ಚುನಾವಣೆ ನಂತರ ಬಿಜೆಪಿ ಪಾಲಿಗೆ ಐಟಿ, ಸಿಬಿಐ ಮುಗಿದ ಅಧ್ಯಾಯ: ಕಾಂಗ್ರೆಸ್
Recommended Video
ಬೆಂಗಳೂರು, ಏ 23: ಒಂದು ಕಡೆ ಮೇ 23ರ ನಂತರ ಮೋದಿ ಪೆಟ್ರೋಲ್ ಬೆಲೆಯನ್ನು ಗಣನೀಯವಾಗಿ ಜಾಸ್ತಿ ಮಾಡಲಿದ್ದಾರೆ ಎನ್ನುವ ಹತಾಶೆಯ ಹೇಳಿಕೆಯನ್ನು ನೀಡುವ ಕಾಂಗ್ರೆಸ್, ಇನ್ನೊಂದು ಕಡೆ, ಲೋಕಸಭಾ ಚುನಾವಣೆಯ ನಂತರ ಬಿಜೆಪಿ ವಿರೋಧ ಪಕ್ಷವಾಗಲಿದೆ ಎನ್ನುವ ಭರವಸೆಯ ಮಾತನ್ನಾಡುತ್ತಿದೆ.
ರಾಜ್ಯದ ಎರಡನೇ ಮತ್ತು ಕೊನೆಯ ಹಂತದ ಮತದಾನ ಮುಗಿದ ಬೆನ್ನಲ್ಲೇ ಕೆಪಿಸಿಸಿ, ಚುನಾವಣೆಯ ನಂತರ ಬಿಜೆಪಿಯದ್ದು ಏನೂ ನಡೆಯುವುದಿಲ್ಲ ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದೆ.
ನಿನ್ನೆ ರಾತ್ರಿ ಯಶವಂತಪುರ ರೈಲ್ವೆನಿಲ್ದಾಣದಲ್ಲಿ ಮೋದಿ ಅಭಿಮಾನಿಗಳು ಮಾಡಿದ್ದೇನು?
ರಮೇಶ್ ಜಾರಕಿಹೊಳಿ ಕಾಂಗ್ರೆಸ್ ತೊರೆಯುವ ಸಂಕೇತವನ್ನು ನೀಡಿದ ನಂತರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡಾ, ಬಿಜೆಪಿ ವಿರುದ್ದ ಕಿಡಿಕಾರಿದ್ದರು. ಅತ್ತ, ಮುಖ್ಯಮಂತ್ರಿ ಕೂಡಾ ಉಡುಪಿ ಕಡಲ ಕಿನಾರೆಯಲ್ಲಿನ ಪ್ರಾಕೃತಿಕ ಚಿಕಿತ್ಸೆಯನ್ನು ಮೊಟಕುಗೊಳಿಸಿ, ಜಾರಕಿಹೊಳಿ ರಾಜೀನಾಮೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಟ್ವೀಟ್ ಮಾಡಿ, ಚುನಾವಣೆ ನಂತರ ಬಿಜೆಪಿ ಪಾಲಿಗೆ ಐಟಿ, ಸಿಬಿಐ, ಇಡಿ ಮೂಲಕ ಬ್ಲಾಕ್ಮೇಲ್ ಮಾಡುವುದು ಮುಗಿದ ಅಧ್ಯಾಯವಾಗಲಿದೆ ಎಂದು ಹೇಳಿದೆ.
ಚುನಾವಣೆ ನಂತರ ಬಿಜೆಪಿ ಪಾಲಿಗೆ ಐಟಿ, ಸಿಬಿಐ, ಇಡಿ ಮೂಲಕ ಬ್ಲಾಕ್ಮೇಲ್ ಮಾಡುವುದು ಮುಗಿದ ಅಧ್ಯಾಯವಾಗಲಿದೆ.
— Karnataka Congress (@INCKarnataka) April 23, 2019
ಬಿಜೆಪಿಯವರಿಗೆ ಮತ್ತೊಮ್ಮೆ ಭ್ರಮನಿರಸನವಾಗಲಿದೆ. #ಆಪರೇಷನ್_ಕಮಲ ಅವರಿಗೆ ತಿರುಗುಬಾಣವಾಗುತ್ತದೆ.
ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧವಾಗಿದ್ದಾರೆ.
ನಮ್ಮ ಮೈತ್ರಿ ಸರಕಾರ ಸುಭದ್ರವಾಗೇ ಇರುತ್ತದೆ.@dineshgrao
ಜೊತೆಗೆ, ಬಿಜೆಪಿಯವರಿಗೆ ಮತ್ತೊಮ್ಮೆ ಭ್ರಮನಿರಸನವಾಗಲಿದೆ. #ಆಪರೇಷನ್_ಕಮಲ ಅವರಿಗೆ ತಿರುಗುಬಾಣವಾಗುತ್ತದೆ. ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧವಾಗಿದ್ದಾರೆ. ನಮ್ಮ ಮೈತ್ರಿ ಸರಕಾರ ಸುಭದ್ರವಾಗೇ ಇರುತ್ತದೆ ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.
ಕೊನೇಮಾತು: ಲೋಕಸಭಾ ಚುನಾವಣೆಯ ಬಿಡುವಿಲ್ಲದ ಪ್ರಚಾರದ ಒತ್ತಡದಿಂದ, ಕನಿಷ್ಠ ಪಕ್ಷ ಮೇ 23ರವರೆಗಾದರೂ, ನಮ್ಮ ರಾಜಕಾರಣಿಗಳು ಸುಮ್ಮನೇ ವಿಶ್ರಾಂತಿ ತೆಗೆದುಕೊಳ್ಳಬಹುದು ಅಂದುಕೊಂಡರೆ, ಅದಕ್ಕಿಂತ ದೊಡ್ಡ ಮುಠಾಳತನ ಇನ್ನೊಂದಿಲ್ಲ.