ದೇವಸ್ಥಾನಗಳ ಅರ್ಚಕರಿಂದ ಯಡಿಯೂರಪ್ಪಗೆ ಮನವಿ
ಬೆಂಗಳೂರು, ಏಪ್ರಿಲ್ 1: ಭಾರತ ಲಾಕ್ಡೌನ್ ಆಗಿರುವುದರಿಂದ ಎಲ್ಲಾ ದೇವಸ್ಥಾನಗಳು ಬಂದ್ ಆಗಿವೆ, ಇದರಿಂದ ಸುಮಾರು 1 ಲಕ್ಷ ಅರ್ಚಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅರ್ಚಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಅಳಲು ತೋಡಿಕೊಂಡಿದ್ದಾರೆ.
ಎಲ್ಲವೂ ಸಹಜ ಸ್ಥಿತಿಗೆ ಬರುವವರೆಗೆ ತಾತ್ಕಾಲಿಕ ಪರಿಹಾರ ನೀಡಬೇಕು ಎಂದು ಅರ್ಚಕರ, ಆಗಮೀಕರ ಒಕ್ಕೂಟ ಮುಖ್ಯಮಂತ್ರಿಗೆ ಮನವಿ ಮಾಡಿದೆ.
ಕೊರೊನಾ ಭೀತಿ: ಗೌರಿಬಿದನೂರಿನಲ್ಲಿ 1 ಸಾವಿರ ಮಂದಿಗೆ ಗೃಹದಿಗ್ಬಂಧನ
ಲಾಕ್ಡೌನ್ ಕೊನೆಗೊಂಡು ದೇವಸ್ಥಾನಗಳು ಮತ್ತೆ ಎಂದಿನಂತೆ ಕಾರ್ಯಾಚರಣೆಗೊಳ್ಳುವವರೆಗೆ ತಾತ್ಕಾಲಿಕ ಪರಿಹಾರ ನೀಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ.
ಕೊರೊನಾ ಭೀತಿಯಿಂದಾಗಿ ಮುಜರಾಯಿ ಇಲಾಖೆಗೆ ಒಳಪಟ್ಟ ಸಿ ದರ್ಜೆಯ 35 ಸಾವಿರ ದೇವಸ್ಥಾಗಳ ಬಾಗಿಲು ಮುಚ್ಚಲಾಗಿದೆ. ಇಲ್ಲಿ 1 ಲಕ್ಷ ಅರ್ಚಕರು ಕೆಲಸ ಮಾಡುತ್ತಿದ್ದು, ಅವರು ಜೀವನ ನಡೆಸುವುದೇ ಕಷ್ಟವಾಗಿದೆ.
ಅರ್ಚಕರು ಹಾಗೂ ಅವರ ಕುಟುಂಬದ ಜೀವನ ನಿರ್ವಹಣೆಗೆ ಸರ್ಕಾರ ನೆರವು ನೀಡಬೇಕು ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮೀಕರ ಮತ್ತು ಉಪಾಧಿವಂತ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಕೆಎಸ್ಎನ್ ದೀಕ್ಷಿತ್ ಮನವಿ ಸಲ್ಲಿಸಿದ್ದಾರೆ.