ಟಿಪ್ಪು ಜಯಂತಿ ರದ್ದು: ಬಿಎಸ್ವೈಗೆ ಜಮೀರ್ ಬಹಿರಂಗ ಸವಾಲು
Recommended Video
ಬೆಂಗಳೂರು, ಜುಲೈ 30: ಟಿಪ್ಪು ಜಯಂತಿ ರದ್ದತಿ ವಿಚಾರದಲ್ಲಿ, ಯಡಿಯೂರಪ್ಪ ಸರಕಾರದ ವಿರುದ್ದ ಚಾಮರಾಜಪೇಟೆ ಶಾಸಕ, ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಕಿಡಿಕಾರಿದರು.
ರಾಜ್ಯದ ಎಲ್ಲಾ ಭಾಗಗಳಲ್ಲಿ ಯಾವುದೇ ತೊಂದರೆಯಿಲ್ಲದೆ ಟಿಪ್ಪು ಜಯಂತಿ ಆಚರಿಸಲಾಗುತ್ತಿತ್ತು. ಈಗ ಅದನ್ನು ರದ್ದತಿಗೊಳಿಸಿ ಸರಕಾರ ತಪ್ಪು ಮಾಡಿದೆ ಎಂದು ಜಮೀರ್ ಬೇಸರ ವ್ಯಕ್ತಪಡಿಸಿದರು.
ಇನ್ಮೇಲೆ ಟಿಪ್ಪು ಜಯಂತಿ ಇಲ್ಲ! ಬಿಜೆಪಿ ಸರ್ಕಾರದ ಮಹತ್ವದ ನಿರ್ಣಯ
ಇನ್ನು ಮುಂದೆ ಟಿಪ್ಪು ಜಯಂತಿಯನ್ನು ಇನ್ನೂ ಅದ್ದೂರಿಯಾಗಿ ನಾವು ಆಚರಿಸಲಿದ್ದೇವೆ. ಆಗಿದ್ದಾಗಲಿ, ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಜಮೀರ್, ಸರಕಾರಕ್ಕೆ ಸವಾಲೆಸೆದರು.
ಟಿಪ್ಪು ಜಯಂತಿ ರದ್ದತಿ ವಿಚಾರದಲ್ಲಿ, ಕೆಲವು ದಿನಗಳ ಹಿಂದೆ ಬಿಜೆಪಿಗೆ ಸೇರಿರುವ ರೋಷನ್ ಬೇಗ್ ಅವರ ಅಭಿಪ್ರಾಯವನ್ನೂ ಕೇಳಿ ಎಂದು ಜಮೀರ್ ವ್ಯಂಗ್ಯವಾಡಿದರು.
ಸರಕಾರದ ನಿರ್ಧಾರದಿಂದ ಇನ್ನೂ ವಿಜ್ರುಂಭಣೆಯಿಂದ ಜಯಂತಿ ಆಚರಿಸಲು, ನಾವು ಉತ್ಸುಕರಾಗಿದ್ದೇವೆ. ಇದಕ್ಕೆ ಸರಕಾರ ಅಡ್ಡಗೋಲು ಹಾಕಲು ಸಾಧ್ಯವಿಲ್ಲ ಎಂದು ಜಮೀರ್ ಹೇಳಿದರು.
ಟಿಪ್ಪು ಜಯಂತಿ ಪ್ರತಿ ವರ್ಷ ನಡೆಯುತ್ತೆ: ಕುಮಾರಸ್ವಾಮಿ ಸ್ಪಷ್ಟನೆ
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ನಾಲ್ಕೇ ದಿನಗಳಲ್ಲಿ ಯಡಿಯೂರಪ್ಪ ಸರಕಾರ, ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಟಿಪ್ಪು ಜಯಂತಿ ಆಚರಿಸದೇ ಇರಲು ನಿರ್ಧರಿಸಿದೆ.