Breaking news:ಅರವಿಂದ್ ಬೆಲ್ಲದ್-ಕರ್ನಾಟಕದ ಮುಂದಿನ ಸಿಎಂ?
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು? ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕಳೆದ ಹಲವು ತಿಂಗಳುಗಳಿಂದ ನಡೆದ ರಾಜಕೀಯ ಪ್ರಹಸನಕ್ಕೆ ತೆರೆ ಬೀಳುತ್ತಿದೆ. ಜುಲೈ 26ರಂದು ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ 2ನೇ ವರ್ಷದ ಸಂಭ್ರಮಾಚರಣೆಯೊಂದಿಗೆ ವಿದಾಯವನ್ನು ಹೇಳುವ ಕಾಲ ಬಂದಿದೆ. ಬಿಜೆಪಿ ಹೈಕಮಾಂಡ್ ನಿರೀಕ್ಷೆಯಂತೆ ಅಚ್ಚರಿಯ ಹೆಸರನ್ನು ಪ್ರಕಟಿಸಲು ಮುಂದಾಗಿದೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಅವರು ಮಿಕ್ಕವರನ್ನು ರೇಸಿನಲ್ಲಿ ಹಿಂದಿಕ್ಕಿ ಕರ್ನಾಟಕದ ಸಿಎಂ ಪಟ್ಟಕ್ಕೇರಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸದ್ಯ ಗೋವಾ ಪ್ರವಾಸದಲ್ಲಿರುವ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಇಂದು ಕರ್ನಾಟಕ ಬಿಜೆಪಿ ಸರ್ಕಾರದಲ್ಲಿನ ಪ್ರಮುಖ ಬದಲಾವಣೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಿಸಲಿದ್ದಾರೆ. ಪ್ರಮುಖ ಬದಲಾವಣೆಯಲ್ಲಿ ಯಾರೆಲ್ಲ ಮುಖಂಡರಿಗೆ ಸಂಪುಟದಿಂದ ಕೊಕ್ ಸಿಕ್ಕಿದೆ ಎಂಬ ವಿವರ ಲಭ್ಯವಾಗಲಿದೆ. ಆದರೆ, ಯಡಿಯೂರಪ್ಪ ರಾಜೀನಾಮೆ ಯಾವಾಗ ನೀಡುತ್ತಾರೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ವಿವರ ಸಿಕ್ಕಿಲ್ಲ.
ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಈಗ ಕರ್ನಾಟಕದಲ್ಲಿ ಸಿಎಂ ಬದಲಾವಣೆಯೊಂದೇ ಪ್ರಶ್ನೆಯಾಗಿ ಉಳಿದಿರಲಿಲ್ಲ, ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಆಮೂಲಾಗ್ರ ಬದಲಾವಣೆ ತರುವುದು ಹೈಕಮಾಂಡ್ ನಾಯಕರಿಗೆ ಅನಿವಾರ್ಯವಾಗಿತ್ತು. 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಜಾತಿ, ಮತ, ಪಂಥ, ಪ್ರಾದೇಶಿಕತೆ, ಸಂಘಟನೆ, ಅನುಭವ ಎಲ್ಲವನ್ನು ಅಳೆದು ತೂಗಿ ಅಚ್ಚರಿಯ ಹೆಸರೊಂದನ್ನು ಹೈಕಮಾಂಡ್ ಘೋಷಿಸುವ ಧೈರ್ಯ ಮಾಡಲಾಗಿದೆ.
ಕರ್ನಾಟಕ ಜನರ ನಾಡಿ ಮಿಡಿತ, ರಾಷ್ಟ್ರೀಯ ಸ್ವಯಂಸೇವಕ ಸಂಘ, ಅಧಿಕಾರಿಗಳು ಸೇರಿದಂತೆ ಅನೇಕ ಮೂಲಗಳಿಂದ ಬಂದಿರುವ ಸಲಹೆ, ಸೂಚನೆಗಳನ್ನು ಹೈಕಮಾಂಡ್ ಸಂಗ್ರಹಿಸಲು ಆರಂಭಿಸಿ ಹಲವು ತಿಂಗಳುಗಳೇ ಕಳೆದಿವೆ, ಇನ್ನೇನಿದ್ದರೂ ನಿರ್ಣಯ ಪ್ರಕಟಿಸುತ್ತಿದೆ.
