ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಕರಡಿ ದಾಳಿ : ಹಾಸನದಲ್ಲಿ ರೈತ ಬಲಿ

|
Google Oneindia Kannada News

ಹಾಸನ, ಡಿ.2 : ಕರ್ನಾಟಕದಲ್ಲಿ ವನ್ಯಜೀವಿಗಳು ಮತ್ತು ಮಾನವರ ನಡುವಿನ ಸಂಘರ್ಷ ಮುಂದುವರೆದಿದ್ದು, ಹಾಸನ ಜಿಲ್ಲೆಯಲ್ಲಿ ಇಂದು ಕರಡಿ ದಾಳಿಗೆ ರೈತನೊಬ್ಬ ಬಲಿಯಾಗಿದ್ದಾನೆ. ಕಳೆದ ಎರಡು ತಿಂಗಳಿನಲ್ಲಿ ನಡೆದ 2ನೇ ಕರಡಿ ದಾಳಿ ಪ್ರಕರಣವಿದಾಗಿದೆ.

ಅರಸೀಕೆರೆ ತಾಲೂಕಿನ ಹಿರೇಸಾದರಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಶೇಖರಪ್ಪ ಎಂಬುವವರ ಮೇಲೆ ಕರಡಿ ದಾಳಿ ಮಾಡಿ ಅವರನ್ನು ಕೊಂದು ಹಾಕಿದೆ. ಶೇಖರಪ್ಪ ಅವರ ಜೊತೆಗಿದ್ದ ಕಳ್ಳಪ್ಪ ಅವರು ಕರಡಿ ದಾಳಿಯಿಂದ ಗಾಯಗೊಂಡಿದ್ದಾರೆ.

Bear

ಕರಡಿ ದಾಳಿಗೆ ಒಳಗಾದ ಶೇಖರಪ್ಪ ಸ್ಥಳದಲ್ಲೇ ಮೃತಪಟ್ಟರೆ, ಕಳ್ಳಪ್ಪ ಅವರನ್ನು ಅರಸೀಕೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಕರಡಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. [ಚಾಮರಾಜನಗರದಲ್ಲಿ ಚಿರತೆ ದಾಳಿ]

ತುಮಕೂರಿನಲ್ಲಿ ದಾಳಿ : ನ.18ರಂದು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಇಬ್ಬರು ರೈತರ ಮೇಲೆ ಕರಡಿ ದಾಳಿ ಮಾಡಿತ್ತು. ಕರಡಿ ದಾಳಿಯಿಂದ ರೈತನೊಬ್ಬ ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. [ತುಮಕೂರಿನಲ್ಲಿ ಕರಡಿ ದಾಳಿ]

ಇತ್ತೀಚೆಗೆ ಪ್ರಾಣಿಗಳ ದಾಳಿಗೆ ಬಲಿಯಾದವರು [ಚಿಕ್ಕಮಗಳೂರು : ಸೆರೆಸಿಕ್ಕಿತು ಮಹಿಳೆ ಕೊಂದ ಹುಲಿ]
* ನ.15ರಂದು ಚಿಕ್ಕಮಗಳೂರಿನಲ್ಲಿ ಹುಲಿ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು.
* ನ.18ರಂದು ಮಧುಗಿರಿ ತಾಲೂಕಿನಲ್ಲಿ ರೈತರ ಮೇಲೆ ಕರಡಿ ದಾಳಿ ಮಾಡಿ ಒಬ್ಬರನ್ನು ಕೊಂದು ಹಾಕಿತ್ತು.
* ನ.27ರಂದು ಚಾಮರಾಜನಗರದಲ್ಲಿ ಚಿರತೆ ದಾಳಿಗೆ ಟೆಂಪೋ ಕ್ಲೀನರ್‌ ಬಲಿಯಾಗಿದ್ದ.

English summary
One person was killed and the other sustained serious injuries in a bear attack at Hiresadarahalli in Hassan district on Tuesday afternoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X