ಅಡಿಕೆ ಧಾರಣೆ ಕುಸಿತ: ಜೂನ್ 27ರಂದು 13 ಜಿಲ್ಲೆ ಬಂದ್
ಬೆಂಗಳೂರು, ಜೂನ್ 25: ಕೇಂದ್ರ ಸರ್ಕಾರದ ಅಡಿಕೆ ಆಮದು ನೀತಿ ಖಂಡಿಸಿ ಜೂನ್ 27ರಂದು ರಾಜ್ಯದ 13 ಜಿಲ್ಲೆಗಳಲ್ಲಿ ಬಂದ್ಗೆ ಕರೆ ನೀಡಲಾಗಿದೆ. ಅಡಿಕೆ ಧಾರಣೆ ನಿರಂತರ ಕುಸಿಯುತ್ತಿದ್ದು ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಂದ್ ಆಚರಣೆ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಸ್ಥಳೀಯ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ. ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಬೆಂಗಳೂರು ಗ್ರಾಮಾಂತರ ಸೇರಿದಂತೆ 13 ಜಿಲ್ಲೆಗಳಲ್ಲಿ ಸೇರಿದಂತೆ 13 ಜಿಲ್ಲೆಗಳ ಬಂದ್ ಗೆ ಕರೆನೀಡಲಾಗಿದೆ ಎಂದು ಚಂದ್ರಶೇಖರ್ ಒನ್ ಇಂಡಿಯಾಕ್ಕೆ ತಿಳಿಸಿದರು.[ಅಡಿಕೆ ಧಾರಣೆ ಪಾತಾಳಕ್ಕೆ, ಕಂಗೆಟ್ಟ ಬೆಳೆಗಾರ]
ವಿವಿಧ ಕಾರಣಗಳಿಂದ ಅಡಿಕೆ ಮತ್ತು ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶ್ರೀಲಂಕಾ, ಮಲೇಷಿಯಾ ಸೇರಿದಂತೆ ನೆರೆ ರಾಷ್ಟ್ರಗಳಿಂದ ತೆಂಗು ಮತ್ತು ಅಡಕೆ ಆಮದು ಮಾಡಿಕೊಳ್ಳುತ್ತಿರುವುದರಿಂದ ನಮ್ಮ ದೇಶದ ಅಡಿಕೆಗೆ ಧಾರಣೆ ಇಲ್ಲವಾಗಿದೆ. ರಾಜ್ಯ ಸರ್ಕಾರ ಸಹ ನಿರ್ಲಕ್ಷ್ಯ ತಾಳಿದ್ದು ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಹೇಳಿದರು.
ಹಿಂದಿನ ವರ್ಷ ಕ್ವಿಂಟಲ್ಗೆ 80 ಸಾವಿರ ರು. ಇದ್ದ ಅಡಿಕೆ ದರ ಈಗ 20 ಸಾವಿರ ರು. ಗಿಂತ ಕೆಳಕ್ಕೆ ಕುಸಿದಿದೆ. ಅಡಿಕೆಗೆ ವಿವಿಧ ರೋಗಗಳು ತಾಗಿದ್ದು ಕೇಂದ್ರ ಸರ್ಕಾರ ತನ್ನ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.[ಅರೇಕಾ ಟೀ ಮಾರುಕಟ್ಟೆಗೆ, ನೀವು ಸ್ವಾದ ನೀಡಿದ್ರಾ!]
27ರಂದು ಆಯಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳನ್ನು ಬಂದ್ ಮಾಡುವ ಮೂಲಕ ಸರ್ಕಾರಗಳಿಗೆ ತಮ್ಮ ವಿರೋಧ ವ್ಯಕ್ತಪಡಿಸಲಾಗುವುದು. ಈ ಹೋರಾಟಕ್ಕೆ ಪಕ್ಷಾತೀತವಾಗಿ ರಾಜಕೀಯ ಪಕ್ಷಗಳು ಮತ್ತು ನಾಗರಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.[ಚೀನಾದ ಮೌತ್ ಫ್ರೆಶ್ನರ್ ಆಗಿ ದಕ್ಷಿಣ ಕನ್ನಡದ ಅಡಿಕೆ!]
ಬಂದ್
ಯಾಕೆ?
*
ಉತ್ತರ
ಕನ್ನಡ,
ದಾವಣಗೆರೆ,
ಶಿವಮೊಗ್ಗ,
ಹಾವೇರಿ,
ಚಿಕ್ಕಮಗಳೂರು,
ಉತ್ತರ
ಕನ್ನಡ,
ದಕ್ಷಿಣ
ಕನ್ನಡ,
ಹಾಸನ,
ಬೆಂಗಳೂರು
ಗ್ರಾಮಾಂತರ
ಸೇರಿದಂತೆ
13
ಜಿಲ್ಲೆಗಳಲ್ಲಿ
ಬಂದ್
ಆಚರಣೆ
*
ಕೇಂದ್ರದ
ಆಮದು
ನೀತಿ
ಬದಲಾವಣೆಗೆ
ಒತ್ತಾಯ
*
ರಾಜ್ಯ
ಸರ್ಕಾರದ
ನಿರ್ಲಕ್ಷ್ಯ
ಖಂಡನೆ
*
ಪರಿಹಾರಕ್ಕೆ
ಮುಂದಾಗದಿದ್ದರೆ
ಉಗ್ರ
ಹೋರಾಟ