ಮದನಿಗೆ ಜಾಮೀನು ವಿಸ್ತರಣೆ, ಕೇರಳಕ್ಕೆ ಹೋಗುವಂತಿಲ್ಲ
ಬೆಂಗಳೂರು, ಸೆ. 26 : 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಆರೋಪಿ ಅಬ್ದುಲ್ ನಾಸಿರ್ ಮದನಿ ಜಾಮೀನು ಅವಧಿಯನ್ನು ಒಂದು ತಿಂಗಳು ವಿಸ್ತರಣೆ ಮಾಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಆದರೆ, ಕೇರಳಕ್ಕೆ ಭೇಟಿ ನೀಡಲ ಅವಕಾಶ ಮಾಡಿಕೊಡಬೇಕು ಎಂಬ ಮದನಿ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಜು.11ರಂದು
ಪೀಪಲ್ಸ್
ಡೆಮಾಕ್ರೆಟಿಕ್
ಪಾರ್ಟಿ
ಸ್ಥಾಪಕ
ಅಬ್ದುಲ್
ನಾಸಿರ್
ಮದನಿಗೆ
ಸುಪ್ರೀಂಕೋರ್ಟ್
ಜಾಮೀನು
ನೀಡಿತ್ತು.
ನಂತರ
ಆ.23ರಂದು
ಅದನ್ನು
ಪುನಃ
ನಾಲ್ಕು
ವಾರಗಳ
ಕಾಲ
ವಿಸ್ತರಣೆ
ಮಾಡಿತ್ತು.
ಸದ್ಯ,
ಶುಕ್ರವಾರ
ಅರ್ಜಿಯ
ವಿಚಾರಣೆ
ನಡೆಸಿದ
ಕೋರ್ಟ್
ಪುನಃ
ಒಂದು
ತಿಂಗಳು
ಜಾಮೀನು
ಅವಧಿಯನ್ನು
ವಿಸ್ತರಣೆ
ಮಾಡಿ
ಆದೇಶ
ನೀಡಿದೆ.[ಅಬ್ದುಲ್
ನಾಸಿರ್
ಮದನಿಗೆ
ಜಾಮೀನು]
ಶುಕ್ರವಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಮದನಿ ಪರ ವಕೀಲರು ಕೇರಳಕ್ಕೆ ತೆರಳಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಆದರೆ, ಈ ಮನವಿಯನ್ನು ಕೋರ್ಟ್ ತಳ್ಳಿಹಾಕಿದೆ. ಒಂದು ವೇಳೆ ಪ್ರಕರಣದ ಸಾಕ್ಷಿಗಳ ಜೊತೆ ಮದನಿ ಮಾತುಕತೆ ನಡೆಸುವುದು ತಿಳಿದುಬಂದರೆ, ತಕ್ಷಣದಿಂದಲೇ ಜಾಮೀನು ಅರ್ಜಿ ವಜಾಗೊಳ್ಳುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.[ಮದನಿ ಮೇಲಿನ ಆರೋಪಗಳೇನು?]
2008ರ ಜುಲೈ 25ರಂದು ಬೆಂಗಳೂರಿನಲ್ಲಿ ಸಂಭವಿಸಿದ ಸರಣಿ ಸ್ಫೋಟದ ರೂವಾರಿಯಾದ ಅಬ್ದುಲ್ ನಾಸಿರ್ ಮದನಿ 2010ರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಮದನಿ ಮೇಲೆ ಉಗ್ರ ಚಟುವಟಿಕೆ, ಕೊಲೆ ಯತ್ನ ಮುಂತಾದ ಆರೋಪಗಳಿವೆ. ಅಂಧತ್ವ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಮದನಿಗೆ ಖಾಸಗಿ ಆಸ್ಪತ್ರೆಯಲ್ಲಿ ಕರ್ನಾಟಕ ಸರ್ಕಾರ ಚಿಕಿತ್ಸೆ ಕೊಡಿಸಿದೆ. [ಮದನಿ ಯಾರು, ಆತನ ಪ್ರತಾಪಗಳೇನು?]