ನಟಿ ಪೂಜಾ ಗಾಂಧಿ ಬಿಜೆಪಿಗೆ, ಕೆಲವು ನಾಯಕರ ವಿರೋಧ!
ಬೆಂಗಳೂರು ಮಾರ್ಚ್ 22 : 'ಮುಂಗಾರು ಮಳೆ' ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದ ಪೂಜಾ ಗಾಂಧಿ ಬಿಜೆಪಿ ಸೇರಲು ಪ್ರಯತ್ನ ನಡೆಸಿದ್ದಾರೆ. ಪೂಜಾ ಗಾಂಧಿ ಸೇರ್ಪಡೆ ವಿಚಾರ ಹೈಕಮಾಂಡ್ ಅಂಗಳಕ್ಕೆ ತಲುಪಿದೆ.
ನಟಿ ಪೂಜಾ ಗಾಂಧಿ ಬಿಜೆಪಿ ಸೇರುವುದಕ್ಕೆ ಕೆಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮುಂದೆ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ: ಪೂಜಾ ಗಾಂಧಿ ಖುಲಾಸೆ
ಅಂತಿಮವಾಗಿ ಪೂಜಾ ಗಾಂಧಿ ಬಿಜೆಪಿ ಸೇರ್ಪಡೆ ವಿಚಾರ ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಅವರ ಮುಂದೆ ಹೋಗಿದೆ. ಅವರು ಹೈಕಮಾಂಡ್ ನಾಯಕರ ಗಮನಕ್ಕೆ ಈ ವಿಚಾರವನ್ನು ತಂದಿದ್ದಾರೆ.
ರಾಜ್ಯದ ನಾಯಕರು ಅಸಮಾಧಾನಗೊಂಡಿರುವ ನಾಯಕರನ್ನು ಸಮಾಧಾನ ಪಡಿಸಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಹೈಕಮಾಂಡ್ ನಾಯಕರು ಪೂಜಾ ಗಾಂಧಿ ಪಕ್ಷ ಸೇರ್ಪಡೆ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ.
ಚುನಾವಣೆ ಹಿನ್ನೋಟ: ಮಿನುಗಿದ ಹಾಗೂ ಮಂಕಾದ ತಾರೆಗಳು
ಪೂಜಾ ಗಾಂಧಿ ಮೊದಲು ಜೆಡಿಎಸ್ ಪಕ್ಷ ಸೇರಿದ್ದರು. ನಂತರ ಬಿ.ಎಸ್.ಯಡಿಯೂರಪ್ಪ ಅವರು ಕೆಜೆಪಿ ಸ್ಥಾಪನೆ ಮಾಡಿದ ಮೇಲೆ ಕೆಜೆಪಿ ಸೇರಿದ್ದರು. ಅಲ್ಲಿಯೂ ಹೆಚ್ಚು ಕಾಲ ಇರದೇ, ಬಿ.ಶ್ರೀರಾಮುಲು ಅವರು ಸ್ಥಾಪಿಸಿದ್ದ ಬಿ.ಎಸ್.ಆರ್.ಕಾಂಗ್ರೆಸ್ ಪಕ್ಷ ಸೇರಿದ್ದರು.
2013ರ ಚುನಾವಣೆಯಲ್ಲಿ ಬಿ.ಎಸ್.ಆರ್.ಕಾಂಗ್ರೆಸ್ ಪಕ್ಷದಿಂದ ರಾಯಚೂರು ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 1815 ಮತಗಳನ್ನು ಪಡೆದು ಸೋಲು ಕಂಡಿದ್ದರು. ಈಗ ಬಿಜೆಪಿಯತ್ತ ಮುಖ ಮಾಡಿದ್ದಾರೆ.
ಅಂದಹಾಗೆ ಪೂಜಾ ಗಾಂಧಿ ಅವರು ನಟಿಸಿ ಕೊನೆಯ ಕನ್ನಡ ಸಿನಿಮಾ ದಂಡುಪಾಳ್ಯ - 3.