ವಸತಿ ಶಾಲೆ ಲೈಂಗಿಕ ಕಿರುಕುಳ, ವರದಿ ಕೇಳಿದ ಸಿಎಂ
ಬಿಜಾಪುರ, ಆ.22 : ಬಿಜಾಪುರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಿಬ್ಬಂದಿಗಳನ್ನು ತಕ್ಷಣ ಬದಲಾವಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನೆ ಬಗ್ಗೆ ವರದಿ ಕೇಳಿದ್ದು, ಸಮಾಜ ಕಲ್ಯಾಣ ಸಚಿವರು ಸ್ಥಳಕ್ಕೆ ತೆರಳಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ವಸತಿ
ಶಾಲೆಯ
ಅಡುಗೆ
ಸಹಾಯಕ
ವಿಜಯಕುಮಾರ್
ಎಂಟಮಾನೆ
ವಿದ್ಯಾರ್ಥಿಗಳಿಗೆ
ಲೈಂಗಿಕ
ಕಿರುಕುಳ
ನೀಡಿದ
ಘಟನೆ
ಬೆಳಕಿಗೆ
ಬಂದ
ನಂತರ
ಜಲಸಂಪನ್ಮೂಲ
ಮತ್ತು
ಬಿಜಾಪುರ
ಜಿಲ್ಲಾ
ಉಸ್ತುವಾರಿ
ಸಚಿವ
ಎಂ.ಬಿ.ಪಾಟೀಲ್
ಗುರುವಾರ
ವಸತಿ
ಶಾಲೆಗೆ
ಭೇಟಿ
ನೀಡಿದ್ದರು.
ಶಾಲೆಯ
ಸಿಬ್ಬಂದಿಗಳನ್ನು
ತಕ್ಷಣ
ಬದಲಾವಣೆ
ಮಾಡಲಾಗುತ್ತದೆ
ಮತ್ತು
ತಪ್ಪಿತಸ್ಥ
ನೌಕರರ
ವಿರುದ್ಧ
ಕಠಿಣ
ಕ್ರಮ
ಕೈಗೊಳ್ಳಲಾಗುತ್ತದೆ
ಎಂದು
ಭರವಸೆ
ನೀಡಿದರು.
ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಕುಮಾರ್ ಮತ್ತು ಶಾಲೆಯ ವಾರ್ಡನ್ ಶೋಭಾ ಮತ್ತು ಜ್ಯೋತಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಸಚಿವರು ಹೇಳಿದರು. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ವರದಿ ಕೇಳಲಾಗಿದೆ ಎಂದರು. [ಚೆನ್ನಮ್ಮ ಶಾಲೆಯಲ್ಲಿ ಅಡುಗೆ ಭಟ್ಟನ ಲೈಂಗಿಕ ದೌರ್ಜನ್ಯ]
ಜಿಲ್ಲೆಯ ಮಕ್ಕಳ ಸಹಾಯವಾಣಿ ಅಧಿಕಾರಿಗಳು ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಸಾಂತ್ವನ ಹೇಳಿದ್ದಾರೆ. ಅಗತ್ಯವಾದಲ್ಲಿ ಕೌನ್ಸಿಲಿಂಗ್ ನಡೆಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. ಗುರುವಾರ ಹಲವು ಪೋಷಕರು ಶಾಲೆಯಿಂದ ಮಕ್ಕಳನ್ನು ವಾಪಸ್ ಕರೆದುಕೊಂಡು ಹೋಗಿರುವ ಪ್ರಕರಣಗಳು ವರದಿಯಾಗಿವೆ.
ವರದಿ ಕೇಳಿದ ಸಿಎಂ : ವಸತಿ ಶಾಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿದ್ದು,ಈ ಬಗ್ಗೆ ವರದಿ ನೀಡುವಂತೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರಿಗೆ ಸೂಚನೆ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ.
ಬಿಜಾಪುರದ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಲ್ಲಿ ಅಡುಗೆ ಸಹಾಯಕ ವಿಜಯಕುಮಾರ್ ಶಾಲೆಯ ಸುಮಾರು 56 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬುಧವಾರ ಬೆಳಕಿಗೆ ಬಂದಿತ್ತು. ಇದನ್ನು ಖಂಡಿಸಿ ಗುರುವಾರ ಅಲಮೇಲ್ ಬಂದ್ ನಡೆಸಲಾಗಿತ್ತು.