ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ದಾರಿಗಳ್ಳರಿಂದ?
ಐಎಎಸ್ ಅಧಿಕಾರಿ ಅನುರಾಗ್ ತಿವಾರಿಯವರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಸರ್ಕಾರದ ಎಸಿಬಿ ಅಧಿಕಾರಿಗಳ ತಂಡ ದಾರಿಗಳ್ಳರಿಂದ ಅವರ ಕೊಲೆಯಾಗಿರಬಹುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆಂದು ಮೂಲಗಳು ತಿಳಿಸಿವೆ.
ಲಕ್ನೋ, ಜೂನ್ 5: ಕರ್ನಾಟಕ ರಾಜ್ಯ ಆಹಾರ ಇಲಾಖೆಯ ಆಯುಕ್ತರಾಗಿದ್ದ ಅನುರಾಗ್ ತಿವಾರಿಯವರ ಸಾವಿಗೆ ಮತ್ತೊಂದು ತಿರುವು ಸಿಕ್ಕಿದೆ.
ಮೊದಲಿಗೆ ಹೃದಯಾಘಾತದ ಸಾವು ಎಂದು ಭಾವಿಸಲ್ಪಟ್ಟಿದ್ದ ತಿವಾರಿಯವರ ಪ್ರಕರಣವು ಆನಂತರ ಕೊಲೆ ಕೇಸ್ ಎಂಬ ಹಣೆಪಟ್ಟಿ ಕಟ್ಟಿಕೊಂಡಿತು.[ಅನುರಾಗ್ ತಿವಾರಿ ಅವರು ಸತ್ತಿದ್ದು ಉಸಿರುಗಟ್ಟಿದ್ದರಿಂದ!]
ಇದರ ಜಾಡಿನ ಬೆನ್ನು ಹತ್ತಿದ ಉತ್ತರ ಪ್ರದೇಶದ ವಿಶೇಷ ತನಿಖಾ ದಳ (ಎಸಿಬಿ) ಅಧಿಕಾರಿಗಳು ತಿವಾರಿಯವರ ಸಾವು ದಾರಿಗಳ್ಳರಿಂದ ಆಗಿದೆ ಎಂಬ ನಿಲುವಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.[ಆಯುಕ್ತ ಅನುರಾಗ್ ತಿವಾರಿ ಸಾವು; ಏನು ಹೇಳ್ತಾರೆ ಪೊಲೀಸರು?]
ಅನುರಾಗ್ ತಿವಾರಿಯವರು ಶವವಾಗಿ ಸಿಕ್ಕ ಹಿಂದಿನ ದಿನ ರಾತ್ರಿ ಅವರ ರೆಸ್ಟೋರೆಂಟ್ ಒಂದರಲ್ಲಿ ಊಟ ಮುಗಿಸಿಕೊಂಡು ಹೊರಬಂದ ನಂತರ ದಾರಿಗಳ್ಳರು ಅವರ ದರೋಡೆಗೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಕಳ್ಳರು ಹಾಗೂ ತಿವಾರಿ ನಡುವೆ ನಡೆದ ಘರ್ಷಣೆ ವೇಳೆ ತಿವಾರಿ ಮೇಲೆ ಕಳ್ಳರು ಹಲ್ಲೆ ನಡೆಸಿರಬಹುದು. ಹಾಗಾಗಿ, ಅವರ ಸಾವಾಗಿದೆ ಎಂಬ ನಿರ್ಧಾರಕ್ಕೆ ತನಿಖಾಧಿಕಾರಿಗಳು ಬಂದಿದ್ದಾರೆನ್ನಲಾಗಿದೆ.