿರತೆ ಹಾಗೂ ರಾಜಾ (26) ಎಂಬ ಹೆಸರಿನ ಸಿಂಹ ಬನ್ನೇರುಘಟ್ಟ ಉದ್ಯಾನವನದಲ್ಲಿ ಮೃತಪಟ್ಟಿದ್ದವು. ಇವು ಸಹ ಉಸಿರಾಟ ತೊಂದರೆಯಿಂದಲೇ ಸಾವಿಗೀಡಾಗಿದ್ದವು.