ಬಸವಕಲ್ಯಾಣದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ರಾಜೀನಾಮೆ
ಬೀದರ್, ಏಪ್ರಿಲ್ 03 : ಬಸವಕಲ್ಯಾಣ ಕ್ಷೇತ್ರದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಸೇರುವುದಾಗಿ ಈಗಾಗಲೇ ಮಲ್ಲಿಕಾರ್ಜುನ ಖೂಬಾ ಘೋಷಣೆ ಮಾಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಮಂಗಳವಾರ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿರುವ ಸ್ಪೀಕರ್ ಕೆ.ಬಿ.ಕೋಳಿವಾಡ ನಿವಾಸಕ್ಕೆ ಮಲ್ಲಿಕಾರ್ಜುನ ಖೂಬಾ ತೆರಳಿ, ರಾಜೀನಾಮೆಯನ್ನು ಸಲ್ಲಿಸಿದರು. ಜೆಡಿಎಸ್ ಪಕ್ಷದ ಪ್ರಾಥಮಮಿಕ ಸದಸ್ಯತ್ವಕ್ಕೆ ಅವರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದರು.
ಮಲ್ಲಿಕಾರ್ಜುನ್ ಖೂಬಾಗೆ ಬಿಜೆಪಿ ಟಿಕೆಟ್ ಸಿಗಲಿದೆಯೇ?
ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದು ಮಲ್ಲಿಕಾರ್ಜುನ ಖೂಬಾ ಅವರು ಈಗಾಗಲೇ ಘೋಷಣೆ ಮಾಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲಿ ಖೂಬಾ ಅವರು ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಮಲ್ಲಿಕಾರ್ಜುನ ಖೂಬಾ ಅವರು ಬಸವಕಲ್ಯಾಣ ಕ್ಷೇತ್ರದಿಂದ 2013ರ ಚುನಾವಣೆಯಲ್ಲಿ 37,494 ಮತಗಳನ್ನು ಪಡೆದು ಜಯಗಳಿಸಿದ್ದರು. ಖೂಬಾ ಅವರು ಬಿಜೆಪಿ ಸೇರ್ಪಡೆಯಾಗುವುದಕ್ಕೆ ಹಲವಾರು ಸ್ಥಳೀಯ ನಾಯಕರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.
ಜೆಡಿಎಸ್ ತೊರೆದ ಶಾಸಕರ ಪಟ್ಟಿ
*
ರಮೇಶ
ಬಂಡಿಸಿದ್ದೇಗೌಡ
(ಶ್ರೀರಂಗಪಟ್ಟಣ)
*
ಜಮೀರ್
ಅಹಮದ್
ಖಾನ್
(ಚಾಮರಾಜಪೇಟೆ)
*
ಎಚ್.ಸಿ.ಬಾಲಕೃಷ್ಣ
(ಮಾಗಡಿ)
*
ಚೆಲುವರಾಯಸ್ವಾಮಿ
(ನಾಗಮಂಗಲ)
*
ಇಕ್ಬಾಲ್
ಅನ್ಸಾರಿ
(ಗಂಗಾವತಿ)
*
ಅಖಂಡ
ಶ್ರೀನಿವಾಸಮೂರ್ತಿ
(ಪುಲಿಕೇಶಿ
ನಗರ)
*
ಭೀಮಾ
ನಾಯಕ್
(ಹಗರಿಬೊಮ್ಮನಹಳ್ಳಿ)
*
ಮಾನಪ್ಪ
ವಜ್ಜಲ್
(ಲಿಂಗಸಗೂರು)
*
ಡಾ.ಶಿವರಾಜ್
ಪಾಟೀಲ್
(ರಾಯಚೂರು
ನಗರ)
*
ಮಲ್ಲಿಕಾರ್ಜುನ
ಖೂಬಾ
(ಬಸವಕಲ್ಯಾಣ)