ಉಡುಪಿಯಲ್ಲಿ ಬನ್ನಂಜೆ ರಾಜನ ವಿಚಾರಣೆ
ಉಡುಪಿ, ಆಗಸ್ಟ್ 17 : ಭೂಗತ ಪಾತಕಿ ಬನ್ನಂಜೆ ರಾಜಾನನ್ನು ಹೆಚ್ಚಿನ ವಿಚಾರಣೆಗಾಗಿ ಉಡುಪಿಗೆ ಕರೆತರಲಾಗಿದೆ. ಶುಕ್ರವಾರ ಪೊಲೀಸರು ಬನ್ನಂಜೆ ರಾಜಾನನ್ನು ಕರ್ನಾಟಕಕ್ಕೆ ಕರೆತಂದಿದ್ದು, ಬೆಳಗಾವಿಯ ಕೋರ್ಟ್ ಆ.28ರ ತನಕ ಆತನನ್ನು ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.
ಬೆಳಗಾವಿಯಿಂದ
ವಿಶೇಷ
ಭದ್ರತೆ
ಮೂಲಕ
ಬನ್ನಂಜೆ
ರಾಜಾನನ್ನು
ಉಡುಪಿಗೆ
ಕರೆ
ತರಲಾಗಿದೆ.
ಶನಿವಾರ
ಮಧ್ಯಾಹ್ನ
ಉಡುಪಿಯ
ನಗರ
ಠಾಣೆಯಲ್ಲಿ
ಬನ್ನಂಜೆಯ
ಸುಧೀರ್ಘ
ವಿಚಾರಣೆ
ನಡೆಸಿ,
ನಂತರ
ರಹಸ್ಯ
ಸ್ಥಳಕ್ಕೆ
ಕರೆದುಕೊಂಡು
ಹೋಗಲಾಗಿದೆ.
[ಬನ್ನಂಜೆ
ಕರೆತರಲು
ಹೊರಟ
ಪೊಲೀಸರು]
ತನಗೆ ರವಿ ಪೂಜಾರಿ ಮತ್ತು ಮುತ್ತಪ್ಪ ರೈ ಅವರಿಂದ ಜೀವ ಬೆದರಿಕೆ ಇದೆ ಎಂದು ಬನ್ನಂಜೆ ರಾಜಾ ಹೇಳಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಬನ್ನಂಜೆ ರಾಜಾ ವಿರುದ್ಧ ಕರ್ನಾಟಕದಲ್ಲಿ 44 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳಿವೆ. ಅವುಗಳ ಕುರಿತು ವಿಚಾರಣೆ ನಡೆಸಲಾಗುತ್ತಿದೆ.
ಮಂಗಳೂರು, ಮೈಸೂರು, ಶಿವಮೊಗ್ಗದಲ್ಲಿಯೂ ಬನ್ನಂಜೆ ರಾಜಾ ವಿರುದ್ಧ ಪ್ರಕರಣಗಳು ದಾಖಲಾಗಿದ್ದು ಉಡುಪಿ ಪೊಲೀಸರ ವಿಚಾರಣೆ ಬಳಿಕ ಅಲ್ಲಿನ ಪೊಲೀಸರು ಆತನನ್ನು ಕರೆದುಕೊಂಡು ಹೋಗುವ ಸಾಧ್ಯತೆ ಇದೆ. ರಾಜಾ ಮಧುಮೇಹ ಮತ್ತು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಆತನಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ. [ಬನ್ನಂಜೆ ರಾಜಾ ಬಂಧನ]
ಬನ್ನೆಂಜೆ ರಾಜಾ ಯಾರು? : ಉಡುಪಿ ಜಿಲ್ಲೆಯ ಬನ್ನಂಜೆ ಗ್ರಾಮದ ಸುಂದರ್ ಶೆಟ್ಟಿಗಾರ್ ಮತ್ತು ವಿಲಾಸಿನಿ ದಂಪತಿಯ ಪುತ್ರನಾದ ಬನ್ನಂಜೆ ರಾಜಾ ಬಿಎ ಪದವೀಧರ. 1990ರಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪಿಯುಸಿ ಓದುವಾಗ ತನ್ನ ವಿರೋಧಿ ಬಣದ ಸಹಪಾಠಿಯನ್ನು ಮೊದಲ ಮಹಡಿಯಿಂದ ಕೆಳಗೆ ತಳ್ಳುವ ಮೂಲಕ ಅಪರಾಧ ಕೃತ್ಯಕ್ಕೆ ರಾಜಾ ಕಾಲಿಟ್ಟಿದ್ದ.
ಮೊದಲಿಗೆ ಛೋಟಾರಾಜನ್ ಗ್ಯಾಂಗಿನಲ್ಲಿ ಗುರುತಿಸಿಕೊಂಡಿದ್ದ. ಮುಂಬೈನ ಭೂಗತ ಪಾತಕಿಗಳಿಂದ ಪಳಗಿದ ಈತ ಈಗ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಡಾನ್. ಬನ್ನಂಜೆ ರಾಜನ ವಿರುದ್ಧ ಕೊಲೆ, ಸುಲಿಗೆ, ಬೆದರಿಕೆ ಸೇರಿದಂತೆ ರಾಜ್ಯದಲ್ಲಿ 44ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಮತ್ತು ಮಂಗಳೂರು ನಗರದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದು. ಕೇರಳದಲ್ಲಿಯೂ ಆತನ ವಿರುದ್ಧ ಹಲವಾರು ಪ್ರಕರಣಗಳಿವೆ.