ಬದಲಾವಣೆಗೆ ಚಾಲನೆ ಕೊಟ್ಟ ಮೋದಿ, ಅಮಿತ್ ಶಾ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ, ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಬಗ್ಗೆ ಚರ್ಚೆಗೆ ಮೊದಲು ಚಾಲನೆ ನೀಡಿದವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಆರೆಸ್ಸೆಸ್ ನಂ.2 ದತ್ತಾತ್ರೇಯ ಹೊಸಬಾಳೆ ನಂತರ ಇವರ ಜೊತೆಗೆ ಜೆಪಿ ನಡ್ಡಾ, ಪ್ರಲ್ಹಾದ್ ಜೋಶಿ ಕೂಡಾ ಸೇರಿಕೊಂಡರು.
ಕರ್ನಾಟಕದಲ್ಲಿರುವ ಒಟ್ಟಾರೆ ಮತದಾರರ ಇಲ್ಲಿವರೆಗಿನ ನಾಡಿಮಿಡಿತ, ಬದಲಾವಣೆ ತಂದರೆ ಆಗುವ ಪರಿಣಾಮಗಳನ್ನು ಚರ್ಚಿಸಿ, ಹೊಸ ಸಿಎಂ ಆಯ್ಕೆ ನಡೆಸಿದ್ದಾರೆ. ಅತಿ ಹೆಚ್ಚುಶೇಕಡಾವಾರು ಮತದಾರರನ್ನು ಹೊಂದಿರುವ ವೀರಶೈವ ಲಿಂಗಾಯತ ಸಮುದಾಯವನ್ನು ಪಕ್ಕಕ್ಕೆ ತಳ್ಳದೆ ಹೊಸ ಸಾಧ್ಯತೆ ಬಗ್ಗೆ ನೋಡಲಾಗಿದೆ. ಈ ನಡುವೆ ಯಡಿಯೂರಪ್ಪ ಅವರಿಗೆ ಗೌರವಯುತ ನಿರ್ಗಮನ ಹಾಗೂ ಪರಿಶ್ರಮಕ್ಕೆ ತಕ್ಕ ಸ್ಥಾನಮಾನ ನೀಡುವ ಬಗ್ಗೆ ಕೂಡಾ ಚರ್ಚಿಸಲಾಗಿದೆ.
ಯಾರು ಇನ್ ಯಾರು ಔಟ್
ಅರವಿಂದ್
ಬೆಲ್ಲದ್-
ಸಿಎಂ
ಬಿ
ಶ್ರೀರಾಮುಲು-ಡಿಸಿಎಂ
ಡಾ.
ಸಿ.ಎನ್
ಅಶ್ವಥ
ನಾರಾಯಣ-
ಡಿಸಿಎಂ
ಸಂಪುಟದಿಂದ
ಔಟ್
ಕೆಎಸ್
ಈಶ್ವರಪ್ಪ
ಗೋವಿಂದ
ಕಾರಜೋಳ
ಆರ್
ಅಶೋಕ
ಜಗದೀಶ್
ಶೆಟ್ಟರ್
ನಾಲ್ವರು ಡಿಸಿಎಂ ನೇಮಕದ ಬಗ್ಗೆ ಚರ್ಚೆ ನಡೆಸಲಾಗಿದ್ದು, ಬ್ರಾಹ್ಮಣ ಸಮುದಾಯ ಹಾಗೂ ಒಬಿಸಿ ಸಮುದಾಯದ ಒಬ್ಬರಿಗೆ ಸ್ಥಾನ ಸಿಗುವ ನಿರೀಕ್ಷೆಯಿದೆ. ಸುರೇಶ್ ಕುಮಾರ್ ಅಥವಾ ಸುನಿಲ್ ಕುಮಾರ್ ಡಿಸಿಎಂಯಾದರೆ ಅಚ್ಚರಿ ಪಡಬೇಕಾಗಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಸಿಎಂ ರೇಸಿನಲ್ಲಿದ್ದ ಪ್ರಮುಖರನ್ನು ಸಂಪುಟದಿಂದಲೂ ಹೊರಕ್ಕೆ ಇಡಲು ಹೈಕಮಾಂಡ್ ಸೂಚಿಸಿದೆ. ಸಂಪುಟದಲ್ಲಿರುವ ಯಡಿಯೂರಪ್ಪ ಆಪ್ತರು ಹಾಗೂ ಬಾಂಬೆ ಟೀಂನವರಿಗೂ ಚುರುಕು ಮುಟ್ಟಿಸುವ ಸಾಧ್ಯತೆಯಿದ್ದು, ಏನೆಲ್ಲ ಬದಲಾವಣೆಯಾಗಲಿದೆ ಕಾದು ನೋಡಬೇಕಿದೆ.
