ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹ: ಯಡಿಯೂರಪ್ಪ ಜೊತೆ ಜಂಟಿ ವೈಮಾನಿಕ ಸಮೀಕ್ಷೆ ನಡೆಸಿದ ಶಾ

|
Google Oneindia Kannada News

ಬೆಳಗಾವಿ, ಆಗಸ್ಟ್ 11: ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕದಲ್ಲಿ ಪ್ರವಾಹ ತಲೆದೂರಿದ್ದು, ನೆರೆ ವೀಕ್ಷಣೆಗೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಇಂದು ಆಗಮಿಸಿದ್ದಾರೆ.

In Pics: ಕರ್ನಾಟಕದಲ್ಲಿ ಮಹಾ ಮಳೆ

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ಸಿಎಂ ಯಡಿಯೂರಪ್ಪ, ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ, ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರು ಬರಮಾಡಿಕೊಂಡರು.

ದೆಹಲಿಯಲ್ಲಿ ಅಮಿತ್ ಶಾ ಅದೇನು ಸೂಚನೆ ಕೊಟ್ಟರೋ. 76ರ ಬಿಎಸ್ವೈ, ಇನ್ ಫುಲ್ ಸ್ವಿಂಗ್ದೆಹಲಿಯಲ್ಲಿ ಅಮಿತ್ ಶಾ ಅದೇನು ಸೂಚನೆ ಕೊಟ್ಟರೋ. 76ರ ಬಿಎಸ್ವೈ, ಇನ್ ಫುಲ್ ಸ್ವಿಂಗ್

ಕೇಂದ್ರ ಗೃಹ ಸಚಿವರಿಂದ ಪ್ರವಾಹ ಬಾಧಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಅಮಿತ್ ಶಾ ಅವರು ನಂತರ ರಾಜ್ಯದ ಹಿರಿಯ ಅಧಿಕಾರಿಗಳ ಜತೆಗೆ ವಿಮಾನ ನಿಲ್ದಾಣದ ಸಭಾ ಭವನದಲ್ಲಿ ಸಭೆ ನಡೆಸಿದರು.

Amit Shah aerial survey of flood situation in North Karnataka

ಅಮಿತ್ ಶಾ ಹಾಗೂ ಸಿಎಂ ಯಡಿಯೂರಪ್ಪ ಅವರು ಜಂಟಿಯಾಗಿ ಪ್ರವಾಹದ ವೈಮಾನಿಕ ಸಮೀಕ್ಷೆ ನಡೆಸಿದರು. ಈ ಸಮಯ ಸಚಿವರ ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ ಹಾಗೂ ಪ್ರಮುಖ ಅಧಿಕಾರಿಗಳೂ ಹಾಜರಿದ್ದರು. ಅಮಿತ್ ಶಾ ಅವರು ಬೆಳಗಾವಿ ಸೇರಿದಂತೆ, ಬಾಗಲಕೋಟೆ ಇನ್ನೂ ಕೆಲವು ಕಡೆಗಳಲ್ಲಿ ನೆರೆ ಪರಿಸ್ಥಿತಿಯನ್ನು ವೀಕ್ಷಿಸಿದರು.

Amit Shah aerial survey of flood situation in North Karnataka

ಆಗ ರಾಜ್ಯದ ನೆರವಿಗೆ ಬಂದಿದ್ದರು ಮನಮೋಹನ್ ಸಿಂಗ್: ಈಗ ಮೋದಿ ಎಲ್ಲಿದ್ದಾರೆ?ಆಗ ರಾಜ್ಯದ ನೆರವಿಗೆ ಬಂದಿದ್ದರು ಮನಮೋಹನ್ ಸಿಂಗ್: ಈಗ ಮೋದಿ ಎಲ್ಲಿದ್ದಾರೆ?

ಪ್ರವಾಹದಿಂದ ಈಗಾಗಲೇ 20,000 ಕೋಟಿಗೂ ಹೆಚ್ಚು ಹಾನಿ ಆಗಿದೆ. ಹಾಗಾಗಿ ಕೇಂದ್ರದಿಂದ ಹೆಚ್ಚಿನ ನೆರವಿನ ನಿರೀಕ್ಷೆ ರಾಜ್ಯಕ್ಕೆ ಇದೆ.

English summary
Home minister Amit Shah did aerial survey of flood situation with CM Yeddyurappa in North Karnataka. State expecting bigger help from central government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X