ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ದಾರಿಗಳ್ಳರಿಂದ?

ಐಎಎಸ್ ಅಧಿಕಾರಿ ಅನುರಾಗ್ ತಿವಾರಿಯವರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಸರ್ಕಾರದ ಎಸಿಬಿ ಅಧಿಕಾರಿಗಳ ತಂಡ ದಾರಿಗಳ್ಳರಿಂದ ಅವರ ಕೊಲೆಯಾಗಿರಬಹುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆಂದು ಮೂಲಗಳು ತಿಳಿಸಿವೆ.

By ಒನ್ ಇಂಡಿಯಾ ನ್ಯೂಸ್ ಡೆಸ್ಕ್
|
Google Oneindia Kannada News

ಲಕ್ನೋ, ಜೂನ್ 5: ಕರ್ನಾಟಕ ರಾಜ್ಯ ಆಹಾರ ಇಲಾಖೆಯ ಆಯುಕ್ತರಾಗಿದ್ದ ಅನುರಾಗ್ ತಿವಾರಿಯವರ ಸಾವಿಗೆ ಮತ್ತೊಂದು ತಿರುವು ಸಿಕ್ಕಿದೆ.

ಮೊದಲಿಗೆ ಹೃದಯಾಘಾತದ ಸಾವು ಎಂದು ಭಾವಿಸಲ್ಪಟ್ಟಿದ್ದ ತಿವಾರಿಯವರ ಪ್ರಕರಣವು ಆನಂತರ ಕೊಲೆ ಕೇಸ್ ಎಂಬ ಹಣೆಪಟ್ಟಿ ಕಟ್ಟಿಕೊಂಡಿತು.[ಅನುರಾಗ್ ತಿವಾರಿ ಅವರು ಸತ್ತಿದ್ದು ಉಸಿರುಗಟ್ಟಿದ್ದರಿಂದ!]

Anurag Tiwari

ಇದರ ಜಾಡಿನ ಬೆನ್ನು ಹತ್ತಿದ ಉತ್ತರ ಪ್ರದೇಶದ ವಿಶೇಷ ತನಿಖಾ ದಳ (ಎಸಿಬಿ) ಅಧಿಕಾರಿಗಳು ತಿವಾರಿಯವರ ಸಾವು ದಾರಿಗಳ್ಳರಿಂದ ಆಗಿದೆ ಎಂಬ ನಿಲುವಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.[ಆಯುಕ್ತ ಅನುರಾಗ್ ತಿವಾರಿ ಸಾವು; ಏನು ಹೇಳ್ತಾರೆ ಪೊಲೀಸರು?]

ಅನುರಾಗ್ ತಿವಾರಿಯವರು ಶವವಾಗಿ ಸಿಕ್ಕ ಹಿಂದಿನ ದಿನ ರಾತ್ರಿ ಅವರ ರೆಸ್ಟೋರೆಂಟ್ ಒಂದರಲ್ಲಿ ಊಟ ಮುಗಿಸಿಕೊಂಡು ಹೊರಬಂದ ನಂತರ ದಾರಿಗಳ್ಳರು ಅವರ ದರೋಡೆಗೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಕಳ್ಳರು ಹಾಗೂ ತಿವಾರಿ ನಡುವೆ ನಡೆದ ಘರ್ಷಣೆ ವೇಳೆ ತಿವಾರಿ ಮೇಲೆ ಕಳ್ಳರು ಹಲ್ಲೆ ನಡೆಸಿರಬಹುದು. ಹಾಗಾಗಿ, ಅವರ ಸಾವಾಗಿದೆ ಎಂಬ ನಿರ್ಧಾರಕ್ಕೆ ತನಿಖಾಧಿಕಾರಿಗಳು ಬಂದಿದ್ದಾರೆನ್ನಲಾಗಿದೆ.

English summary
The ACB officers who were investigating the death row of Anurag Tiwari, have come to a conclusion as he might have killed by road robbers said the sources. Tiwari was serving as commissioner in Food and Civil Supply department of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X