ಮಠಾಧೀಶರಿಂದ ಹೆಚ್ಚಾದ ಒತ್ತಡ
ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರ ಶ್ರಮ ಬಹಳ ದೊಡ್ಡದಿದೆ. ಯಡಿಯೂರಪ್ಪ ಅವರ ರಾಜಕೀಯ ಅನುಭವ, ರೈತ ಪರ ಹೋರಾಟವನ್ನು ಪಕ್ಷಾತೀತವಾಗಿ ಎಲ್ಲರೂ ಮಾನ್ಯ ಮಾಡುತ್ತಾರೆ. ಹೀಗಾಗಿ ಅವರನ್ನು ಇನ್ನುಳಿದ ಎರಡು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಸುವ ಮೂಲಕ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಅವರಿಗೆ ಅವಕಾಶ ಮಾಡಿಕೊಡಬೇಕು ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್ ಕಡೆಗೆ ಮಠಾಧೀಶರು ರವಾನಿಸಿದ್ದರು. ಆದರೆ, ಕೇಂದ್ರ ನಾಯಕರು ಈಗಾಗಲೇ ನಿರ್ಧಾರವಾಗಿದ್ದು, ಯಾವುದೇ ಒತ್ತಡ, ಪ್ರತಿಭಟನೆಯನ್ನು ಗಮನಿಸಿ, ಲಿಂಗಾಯತರು ಒಪ್ಪಬಹುದಾದ ಶಾಸಕರನ್ನೇ ಸಿಎಂ ಪಟ್ಟದಲ್ಲಿ ಕೂರಿಸಲು ಹೈಕಮಾಂಡ್ ನಿರ್ಧರಿಸಿದೆ ಜೊತೆಗೆ ಉತ್ತರ ಕರ್ನಾಟಕ ಭಾಗದವರೇ ಸಿಎಂ ಆಗಲಿ ಎಂಬ ಕೂಗಿಗೆ ಬೆಲೆ ನೀಡಲಾಗಿದೆ.
ಅರವಿಂದ್ ಬೆಲ್ಲದ್ ಆಯ್ಕೆ ಏಕೆ
ಎರಡು ಬಾರಿ ಶಾಸಕರಾಗಿರುವ ಅರವಿಂದ್ ಬೆಲ್ಲದ್ ಅವರು ಹುಬ್ಬಳ್ಳಿ -ಗದಗ ಭಾಗದಲ್ಲಿ ತಕ್ಕಮಟ್ಟಿನ ಜನಪ್ರಿಯತೆ ಹೊಂದಿದ್ದು, ಬೆಲ್ಲದ್ ಕುಟುಂಬ ಉದ್ಯಮದಲ್ಲೂ ಯಶಸ್ಸುಗೊಳಿಸಿದೆ. ಹಿರಿಯ ಶಾಸಕ ಚಂದ್ರಕಾಂತ್ ಬೆಲ್ಲದ್ ಅವರ ಪುತ್ರ ಅರವಿಂದ್ ಅವರು ಆರೆಸ್ಸೆಸ್ ಬೆಂಬಲ ಹೊಂದಿರುವ ರಾಜಕಾರಣಿ. ಉತ್ತರ ಕರ್ನಾಟಕ ಭಾಗದ ಎರಡನೇ ಪೀಳಿಗೆಯ ನೇತಾರ ಎಂದು ಬಿಂಬಿಸಲಾಗುತ್ತಿದ್ದು, ಅಚ್ಚರಿಯ ಹೆಸರಾಗಿ ಬೆಲ್ಲದ್ ಹೆಸರು ಸಿಎಂ ರೇಸ್ ಪಟ್ಟಿಯಲ್ಲಿ ಸೇರಿಕೊಂಡಿತ್ತು. ಈ ಬಾರಿ ಕ್ಲೀನ್ ಇಮೇಜ್ ಇರುವ ನಾಯಕರ ಆಯ್ಕೆಗೆ ಹೆಚ್ಚಿನ ಒತ್ತು ನೀಡಿರುವ ಹೈಕಮಾಂಡ್, ಪ್ರಾದೇಶಿಕತೆ, ಜಾತಿ ಮತ ಪಂಥದ ಕೋಟಾ, ಮತದಾರರ ನಾಡಿ ಮಿಡಿತದ ಆಧಾರ ಮೇಲೆ ಬೆಲ್ಲದ್ ಅವರಿಗೆ ಮಣೆ ಹಾಕಿದೆ.
