ಸ್ವಾತಂತ್ರ್ಯ ದಿನಾಚರಣೆ : 93 ಖೈದಿಗಳಿಗೆ ಬಿಡುಗಡೆ ಭಾಗ್ಯ
ಬೆಂಗಳೂರು, ಆಗಸ್ಟ್ 10 : ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ರಾಜ್ಯದ ವಿವಿಧ ಜೈಲುಗಳಿಂದ 93 ಖೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಗುರುವಾರ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಸಚಿವ ಬಂಡೆಪ್ಪ ಕಾಶೆಂಪುರ ಅವರು ಸಭೆಯ ತೀರ್ಮಾನವನ್ನು ಮಾಧ್ಯಮಗಳಿಗೆ ತಿಳಿಸಿದರು.
ಮೈತ್ರಿ ಸರ್ಕಾರದ ಪ್ರಥಮ ಸಂಪುಟ ಸಭೆಯ ಮಹತ್ವದ ನಿರ್ಣಯಗಳು
ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಸನ್ನಡೆತೆಯ ಆಧಾರದ ಮೇಲೆ 93 ಖೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ. ರಾಜ್ಯಪಾಲರಿಗೆ ಈ ಕುರಿತು ಶಿಫಾರಸು ಮಾಡಲಾಗುತ್ತದೆ ಎಂದು ಹೇಳಿದರು.
ರೈತರ ಸಾಲ ಮನ್ನಾ ಯಾರಿಗೆ ಸಿಗುತ್ತೆ, ಯಾರಿಗೆ ಸಿಗಲ್ಲ? ಇಲ್ಲಿದೆ ವಿವರ
ಸಂಪುಟ ಸಭೆಯ ಇತರ ತೀರ್ಮಾನಗಳು
* ಕೆಎಎಸ್ ಅಧಿಕಾರಿಗಳಿಗೆ ಸೂಪರ್ ಸ್ಕೇಲ್ಗೆ ಪದೋನ್ನತಿ ನೀಡಲು ಇರುವ ಸೇವಾನುಭವ ಮಾನದಂಡವನ್ನು ಸದ್ಯದ 14 ವರ್ಷಗಳಿಂದ 13 ವರ್ಷಗಳಿಗೆ ಹಾಗೂ ಸೂಪರ್ ಟೈಂ ಸ್ಕೇಲ್ಗೆ ಪದೋನ್ನತಿ ನೀಡಲು 16 ವರ್ಷಗಳಿಂದ 15 ವರ್ಷಕ್ಕೆ ಇಳಿಕೆ ಮಾಡಲು ಒಪ್ಪಿಗೆ
* ವಸತಿ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿಗೆ 10.36 ಕೋಟಿ ವೆಚ್ಚದಲ್ಲಿ ಶೂ, ಸಾಕ್ಸ್, ಟೈ ಮತ್ತು ಬೆಲ್ಟ್ ಖರೀದಿಸಲು ಒಪ್ಪಿಗೆ.