ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಮಿಡಿಯುತ್ತಿದೆ ಎಡಿಜಿಪಿ ಭಾಸ್ಕರ್ ರಾವ್ ಟ್ವೀಟಿಸಿದ್ದ ಅದ್ಭುತ ಭಾವಚಿತ್ರ!

|
Google Oneindia Kannada News

ಬೆಂಗಳೂರು, ಸೆ.25: ಪೊಲೀಸರಿಗೆ ಭಾವನೆಗಳೇ ಇರುವುದಿಲ್ಲ ಎಂದು ದೂರುವವರಿದ್ದಾರೆ. ಹಲವು ನಿದರ್ಶನಗಳೂ ಇರಬಹುದು. ಆದರೆ ಪೊಲೀಸರಲ್ಲಿ ಸಹೃದಯತೆ, ಮಾನವೀಯತೆ ಹಾಸು ಹೊಕ್ಕಾಗಿರುತ್ತದೆ. ಅದಕ್ಕೂ ಒಂದು ನಿದರ್ಶನ ಇಲ್ಲಿದೆ.

ವಿಷಯ ಇಷ್ಟೇ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಗಳ ರಾಜ್ಯ ಹೆಚ್ಚವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಅವರು ಹೊಸದಾಗಿ ಪೊಲೀಸ್ ಸೇವೆಗೆ ಸೇರಿದ ಸಬ್ ಇನ್ ಸ್ಪೆಕ್ಟರ್ ಒಬ್ಬರು ತಮ್ಮ ತಾಯಿಯ ಕಾಲಿಗೆ ಎರಗಿ ಆಶೀರ್ವಾದ ಪಡೆಯುತ್ತಿರುವ ಭಾವಚಿತ್ರವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರಿ ಪ್ರಶಂಸೆಗೆ ಪಾತ್ರವಾಗಿದೆ.

ಮಂಗಳೂರಿನಲ್ಲಿ ನಡುರಸ್ತೆಯಲ್ಲಿ ಕುಡಿದು ತೂರಾಡಿದ ಟ್ರಾಫಿಕ್ ಪೊಲೀಸ್ ಅಮಾನತು ಮಂಗಳೂರಿನಲ್ಲಿ ನಡುರಸ್ತೆಯಲ್ಲಿ ಕುಡಿದು ತೂರಾಡಿದ ಟ್ರಾಫಿಕ್ ಪೊಲೀಸ್ ಅಮಾನತು

ನಿರ್ಗಮನ ಪಥಸಂಚಲನಕ್ಕೆ ಬರಲು ಸಾಧ್ಯವಾಗದ ತಾಯಿಯನ್ನು ಕಾಣಲು ಬಂದ ಸಬ್‌ ಇನ್‌ಸ್ಪೆಕ್ಟರ್, ಆಕೆ ಕೆಲಸ ಮಾಡುತ್ತಿದ್ದ ಹೊಲಕ್ಕೆ ತೆರಳಿ ಗೌರವ ಮತ್ತು ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಭಾಸ್ಕರ್ ರಾವ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ADGP Bhaskar Rao gets applause in social media too

ಮಕ್ಕಳಿಗೆ ಓದಿನ ಕಿಚ್ಚು ಹಚ್ಚುತ್ತಿರುವ ಪೊಲೀಸಮ್ಮನ ಕಥೆ ಓದಿ! ಮಕ್ಕಳಿಗೆ ಓದಿನ ಕಿಚ್ಚು ಹಚ್ಚುತ್ತಿರುವ ಪೊಲೀಸಮ್ಮನ ಕಥೆ ಓದಿ!

ಈ ಚಿತ್ರ ಹಲವಾರು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇದು ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎಂದು ಕೆಲವರು ಹೇಳಿದ್ದರೆ, ಇನ್ನು ಕೆಲವರು ಮಾತೃದೇವೋಭವ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾವು ಯಾವ ಹಂತಕ್ಕೆ ಹೋದರು ಕೂಡ ತಂದೆ-ತಾಯಿಯನ್ನು ಗೌರವಿಸುವುದನ್ನು ಮರೆಯಬಾರದು ಅದು ನಮ್ಮ ಸಂಸ್ಕೃತಿ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

English summary
KSRP ADGP Bhaskar Rao has good name for his duties and dedication throughout his career. Now one of his post in his tweeter has received appreciation from general public. What is in behind this post? Here is the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X