ಸಂಭಾವ್ಯ ಪಟ್ಟಿಯಲ್ಲಿರುವ ಲಿಂಗಾಯತ ಸಮುದಾಯ
ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ, ದಿವಂಗತ ರಾಜಕಾರಣಿ ಎಸ್ ಆರ್ ಬೊಮ್ಮಾಯಿ ಅವರ ಪುತ್ರ. ಎಚ್ ಡಿ ದೇವೇಗೌಡ, ರಾಮಕೃಷ್ಣ ಹೆಗಡೆ ಕಾಲದ ಜನತಾ ಪರಿವಾರದಿಂದ ಬೆಳೆದು ಬಂದ ಬಸವರಾಜ ಬೊಮ್ಮಾಯಿ ಅವರು ಹಾಲಿ ಗೃಹ ಸಚಿವರಾಗಿದ್ದಾರೆ. ಬಿಎಸ್ ಯಡಿಯೂರಪ್ಪರ ಆಪ್ತ ಬಳಗದಲ್ಲಿರುವ ಬೊಮ್ಮಾಯಿ 2008ರಿಂದ ಬಿಜೆಪಿಯಲ್ಲಿದ್ದಾರೆ. ಜಲ ಸಂಪನ್ಮೂಲ ಖಾತೆ ಸಚಿವರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದರು.
ಮುರುಗೇಶ್ ನಿರಾಣಿ: ಗಣಿಗಾರಿಕೆ ಹಾಗೂ ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ್ ನಿರಾಣಿ ಅವರು ಪಂಚಮಶಾಲಿ ಲಿಂಗಾಯತ ಸಮುದಾಯದ ಮುಖಂಡರಾಗಿದ್ದಾರೆ. ಈ ಹಿಂದೆ ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಕೈಗಾರಿಕಾ ಸಚಿವರಾಗಿ ಕರ್ನಾಟಕಕ್ಕೆ ಬಂಡಾವಳ ಹೂಡಿಕೆಯ ರಹದಾರಿ ತೋರಿಸಿದರು. ಯಡಿಯೂರಪ್ಪ ಅವರ ಜೊತೆಗೆ ವಿವಾದ, ಆರೋಪಗಳನ್ನು ಹೊತ್ತುಕೊಂಡವರು. ನಿರಾಣಿ ಒಡೆತನದ ಸಕ್ಕರೆ, ಇಂಧನ ಕ್ಷೇತ್ರದ ಉದ್ಯಮಗಳಲ್ಲಿ1 ಲಕ್ಷಕ್ಕೂ ಅಧಿಕ ನೌಕರರಿದ್ದಾರೆ. 90ರ ದಶಕದಿಂದ ಆರೆಸ್ಸೆಸ್ ಜೊತೆ ಗುರುತಿಸಿಕೊಂಡಿರುವ ನಿರಾಣಿ ಮೂರು ಬಾರಿ ಶಾಸಕರಾಗಿದ್ದಾರೆ.
Recommended Video