ಸಿಎಂ ರುಂಡ ಚೆಂಡಾಡುತ್ತೇನೆ ಎಂದಿದ್ದ ಚನ್ನಬಸಪ್ಪಗೆ ಜಾಮೀನು
ಶಿವಮೊಗ್ಗ, ನವೆಂಬರ್. 04: ಸಿಎಂ ಸಿದ್ದರಾಮಯ್ಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಶಿವಮೊಗ್ಗ ನಗರಸಭೆ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಎಸ್.ಎನ್. ಚನ್ನಬಸಪ್ಪ ಅವರಿಗೆ ಶಿವಮೊಗ್ಗ ಜೆಎಂ ಎಫ್ ಸಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ಸಿಎಂ ಸಿದ್ದರಾಮಯ್ಯ ಗೋಮಾಂಸ ಹೇಳಿಕೆ ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಆಕ್ರೋಶ ಭರಿತರಾಗಿ ಮಾತನಾಡಿದ್ದ ಚನ್ನಬಸಪ್ಪ ಅವರನ್ನು ಮಂಗಳವಾರ ಶಿವಮೊಗ್ಗ ಪೊಲೀಸರು ಬಂಧಿಸಿದ್ದರು.[ಗೋಮಾಂಸ ತಿಂದರೆ ರುಂಡ ಚೆಂಡಾಡುತ್ತೇನೆ]
ಬುಧವಾರ
ಅವರನ್ನು
ನ್ಯಾಯಾಲಯಕ್ಕೆ
ಹಾಜರುಪಡಿಸಲಾಯಿತು.
ಜಾಮೀನಿನ
ಮೇಲೆ
ಬಿಡುಗಡೆಯಾದ
ನಂತರ
ಬಿಜೆಪಿ
ಕಾರ್ಯಕರ್ತರು
ಸಂಭ್ರಮ
ಆಚರಿಸಿದರು.
ಗೋಮಾಂಸ
ತಿನ್ನುತ್ತೇನೆ
ಎಂದು
ಹೇಳಿದ
ಮುಖ್ಯಮಂತ್ರಿ
ಸಿದ್ದರಾಮಯ್ಯ
ತಾಕತ್ತಿದ್ದರೆ
ಶಿವಮೊಗ್ಗಕ್ಕೆ
ಬಂದು
ಗೋಮಾಂಸ
ಸೇವಿಸಲಿ.
ಅವರ
ರುಂಡ
ಚೆಂಡಾಡುತ್ತೇನೆ
ಎಂದು
ಚೆನ್ನಬಸಪ್ಪ
ನೀಡಿದ್ದ
ಹೇಳಿಕೆ
ವಿವಾದಕ್ಕೆ
ಕಾರಣವಾಗಿತ್ತು.[ಸಿಎಂಗೆ
ಒಂದು
ಕೆಜಿ
ಹಂದಿಮಾಂಸ
ಪಾರ್ಸೆಲ್!]
ಚೆನ್ನಬಸಪ್ಪ ಹೇಳಿಕೆ ವಿರುದ್ಧ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪೊಲೀಸ್ ವರಿಷ್ಠಾಧಿಕಾರಿ ರವಿ ಚಿನ್ನಣ್ಣನವರ್ ಅವರಿಗೆ ದೂರು ಸಲ್ಲಿಕೆ ಮಾಡಿದ್ದ ಮಾಡಿದ ನಂತರ ಪೊಲೀಸರು ಚೆನ್ನಬಸಪ್ಪ ಅವರನ್ನು ಬಂಧಿಸಿದ್ದರು.